ಫೋನಪಾಯ ಪ್ರಾಣಾಪಾಯ…!

ಚಿತ್ರ: ನೀವು ಕರೆ ಮಾಡಿದ ಚಂದಾದಾರರು

ತಾರಾಗಣ: ದಿಲೀಪ್ ರಾಜ್, ಶಿಲ್ಪಾ ಮಂಜುನಾಥ್
ನಿರ್ದೇಶನ: ಸಿ‌. ಮೋನಿಶ್
ನಿರ್ಮಾಣ: ಸನತ್ ಕುಮಾರ್
Ratings: 3.5/5

ಟ್ರೇಲರ್ ನಿಂದಲೇ ಗಮನ ಸೆಳೆದ ಚಿತ್ರ ‘ನೀವು ಕರೆ ಮಾಡಿರುವ ಚಂದಾದಾರರು’. ಇದೀಗ ಚಿತ್ರ ಕೂಡ ತೆರೆಗೆ ಬಂದಿದೆ.

ಟಿ.ವಿ ಚಾನಲ್ ಒಂದರ ಸಂದರ್ಶನದಲ್ಲಿ ಸ್ಪೆಷಲ್ ಇನ್ವೆಸ್ಟಿಗೇಷನ್ ಆಫೀಸರ್ ಮಾತನಾಡುತ್ತಾ ಹೋಗುತ್ತಾನೆ. ಆತನ ಮಾತಿನಲ್ಲಿ ಕತಟ್ಟಿ ಜಂಕ್ಷನ್ ಬಳಿ ನಡೆದ ಕೊಲೆಯೊಂದರ ಅನಾವರಣವಾಗುತ್ತಾ ಹೋಗುತ್ತದೆ. ಸಂದರ್ಶನ ಮುಗಿಯುವ ಹೊತ್ತಿಗೆ ನಿಜವಾದ ಕೊಲೆಗಾರ ಯಾರು ಎನ್ನುವುದರ ಅನಾವರಣವಾಗುತ್ತದೆ.

ಚಿತ್ರದಲ್ಲಿ ಆಫೀಸರ್ ಪಾತ್ರವನ್ನು ದಿಲೀಪ್ ರಾಜ್ ನಿರ್ವಹಿಸಿದ್ದಾರೆ. ಚಿತ್ರಕ್ಕೆ ಕತೆ, ಸಂಭಾಷಣೆ ಬರೆದಿರುವ ಕೇಶವಚಂದ್ರ ಅವರ ಮಾತುಗಳು ಕಲಾವಿದರ ಬಾಯಲ್ಲಿ ಹೆಚ್ಚು ಬುಕ್ಕಿಶ್ ಎನಿಸುತ್ತವೆ. ನಿರ್ದೇಶಕ ಮೊನೀಶ್ ಅವರ ಪ್ರಥಮ‌ ಪ್ರಯತ್ನ ಎನ್ನುವ ಕಾರಣಕ್ಕೆ ಕ್ಷಮಿಸಬಹುದೇ ಹೊರತು ಕೆಲವೊಂದು ತಾಂತ್ರಿಕ ಅಂಶಗಳಲ್ಲಿನ ವಿಫಲತೆಯನ್ನು ಕ್ಷಮಿಸಲಾಗದು. ಉದಾಹರಣೆಗೆ ಕೆಲವೇ ದಿನಗಳ ಘಟನೆಗಳ ಕತೆಯಾದರೂ ದಿಲೀಪ್ ಅವರ ಹೇರ್ ಸ್ಟೈಲ್ ಗಳಲ್ಲಿ ಪದೇ ಪದೇ ಬದಲಾವಣೆ ಗೋಚರಿಸುತ್ತದೆ. ಚಿತ್ರದ ಕೊನೆಗೆ ಸಂದೇಶವನ್ನು ಪ್ರತ್ಯೇಕವಾಗಿ ನೀತಿಪಾಠದಂತೆ ನಾಯಕನ‌ ಬಾಯಿಯಿಂದ ಸಾರಿದ್ದು ಕೂಡ ತಮಾಷೆ ಎನಿಸುತ್ತದೆ.

ನಾಯಕನಂತೆ ಪಾತ್ರಕ್ಕೆ ನ್ಯಾಯ ಒದಗಿಸಲು ದಿಲೀಪ್ ರಾಜ್ ಪ್ರಯತ್ನಿಸಿದ್ದಾರೆ. ಕಾವ್ಯಾ ಎನ್ನುವ ಕೊಲೆಯಾಗುವ ಹೆಣ್ಣು ಮಗಳಾಗಿ ಶಿಲ್ಪಾ ಮಂಜುನಾಥ್ ಗಮನ ಸೆಳೆಯುತ್ತಾರೆ. ಮೊದಲ ನೋಟದಲ್ಲಿ ನಯನ್ ತಾರಾರನ್ನು ನೆನಪಿಸುವ ಈಕೆ ಭರವಸೆಯ ನಟಿಯಾಗುವುದರಲ್ಲಿ ಸಂದೇಹವಿಲ್ಲ.

ಉಳಿದಂತೆ ಮಕರಂದ,
ರಾಹುಲ್ ರಾಜ್ ಮೊದಲಾದ ಪಾತ್ರಧಾರಿಗಳು ಚಿತ್ರವನ್ನು ತುಂಬಿಕೊಂಡಿದ್ದಾರೆ. ಸಿನಿಮಾದ ಹಾಡುಗಳು ಮತ್ತು ಹಿನ್ನೆಲೆ ಸಂಗೀತದ ಮೂಲಕ ಸಂಗೀತ ನಿರ್ದೇಶಕರಾಗಿ ಮ್ಯಾಥ್ಯೂ ಮನು ಭರವಸೆ ಮೂಡಿಸಿದ್ದಾರೆ. ಸಸ್ಪೆನ್ಸ್ ಥ್ರಿಲ್ಲರ್ ಮೆಚ್ಚುವ ಪ್ರೇಕ್ಷಕರಿಗೆ ಚಿತ್ರ ಇಷ್ಟವಾಗುವುದರಲ್ಲಿ ಸಂದೇಹವಿಲ್ಲ.

✍🏻ಜಾನಕೀತನಯ

This Article Has 4 Comments

Leave a Reply

Your email address will not be published. Required fields are marked *

Translate »
error: Content is protected !!