ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ-14 ಪ್ರದೋಶ್ ಸೇರಿ ಮೂವರು ಆರೋಪಿಗಳು ತಮ್ಮನ್ನು ಮಾಫಿ ಸಾಕ್ಷಿ ಮಾಡಿ ಎಂದು ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು, ನ್ಯಾಯಾಧೀಶರಾದ ಸುಜಾತಾ ಮಡಿವಾಳಪ್ಪ ಆಗಸ್ಟ್ 10 ಕ್ಕೆ ಆದೇಶವನ್ನು ಕಾಯ್ದಿರಿಸಿದ್ದಾರೆ.
ಪ್ರದೋಷ್ ಮಾಫಿ ಸಾಕ್ಷಿಯಾಗಲು ಮುಂದಾಗಿರುವ ಮಾಹಿತಿ ತಿಳಿದ ಬಳಿಕ ದರ್ಶನ್ ಗುರುವಾರ ರಾತ್ರಿ ಜೈಲು ಸಿಬ್ಬಂದಿ ನೀಡಿದ ಊಟವನ್ನು ಸೇವಿಸಿಲ್ಲ. ಸಹ ಆರೋಪಿಗಳೊಂದಿಗೆ ಯಾವುದೇ ಮಾತುಕತೆ ನಡೆಸದೆ ಏಕಾಂಗಿಯಾಗಿ ಕುಳಿತು ಚಿಂತೆಯಲ್ಲಿ ಮುಳುಗಿದ್ದರು ಎನ್ನಲಾಗಿದೆ. ಇಡೀ ರಾತ್ರಿ ನಿದ್ರೆಯಿಲ್ಲದೆ ಕಳೆಯುವಂತಾಗಿದ್ದು, ಆಪ್ತನ ನಿರ್ಧಾರದಿಂದ ಮಾನಸಿಕವಾಗಿ ತೀವ್ರ ಕುಗ್ಗಿದ್ದಾರೆ.
ಶುಕ್ರವಾರ ಬೆಳಗ್ಗೆ ಬ್ಯಾರಕ್ನಲ್ಲಿ ಕೆಲ ಹೊತ್ತು ವಾಕ್ ಮಾಡಿದ ದರ್ಶನ್ ಬಳಿಕ ದೇವರ ಫೋಟೋಗೆ ನಮಸ್ಕರಿಸಿ ಕಾಫಿ ಸೇವಿಸಿದ್ದರು. ದಿನಪತ್ರಿಕೆಯಲ್ಲಿ ಪ್ರದೋಷ್ ಅರ್ಜಿ ಕುರಿತ ವರದಿಯನ್ನು ಓದಿದ ಬಳಿಕ ಮತ್ತೆ ಮೌನಕ್ಕೆ ಜಾರಿದ್ದಾರೆ ಎನ್ನಲಾಗಿದೆ. ಪ್ರಕರಣದ ವಿಚಾರಣೆ ನಿರ್ಣಾಯಕ ಹಂತ ತಲುಪುತ್ತಿರುವ ಹೊತ್ತಿನಲ್ಲಿ ಈ ಬೆಳವಣಿಗೆ ದರ್ಶನ್ಗೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದೆ.
ದರ್ಶನ್ ಆಪ್ತ ನ್ಯಾಯಾಲಯದ ಮುಂದೆ ಸಾಕ್ಷಿಯಾಗಲು ಮುಂದಾದರೆ ತನಿಖೆಯ ದಿಕ್ಕೇ ಬದಲಾಗುವ ಸಾಧ್ಯತೆ ಇದೆ ಎನ್ನುವ ಚರ್ಚೆ ನಡೆಯುತ್ತಿದೆ. ಈ ಬೆಳವಣಿಗೆ ದರ್ಶನ್ ಸೇರಿದಂತೆ ಇತರ ಆರೋಪಿಗಳಲ್ಲಿ ಆತಂಕ ಮೂಡಿಸಿದೆ.
—





Be the first to comment