ಬಲರಾಮನ ದಿನಗಳು ಚಿತ್ರದ ಹಾಡುಗಳು ಬಿಡುಗಡೆಯಾಗಿವೆ. ಖ್ಯಾತ ಸಂಗೀತ ನಿರ್ದೇಶಕ ಸಂತೋಷ್ ನಾರಾಯಣ್ ಸಂಗೀತದಲ್ಲಿ ಆಲ್ ಓಕೆ ಹಾಡಿರುವ ಗೀತೆಯನ್ನು ಬಿಡುಗಡೆ ಮಾಡಲಾಗಿದೆ.
ಸಿನಿಮಾದ ನಾಯಕ ನಟ ವಿನೋದ್ ಪ್ರಭಾಕರ್ ಅವರು, ಇಲ್ಲಿ ನಿಂತಿದ್ದೀನಿ ಅಂದರೆ ನಮ್ಮ ತಂದೆ ಟೈಗರ್ ಪ್ರಭಾಕರ್ ಅವರು ಕಾರಣ. ಬಲರಾಮ ಏನಿದೆಯೋ ಟೈಗರ್ ಪ್ರಭಾಕರ್ ಅವರು ಬಿಟ್ಟೋದ ಅಧ್ಯಾಯ ನಾನು. ಚಿತ್ರರಂಗದಲ್ಲಿ ಅವರ ಕನಸು ಬಹಳ ಇತ್ತು. ನಾನು ಚಿತ್ರರಂಗಕ್ಕೆ ಬಂದಾಗ ಬಹಳ ಎಡವಿದೆ. ನಾನು ಇದಕ್ಕೆ ದಾರಿತಪ್ಪಿದ ಮಗ ಅಂತ ಇಂಟರ್ವ್ಯೂನಲ್ಲಿ ಇದಕ್ಕೆ ಹೇಳಿದೆ. ಮತ್ತೆ ನಾನು ಯೂಟರ್ನ್ ಮಾಡಿಕೊಂಡು ಬಂದೆ. ಈಗ ಕಂಟೆಂಟೇ ಹೀರೋ, ನಿರ್ಮಾಪಕರಿಗೆ ಧನ್ಯವಾದ, ನಾನು ಟೈಗರ್ ಪ್ರಭಾಕರ್ ಅವರ ಮುಂದುವರಿದ ಅಧ್ಯಾಯ ಅಂತ ಮತ್ತೊಮ್ಮೆ ಹೇಳ್ತೇನೆ. ನಾನು ಪ್ರತಿ ಅವಾರ್ಡ್ ಏನೇ ತಗೊಂಡರು ಅದು ನನ್ನ ತಂದೆಗೆ ಸಲ್ಲುತ್ತದೆ. ಆಲ್ ಓಕೆ ಅವರ ಎಲ್ಲಾ ಟೀಮ್ಗೆ ಧನ್ಯವಾದ ಹೇಳಿದರು. ಸಾಂಗ್ ಬಹಳ ಚೆನ್ನಾಗಿ ಮೂಡಿ ಬಂದಿದೆ. ಪಟಾನ್ ಅವರು ಬಹಳ ಚೆನ್ನಾಗಿ ಮನರಂಜಿಸಿದ್ರು. ಈ ಸಾಂಗ್ ಖಂಡಿತ ಹಿಟ್ ಆಗುತ್ತೆ. ಆಲ್ ಓಕೆ ಅವರು ನಮ್ಮ ಸಿನಿಮಾಗೆ ಕೆಲಸ ಮಾಡಿದ್ದಕ್ಕೆ ನಾನು ಚಿರಋಣಿ ಎಂದು ಹೇಳಿದರು. ನಮ್ಮ ಕೆವಿಎಲ್ ಸಂಸ್ಥೆ ಜೊತೆಗೆ, ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದ ಹೇಳಿದರು. ಅವತ್ತಿನ ಜನರೇಷನ್ಗೂ ಇವತ್ತಿನ ಜನರೇಷನ್ಗೂ ಮ್ಯಾಚ್ ಮಾಡೋಕೆ ಈ ಸಾಂಗ್ ಇದೆ ಎಂದು ಹೇಳಿದರು.

ನಿರ್ಮಾಪಕ ಶ್ರೇಯಸ್ ಅವರು ಮಾತನಾಡುತ್ತಾ, ಮಧ್ಯರಾತ್ರಿ ನನಗೆ ಈ ಪದ್ಯ ಕುರಿತು ಹೇಳುತ್ತಾರೆ. ಐದೂವರೆಗೆ ಫೈನಲ್ ವರ್ಷನ್ ಬರುತ್ತೆ. ಅದನ್ನು ಕೇಳಿ ನನ್ನ ಮೈ ಜುಂ ಅನಿಸ್ತು, ವಿನೋದ್ ಸರ್ ಗೆ ತುಂಬಾ ಧನ್ಯವಾದ ಹೇಳ್ತೀನಿ ಎಂದು ಹೇಳಿದರು.
ನಿರ್ಮಾಪಕಿ ಪದ್ಮಾವತಿ ಅವರು ಮಾತನಾಡುತ್ತಾ, ಈ ಪದ್ಯ ಕುರಿತು ಮಾತಲ್ಲಿ ಹೇಳಿದರೆ ಸಾಲದು, ಮನಸ್ಸಿಂದ ಹೇಳ್ತಾ ಇದ್ದೀನಿ. ಆಲ್ ಓಕೆ ಅವರಿಗೆ ಧನ್ಯವಾದ. ಕೇವಲ ಆರು ದಿನ ಇದೆ ಭಯ ಆಗ್ತಿದೆ. ಇವತ್ತಿನ ಟ್ರೆಂಡ್ಗೆ ಈ ತರಹ ಪದ್ಯ ಬೇಕು. ಯೂತ್ಗೆ ಇದು ಇಷ್ಟ ಆಗುತ್ತದೆ ಎನ್ನುವ ಭರವಸೆ ಇದೆ. ನನಗೆ ಸಾಂಗ್ ಕೇಳಿ ಶಾಕ್ ಆಯಿತು. ಅಷ್ಟು ಚೆನ್ನಾಗಿದೆ. ಇದೊಂದು ಸಾಂಗ್ ದೊಡ್ಡಮಟ್ಟಕ್ಕೆ ನಿಂತಿದೆ ಎಂದು ಹೇಳಿದರು.





Be the first to comment