‘ನಾತಿಚರಾಮಿ’ ಸಿನಿಮಾ ಹಾಡುಗಳ ಬಿಡುಗಡೆ

ಹರಿವು’ ಮೂಲಕ ಪರಿಚಿತರಾದ ಮಂಸೋರೆ ನಿರ್ದೇಶನದ ಎರಡನೇ ಚಿತ್ರ ಇದು. ವರ್ಷದ ಆರಂಭದಲ್ಲಿ ಮಹೂರ್ತ ಆಚರಿಸಿಕೊಂಡಿದ್ದ ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ಚಿತ್ರದ ಪ್ರಚಾರದ ಮೊದಲನೆ ಹೆಜ್ಜೆಯಾಗಿ ಹಾಡುಗಳ ಬಿಡುಗಡೆ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮಕ್ಕೆ ನಿರ್ಮಾಪಕ ಡಾ.ಕೆ.ಮಂಜು ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು.

‘ಇದೊಂದು ಹೆಣ್ಣಿನ ಭಾವನೆಗಳನ್ನು ಸೂಕ್ಷ್ಮವಾಗಿ ಹೇಳಲು ಹೊರಟಿರುವ ಸಿನಿಮಾ. ‘ಹರಿವು’ ಸಿನಿಮಾದಲ್ಲಿನ ನನ್ನ ಕೆಲಸವನ್ನು ನೋಡಿ ಮೆಚ್ಚಿಕೊಂಡ ಜಗಮೋಹನ್ ರೆಡ್ಡಿ ಮತ್ತು ಶಿವಕುಮಾರ್ ರೆಡ್ಡಿ ಅವರು ಈ ಸಿನಿಮಾಗೆ ಹಣ ಹೂಡಿದ್ದಾರೆ. ಅವರಿಗೆ ನಾನು ಆಭಾರಿಯಾಗಿದ್ದೇನೆ’ ಎಂದರು. ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕಿಯರ ಸಂಖ್ಯೆ ಬಹಳ ಕಡಿಮೆ. ಈ ಸಂದರ್ಭದಲ್ಲಿ ಮಹಿಳಾ ಸಂಗೀತ ನಿರ್ದೇಶಕಿಗೆ ಮಂಸೋರೆ ಅವಕಾಶ ಕೊಟ್ಟಿದ್ದು, ಈ ಮೂಲಕ ಬಿಂದು ಮಾಲಿನಿ ಅವರ ಸಂಗೀತ ಈ ಚಿತ್ರಕ್ಕಿದೆ.

ಈ ಬಗ್ಗೆ ಮಾತನಾಡಿದ ಬಿಂದು, ಹೆಣ್ಣಿನ ಭಾವನೆಗಳನ್ನು, ಅವಳೊಳಗೆ ನಡೆಯುವ ತುಮುಲಗಳನ್ನು ಸಂಗೀತದ ಮೂಲಕ ಹಿಡಿದಿಡುವ ಪ್ರಯತ್ನ ಮಾಡಿದ್ದೇನೆ ಎಂದರು. ನಂತರದಲ್ಲಿ ಸಿನಿಮಾದಲ್ಲಿ ಮುಖ್ಯ ಪಾತ್ರ ಮಾಡಿರುವ ಸಂಚಾರಿ ವಿಜಯ್ ಮಾತನಾಡಿ ‘ಇದೊಂದು ಮನಸ್ಸಿನ ಭಾವನೆಗಳನ್ನು ಕೆಣಕುವ ಸಿನಿಮಾ ಬಾರಿ ಈ ಸಿನಿಮಾವನ್ನು ನೋಡಿದಾಗಲೂ ನನ್ನಲ್ಲಿ ಹಲವು ಪ್ರಶ್ನೆಗಳು ಏಳುತ್ತವೆ. ಇಂತಹ ಸಿನಿಮಾದಲ್ಲಿ ಅವಕಾಶ ಕೊಟ್ಟ ನಿರ್ದೇಶಕರಿಗೆ ಶುಭಕೋರಿದರು.

This Article Has 5 Comments
  1. Pingback: Click here

  2. Pingback: Begagnade bildelar Göteborg

  3. Pingback: orlando videography

  4. Pingback: بت مجیک

  5. Pingback: instantdown games

Leave a Reply

Your email address will not be published. Required fields are marked *

Translate »
error: Content is protected !!