‘ಬಂಧನ 2’ ಸಿನಿಮಾ ನಿಲ್ಲೋಕೆ ಕಾರಣ!

ಸಾಕಷ್ಟು ವರ್ಷಗಳ ಬಳಿಕ ಮತ್ತೆ ನಟ ಆದಿತ್ಯ ಎಂಟ್ರಿ ಕೊಟ್ಟಿದ್ದು ಇದೇ ವೇಳೆ ‘ಬಂಧನ 2’ ಚಿತ್ರವನ್ನು ಕೈಬಿಟ್ಟಿದ್ದೇಕೆ ಎಂದು ತಿಳಿಸಿದ್ದಾರೆ.

“‘ಬಂಧನ 2’ ಸಿನಿಮಾ ಮಾಡುವ ಮೂಲಕ ನಾವು ಈ ಮೊದಲು ಮಾಡಿದ್ದ ‘ಬಂಧನ’ ಸಿನಿಮಾಗೆ ಕೆಟ್ಟ ಹೆಸರು ತರಬಹುದು ಎಂದು ಅನಿಸಿತು. ಅದಕ್ಕೆ ಬೇಡವೇ ಬೇಡ ಅಂದು ಬಿಟ್ಟೆ” ಎಂದು ಆದಿತ್ಯ ಹೇಳಿದ್ದಾರೆ.

”ನನ್ನ ತಂದೆ ನಿರ್ದೇಶನ ಮಾಡಿದ್ದ ಹಲವು ಚಿತ್ರಗಳು ಅಂದಿನ ಕಾಲದಲ್ಲಿ ಅಪಾರ ಜನರ ಮೆಚ್ಚುಗೆ ಗಳಿಸಿದ್ದವು. ಅವುಗಳನ್ನು ಈಗ ರಿಮೇಕ್ ಮಾಡುವುದಾಗಲಿ, ಅದರ ಸೀಕ್ವೆಲ್ ಮಾಡುವುದಾಗಲಿ ತುಂಬಾ ಕಷ್ಟ. ಅಂಥವುಗಳನ್ನು ಮೂಲ ಚಿತ್ರದ ನಿರ್ದೇಶಕರೇ ಮಾಡಿದರೆ ಸರಿ. ಮಿಕ್ಕವರು ಅವುಗಳನ್ನು ಟಚ್ ಮಾಡುವುದು ಅಷ್ಟು ಸೂಕ್ತವಲ್ಲ ಎನ್ನುವುದು ನನ್ನ ಭಾವನೆ” ಎಂದಿದ್ದಾರೆ ಆದಿತ್ಯ.

” ನನ್ನ ತಂದೆಯವರೇ ‘ಬಂಧನ 2’ ಮಾಡಬಹುದು. ಮಾಡೋಣ ಅಂತ ಶುರು ಮಾಡಿದ್ವಿ. ಆದರೆ ಎರಡು ದಿನಗಳಷ್ಟೇ ಶೂಟ್ ಮಾಡಿದ್ದು. ಬಳಿಕ ನಾನೇ ನನ್ನ ತಂದೆಯವರಿಗೆ ಬೇಡ ಎಂದು ಹೇಳಿಬಿಟ್ಟೆ.ಯಾಕೋ ನನಗೆ ಈ ಸಿನಿಮಾ ಮುಂದುವರೆಸುವುದು ಬೇಡ ಅನ್ನಿಸಿಬಿಟ್ಟಿತು” ಎಂದಿದ್ದಾರೆ.

‘ಬಂಧನ’ ಸಿನಿಮಾದಲ್ಲಿ ನಟ ವಿಷ್ಣುವರ್ಧನ್, ಸುಹಾಸಿನಿ, ಜೈಜಗದೀಶ್ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. 1984ರಲ್ಲಿ ತೆರೆಕಂಡ ಈ ಚಿತ್ರ ಸೂಪರ್ ಡೂಪರ್ ಹಿಟ್ ಆಗಿತ್ತು. ವಿಷ್ಣುವರ್ಧನ್ ಮತ್ತು ಸುಹಾಸಿನಿ ಜೋಡಿಗೆ ಅಭಿಮಾನಿಗಳು ಫಿದಾ ಆಗಿದ್ದರು.

ಹಾರರ್ ಕಥೆಯ ಟಚ್ ಅಪ್ ನೊಂದಿಗೆ ಭ್ರೂಣ ಹತ್ಯೆಯ ದುಷ್ಪರಿಣಾಮದ ಬಗ್ಗೆ ಜಾಗೃತಿ ಮೂಡಿಸುವ ಚಿತ್ರ ‘ಕಾಂಗರೂ’ ಈ ವಾರ ತೆರೆಯ ಮೇಲೆ ಬಂದಿದೆ. ಚಿತ್ರದಲ್ಲಿ ಆದಿತ್ಯ ಇನ್ಸ್ಪೆಕ್ಟರ್ ಆಗಿ ಕಾಣಿಸಿಕೊಂಡಿದ್ದಾರೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!