‘ರವಿಕೆ ಪ್ರಸಂಗ’ OTTಗೆ

ಗೀತಾ ಭಾರತಿ ಭಟ್ ಅಭಿನಯದ ‘ರವಿಕೆ ಪ್ರಸಂಗ’ ಏಪ್ರಿಲ್ 23 ರಂದು ಪ್ರೈಮ್ ವಿಡಿಯೋದಲ್ಲಿ ತೆರೆ ಕಾಣಲಿದೆ.

ದೃಷ್ಟಿ ಮೀಡಿಯಾ ಮತ್ತು ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಚಿತ್ರವನ್ನು ಸಂತೋಷ್ ಕೊಡಂಕೇರಿ ನಿರ್ದೇಶಿಸಿದ್ದು, ಅವರ ಪತ್ನಿ ಪಾವನ ಕಥೆ, ಸಂಭಾಷಣೆ ಬರೆದಿದ್ದಾರೆ.

ಚಿತ್ರ  ‘ಬ್ರಹ್ಮಗಂಟು’ ಧಾರಾವಾಹಿ ಖ್ಯಾತಿಯ ಗೀತಾ ಭಾರತಿ ಭಟ್ ನಿರ್ವಹಿಸಿರುವ ನಾಯಕಿ ಪಾತ್ರದ ಸುತ್ತ ಸುತ್ತುತ್ತದೆ. ಗೀತಾ ಸಾನ್ವಿ ಸಂಪಾಜೆ ಎಂಬ ಅವಿವಾಹಿತ ಮಹಿಳೆ  ರವಿಕೆಯನ್ನು ಹೊಲಿಸಲು ಟೈಲರ್‌ ಬಳಿ ತೆರಳಿದಾಗ ಉಂಟಾಗುವ ತಿರುವುಗಳ ಬಗ್ಗೆ ಚಿತ್ರವು ಹೇಳುತ್ತದೆ. ಈ ಘಟನೆಗಳು ನ್ಯಾಯಾಲಯದ ಮೆಟ್ಟಿಲೇರುತ್ತವೆ. ರವಿಕೆ ವಿನ್ಯಾಸವು ತಪ್ಪಾದಾಗ ಏನಾಗುತ್ತದೆ ಎಂಬುದನ್ನು ಚಲನಚಿತ್ರವು ತೆರೆದಿಡುತ್ತದೆ.

ಚಿತ್ರದಲ್ಲಿ ಸುಮನ್ ರಂಗನಾಥ್ ನ್ಯಾಯಾಧೀಶೆಯಾಗಿ, ರಾಕೇಶ್ ಮೈಯ್ಯ ವಕೀಲರಾಗಿ, ಸಂಪತ್ ಮೈತ್ರಿಯಾ ಟೈಲರ್ ಆಗಿ, ಪದ್ಮಜಾ ರಾವ್, ಕೃಷ್ಣ ಮೂರ್ತಿ ಕಾಟಾರ್, ಪ್ರವೀಣ್ ಅಥರ್ವ, ರಘು ಪಾದೇಶ್ವರ್, ಖುಷಿ ಆಚಾರ್ ಮತ್ತು ರಾಹು ಪಾದೇಶ್ವರ್ ಮುಂತಾದವರು ನಟಿಸಿದ್ದಾರೆ.

ರವಿಕೆ ಪ್ರಸಂಗ ಚಿತ್ರಕ್ಕೆ ಮುರಳೀಧರ್ ಎನ್. ಅವರ ಛಾಯಾಗ್ರಹಣವಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!