‘ಕವಲುದಾರಿ’ ಟ್ರೇಲರ್​ ಬಿಡುಗಡೆ.

ಗೋಧಿ ಬಣ್ಣ ಖ್ಯಾತಿಯ ಹೇಮಂತ್ ರಾವ್ ನಿರ್ದೇಶನದಲ್ಲಿ ‘ಕವಲುದಾರಿ’ ಚಿತ್ರವನ್ನ ಪುನೀತ್​ ರಾಜ್​ಕುಮಾರ್​ ನಿರ್ಮಾಣ ಮಾಡುತ್ತಿದ್ದಾರೆ ಅಂದಾಗಲೇ ಆ ಸಿನಿಮಾದಲ್ಲಿ ಏನೋ ವಿಶೇಷವಿದೆ ಇರುತ್ತೆ ಅಂತ ಚಿತ್ರ ಪ್ರೇಮಿಗಳು ನಿರೀಕ್ಷೆ ಮಾಡಿದ್ದರು. ಸದ್ಯ ‘ಕವಲು ದಾರಿ’ ಚಿತ್ರದ ಟ್ರೇಲರ್ ರಿಲೀಸಾಗಿದೆ. ಪುನೀತ್ ಈ ಸಿನಿಮಾ ಯಾವ ಕಾರಣಕ್ಕೆ ಆಯ್ಕೆ ಮಾಡಿಕೊಂಡರು ಎಂಬುದಕ್ಕೆ ಉತ್ತರ ನೀಡುವಂತಿದೆ ಈ ಟ್ರೇಲರ್​.

ಪುನೀತ್ ಕನ್ನಡ ಚಿತ್ರರಂಗದ ಮಿಸ್ಟರ್ ಪರ್ಫೆಕ್ಟ್ ಅಂತಲೇ ಕರೆಸಿಕೊಳ್ಳುವ ನಟ. ಅವರು ಏನೇ ಮಾಡಿದರೂ ಅದಕ್ಕೊಂದು ತೂಕವಿರುತ್ತೆ. ಅದರದ್ದೇ ಆದ ಮಹತ್ವ ಇರುತ್ತೆ. ‘ಕವಲು ದಾರಿ’ ಚಿತ್ರ ಅದಕ್ಕೆ ಮತ್ತೊಂದು ಉದಾಹರಣೆ. ಈ ಸಿನಿಮಾ ಮುಲಕ ಪವರ್​ ಸ್ಟಾರ್​ ಪುನೀತ್ ತಮ್ಮದೇ ನಿರ್ಮಾಣ ಸಂಸ್ಥೆಯನ್ನ ಆರಂಭಿಸಿದ್ದು, ಮೊದಲ ಹೆಜ್ಜೆಯಲ್ಲಿಯೇ ಕನ್ನಡಕ್ಕೆ ಒಂದು ಅದ್ಭುತ ಚಿತ್ರವನ್ನ ಕೊಡುವ ಲಕ್ಷಣಗಳು ಸದ್ಯ ಬಿಡುಗಡೆಯಾಗಿರೋ ಟ್ರೇಲರ್​ನಲ್ಲೇ ಗೋಚರಿಸುತ್ತಿವೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!