ವರ್ತೂರು ಸಂತೋಷ್ ಸಂಬಂಧ ಬಗ್ಗೆ ಮಾತನಾಡಿದ ತನಿಷಾ!

 ಬಿಗ್ ಬಾಸ್ ಕನ್ನಡದ 10ನೇ ಸೀಸನ್ ಸ್ಪರ್ಧೆಯಾಗಿದ್ದ ನಟಿ ತನಿಷಾ ಕುಪ್ಪಂಡ ಅವರು ತಮ್ಮ ಸಹಸ್ಪರ್ಧಿ ವರ್ತೂರು ಸಂತೋಷ್ ಜೊತೆಗಿನ ಸಂಬಂಧದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

ವರ್ತೂರು ಜೊತೆಗಿನ ಲವ್, ಕ್ರಷ್, ಮದುವೆಯ ಬಗ್ಗೆ ಮಾತನಾಡಿರುವ ತನಿಷಾ ಅವರು, ಅವರು ನನ್ನ ಟೈಪ್ ಅಲ್ಲ. ನಾನು ಅವರ ಜೊತೆ ಕಾಳಜಿ, ಸಲುಗೆಯಿಂದ ಮಾತನಾಡಿದ್ದೇನೆ. ಅವರ ಜೀವನದಲ್ಲಿ ಪ್ಲಾನಿಂಗ್ ಇದೆ. ಮದುವೆ ಯೋಚನೆ ಅವರ ಮನಸ್ಸಲ್ಲೂ ಇರಲಿಲ್ಲ. ನನಗೂ ಇರಲಿಲ್ಲ ಎಂದಿದ್ದಾರೆ.

10-15 ನಿಮಿಷ ಮಾತ್ರ ಅವರ ಜೊತೆ ಸಲುಗೆ ಇದ್ದಿದ್ದು. ಆದರೆ ಹೊರಗಡೆ ನೋಡುವವರಿಗೆ ಅದು ಜಾಸ್ತಿ ಕಾಣಿಸಿದೆ. ನಾನು ಬೇರೆಯವರ ಜೊತೆ ಸಲುಗೆ ಇಲ್ಲ, ಹಾಗಾಗಿ ವರ್ತೂರು ಜೊತೆ ಕ್ಲೋಸ್ ಆದಾಗ ಹಾಗೆ ಅನಿಸಬಹುದು ಎಂದಿದ್ದಾರೆ.

ಕಾರ್ತಿಕ್ ಜೊತೆ ಸಲುಗೆ ಇದೆ. ಆದರೆ ಅವರು ರೇಗಿಸಿದ್ರೆ ನಾನು ರೇಗಿಸಿ ಮಾತನಾಡುತ್ತೇನೆ. ಆದರೆ ವರ್ತೂರು ಸಂತೋಷ್ ಹಾಗೆ ಅಲ್ಲ. ಅವರ ಜೊತೆ ರಿವರ್ಸ್ ಆಗಿ ಮಾತನಾಡೋಕೆ ಆಗುತ್ತಿರಲಿಲ್ಲ. ಅವರು ಸ್ವಲ್ಪ ಹಾರ್ಟ್​ಗೆ ತಗೊಳ್ತಾರೆ. ಅವರು ಏನಂದುಕೊಳ್ಳುತ್ತಾರೋ ಎಂದು ಭಾವಿಸಿ ಮಾತನಾಡುತ್ತಿದ್ದೆ ಎಂದಿದ್ದಾರೆ ತನಿಷಾ.

ವರ್ತೂರು ಸಂತೋಷ್ ಅವರು ಹುಡುಗಿಯರ ಜೊತೆ ಅಷ್ಟಾಗಿ ಮಾತನಾಡಲ್ಲ. ನನ್ನ ಜೊತೆ ಸ್ವಲ್ಪ ಮಾತನಾಡುತ್ತಿದ್ದರು. ವರ್ತೂರು ಅವರು ಎಷ್ಟು ಬೇಕೋ ಅಷ್ಟೇ ಮಾತನಾಡುತ್ತಾರೆ. ಅವರ ಜೊತೆ ಸುಮ್ಮನೆ ಜೋರಾಗಿ ಮಾತನಾಡಲು ಇಷ್ಟವಾಗುವುದಿಲ್ಲ. ಅವರ ಜೊತೆ ಸಲುಗೆ ಜಾಸ್ತಿ ಇತ್ತು. ಆಚೆ ಬಂದರೆ ಮದುವೆಯಾಗುತ್ತಾರೆ. ಕ್ರಶ್ ಆಗಿದೆ. ಲವ್​ನಲ್ಲಿ ಬಿದ್ದಿದ್ದಾರಂತೆ ಎಂದು ಬಹಳಷ್ಟು ಕೇಳಿ ಬಂತು. ನನಗೆ ಅದು ಶಾಕಿಂಗ್ ಆಗಿತ್ತು. ಎಲ್ಲರೂ ಮನೆಯೊಳಗೆ ರೇಗಿಸುತ್ತಿದ್ದರು. ನಮ್ರತಾ, ಕಿಚ್ಚ ಸುದೀಪ್ ಅವರೂ ರೇಗಿಸುತ್ತಿದ್ದರು. ಅವರು ನನ್ನ ಟೈಪ್ ಅಲ್ಲ. ಅವರು ಬೇರೆಯವರನ್ನು ಮದುವೆಯಾದರೂ, ನಾನು ಬೇರೆಯವರನ್ನು ಮದುವೆಯಾದರೂ ನಮ್ಮ ಫ್ರೆಂಡ್​ಶಿಪ್ ಕಂಟಿನ್ಯೂ ಆಗಬಹುದು. ಆದರೆ ಬೇರೆ ಯೋಚನೆ ಇಬ್ಬರಲ್ಲೂ ಇಲ್ಲ ಎಂದು ಹೇಳುವ ಮೂಲಕ ತನಿಷಾ ಕುಪ್ಪಂಡ ಅವರು ಸ್ಪಷ್ಟವಾಗಿ ಮದುವೆ ಆಗುವ ವಿಚಾರವನ್ನು ತಳ್ಳಿ ಹಾಕಿದ್ದಾರೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!