ಚಿಟ್ಟೆ ಇಂದು ರಾಜ್ಯಾದಂತ ಬಿಡುಗಡೆ

ಎಂ.ಎಲ್. ಪ್ರಸನ್ನ ಪತ್ರಕರ್ತರಾಗಿ, ಬರಹಗಾರರಾಗಿ ಜೊತೆಗೆ ನಿರ್ದೇಶಕರಾಗಿ ಕೂಡಾ ಪರಿಚಿತರು. ಈ ಹಿಂದೆ ರಂಗಪ್ಪ ಹೊಗ್ಬಿಟ್ನ ಸಿನಿಮಾ ನಿರ್ದೇಶನ ಮಾಡಿದ್ದ ಪ್ರಸನ್ನ ಅವರು ಈ ವಾರ ತೆರೆಗೆ ಬರುತ್ತಿರುವ `ಚಿಟ್ಟೆ’ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ, ನಿರ್ಮಾಣ ಅಲ್ಲದೆ ಸಾಹಿತ್ಯ ಹಾಗೂ ಸಂಗೀತದ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದಾರೆ.
ಶ್ರೀ ವಾಗ್ದೇವಿ ಕ್ರಿಯೇಷನ್ ಅಡಿಯಲ್ಲಿ ತಯಾರಾಗಿರುವ ಈ ಚಿತ್ರಕ್ಕೆ `ವಿಲ ವಿಲ ವಿಲಪಿಸಿದೆ ಹೃದಯ ಎಂಬ’ ಅಡಿ ಬರಹ ಸಹ ಇಡಲಾಗಿದೆ. ಶ್ರೀಮತಿ ಪೂರ್ಣಿಮ ಪ್ರಸನ್ನ ಅವರ ನಿರ್ಮಾಣ ನಿರ್ವಹಣೆ ಜವಾಬ್ದಾರಿ ಹೊತ್ತಿದ್ದಾರೆ.

ಈ ಚಿತ್ರದಲ್ಲಿ ಯಶಸ್ ಸೂರ್ಯ, ನಾಗೇಶ್ ಕಾರ್ತಿಕ್ ಮತ್ತು ಹರ್ಷಿಕ ಪೂಣಚ್ಚ ಪ್ರಧಾನ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಅವರ ವೈವಾಹಿಕ ಜೀವನದಲ್ಲಿ ಜರಗುವ ಘಟನೆಗಳೇ ಈ ಚಿತ್ರದ ಪ್ರಮುಖ ಅಂಶಗಳಾಗಿವೆ.

ವಿಶ್ವಜಿತ್ ಛಾಯಾಗ್ರಹಣ, ಚಂದನ ಆರಾಧ್ಯ ವಸ್ತ್ರ ವಿನ್ಯಾಸ, ಸಂಕಲನ, ಗ್ರಾಫಿಕ್ಸ್ ನವೀನ್ ಸುಂದರ್ ರಾವ್, ಬಿ ಎಂ ಗಿರಿರಾಜ್ ಹಾಗೂ ಇತರರು ಪಾತ್ರವರ್ಗದಲ್ಲಿ ಇದ್ದಾರೆ.

This Article Has 1 Comment
  1. Pingback: DevOps consulting company

Leave a Reply

Your email address will not be published. Required fields are marked *

Translate »
error: Content is protected !!