ಸೆನ್ಸಾರ್ ಸರ್ಟಿಫಿಕೇಟ್ ನೀಡಲು ಲಂಚ: ಅಧಿಕಾರಿ ಬಲೆಗೆ

ಸಿನಿಮಾಗಳಿಗೆ ಸೆನ್ಸಾರ್ ಸರ್ಟಿಫಿಕೇಟ್ ನೀಡಲು ಲಂಚ ಪಡೆಯುತ್ತಿದ್ದ ಸೆನ್ಸಾರ್ ಅಧಿಕಾರಿ ಸಿಬಿಐ ಬಲೆಗೆ ಬಿದ್ದಿದ್ದಾನೆ.

ಅಡವಿ ಕನ್ನಡ ಸಿನಿಮಾಕ್ಕೆ ಸೆನ್ಸಾರ್ ಸರ್ಟಿಫಿಕೇಟ್ ನೀಡಲು ಪ್ರಶಾಂತ್ ಕುಮಾರ್ ಎಂಬಾತ ಲಂಚ ಕೇಳಿದ್ದ. 12 ಸಾವಿರ ರೂ. ಲಂಚ ಪಡೆಯುವಾಗ ಸಿಬಿಐ ಅಧಿಕಾರಿಗಳ ಬಲೆಗೆ ಆರೋಪಿ ಪ್ರಶಾಂತ್ ಸಿಕ್ಕಿಬಿದ್ದಿದ್ದಾನೆ.

ವಾರದಿಂದಲೂ ಸೆನ್ಸಾರ್ ಸರ್ಟಿಫಿಕೇಟ್ ನೀಡದೆ ಸತಾಯಿಸ್ತಿದ್ರು ಎಂದು ನಿರ್ಮಾಪಕ ಟೈಗರ್ ನಾಗ್  ಹಾಗೂ ನಟ, ನಿರ್ದೇಶಕ ಆಸ್ಕರ್ ಕೃಷ್ಣ ದೂರು ನೀಡಿದ್ದರು.

ಈ ಕುರಿತು ಪ್ರತಿಕ್ರಿಯಿಸಿರುವ ಟೈಗರ್ ನಾಗ್, ಅಡವಿ ಎಂಬ ಚಿತ್ರ ನಿರ್ಮಾಣ ಹಾಗೂ ನಿರ್ದೇಶನ ಮಾಡಿದ್ದೇನೆ. ಸೆನ್ಸಾರ್ ಸರ್ಟಿಫಿಕೇಟ್ ಗೆ ಒಂದು ವಾರದಿಂದ ಅಲೆಸುತ್ತಿದ್ದರು. ಇಪ್ಪತ್ತು ಸಾವಿರ ರೂಪಾಯಿಗೆ ಡಿಮ್ಯಾಂಡ್ ಮಾಡಿ  ಸಣ್ಣ ಪುಟ್ಟ ಕಾರಣಗಳನ್ನ ಕೊಟ್ಟು ಕಳಿಸುತ್ತಿದ್ದರು ಎಂದು ಹೇಳಿದ್ದಾರೆ.

ನಾನು ಸಿಬಿಐಗೆ ಎರಡು ದಿನದ ಹಿಂದೆ ದೂರು ಕೊಟ್ಟಿದ್ದೆ. 12 ಸಾವಿರ ಹಣ ಕೊಡುವಾಗ ಅಧಿಕಾರಿಗಳು ಅರೆಸ್ಟ್ ಮಾಡಿದ್ದಾರೆ. ನಮ್ಮಂಥ ಅನೇಕರಿಗೆ ಇದೇ ರೀತಿ ಮಾಡಿದ್ದಾರೆ. ಅದಕ್ಕಾಗಿ ದೂರು ಕೊಟ್ಟೆ ಎಂದು ನಿರ್ಮಾಪಕ ಟೈಗರ್ ನಾಗ್ ತಿಳಿಸಿದ್ದಾರೆ.

ಕನ್ನಡ ಚಿತ್ರಗಳಿಗೆ ಸೆನ್ಸಾರ್ ಪ್ರಮಾಣ ಪತ್ರ ನೀಡಲು ಲಂಚ ಪಡೆಯಲಾಗುತ್ತಿದೆ ಎಂದು ಹಲವು ಸಮಯಗಳಿಂದ ದೂರು ಕೇಳಿ ಬಂದಿತ್ತು. ಸೆನ್ಸಾರ್ ಅಧಿಕಾರಿ ಬಲೆಗೆ ಬೀಳುವ ಮೂಲಕ ಈಗ ಪ್ರಕರಣ ಮುನ್ನೆಲೆಗೆ ಬಂದಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!