‘ಇತ್ಯಾದಿ’ ತೆರೆಗೆ ಬರಲು ಸಿದ್ಧ

ಡಿ.ಯೋಗರಾಜ್ ನಿರ್ದೇಶನದ  ಹೊಸಬರ ‘ಇತ್ಯಾದಿ’ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ.

ರ್ಡರ್ ಮಿಸ್ಟ್ರಿ ಕಥೆ ಹೊಂದಿರುವ ‘ಇತ್ಯಾದಿ’ ಚಿತ್ರಕ್ಕೆ ಮಹೇಂದ್ರನ್, ಶ್ರೀನಿವಾಸ್ ಮತ್ತು ನೀಲಕಂಠನ್ ಬಂಡವಾಳ ಹೂಡಿದ್ದಾರೆ.

” ‘ಇತ್ಯಾದಿ’ ಮರ್ಡರ್ ಮಿಸ್ಟ್ರಿ, ಕ್ರೈಂ, ಥ್ರಿಲ್ಲರ್ ಕಥೆ ಒಳಗೊಂಡಿದೆ.  ಶೃಂಗೇರಿ ಬಳಿ ಇರುವ ಬಿಳಿಗದ್ದೆ ಎಂಬ ಊರಿನಲ್ಲಿ ಕಲ್ಲು ದೇವರು ಇರುತ್ತದೆ. ಅದಕ್ಕೆ ತಾಯಿ ಹೊಟ್ಟೆಯಲ್ಲಿ ಹುಟ್ಟಬೇಕೆಂಬ ಆಸೆಯಾಗಿರುತ್ತದೆ. ಅದು ಕೊನೆಗೂ ಕಲ್ಲಾಗೇ ಹುಟ್ಟುತ್ತದೆ. ಊರಿನಲ್ಲಿರುವ ಗರ್ಭಣಿಯರು ಆ ಜಾಗಕ್ಕೆ ಹೋಗಿ ಪೂಜೆ ಮಾಡಿಕೊಂಡು ಬಂದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ. ಆದರೆ ಅಲ್ಲಿಗೆ ಹೋದವರೆಲ್ಲಾ ಕೊಲೆಯಾಗುತ್ತಾರೆ. ಇದನ್ನು ಮಾಡುವವರು ಯಾರು? ಯಾಕೆ? ಎಂಬುದನ್ನು ಕುತೂಹಲಕಾರಿಯಾಗಿ ತೋರಿಸಲಾಗಿದೆ. ಚಿತ್ರ  ಶೇ. 75ರಷ್ಟು ಕಾಲ್ಪನಿಕ ಕಥೆಯಾಗಿದ್ದು, ಮಿಕ್ಕಿದ್ದು ಸತ್ಯ ಘಟನೆ.’ ಎಂದಿದ್ದಾರೆ ನಿರ್ದೇಶಕ ಡಿ.ಯೋಗರಾಜ್.

ನಾಯಕ ಸಚಿನ್‌ಗೆ ಡಾ.ಸೌಮ್ಯ ಜೋಡಿಯಾಗಿದ್ದಾರೆ. ಮಹೇಶ್.ಬಿ, ಅರ್ಚನಾ ಉದಯಕುಮಾರ್‌ ಮುಂತಾದವರು ನಟಿಸಿದ್ದಾರೆ. ಶೃಂಗೇರಿ, ಚಿಕ್ಕಮಗಳೂರು, ಆಗುಂಬೆ ಸುತ್ತಮುತ್ತಲು ಚಿತ್ರೀಕರಣಗೊಂಡಿದೆ.

ಎರಡು ಹಾಡುಗಳಿಗೆ ಪುಣ್ಯೇಶ್ ಸಂಗೀತ ಸಂಯೋಜಿಸಿದ್ದು, ಭರಣಿ ಡಿ.ಯೋಗರಾಜ್-ಲಕ್ಷೀಕಾಂತ್ ಛಾಯಾಗ್ರಹಣವಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!