ಜೂನ್ 14 ಕ್ಕೆ ‘ಯಂಗ್ ಮ್ಯಾನ್’

ಮುತ್ತುರಾಜ್ ನಿರ್ದೇಶನದ ‘ಯಂಗ್ ಮ್ಯಾನ್’ ಚಿತ್ರ ಜೂನ್ 14ಕ್ಕೆ ರಾಜ್ಯಾದ್ಯಂತ ತೆರೆ ಮೇಲೆ ಬರಲಿದೆ.

ಈ ಕುರಿತು ಚಿತ್ರತಂಡ ಇಂದು ಸೋಶಿಯಲ್ ಮೀಡಿಯಾದಲ್ಲಿ ಘೋಷಣೆ ಮಾಡಿದೆ. ‘ಯಂಗ್ ಮ್ಯಾನ್’ ಚಿತ್ರ  ಟೀಸರ್ ಮೂಲಕ ಸಾಕಷ್ಟು ಕುತೂಹಲ ಮೂಡಿಸಿದೆ.

ಈ ಚಿತ್ರವನ್ನು ಪಾರಿ ಮೂವಿ ಮೇಕರ್ಸ್ ಲಾಂಛನದಲ್ಲಿ ಹರೀಶ್, ವಿಜಯಲಕ್ಷ್ಮಿ ರಾಮೇಗೌಡ ಮತ್ತು ಸಮಯ ಈಶ್ವರಪ್ಪ ನಿರ್ಮಾಣ ಮಾಡಿದ್ದಾರೆ. ಯಶ್ವಂತ್ ಸಹ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ.

ನಯನ ಪುಟ್ಟಸ್ವಾಮಿ, ಜಯರಾಮ್, ಸುನಿಲ್ ಗೌಡ, ರಶಿಕ ಕರಾವಳಿ ಮತ್ತು ಆನಂದ್ ಕೆಂಗೇರಿ ತಾರಾ ಬಳಗದಲ್ಲಿದ್ದಾರೆ. ಲೋಕಿಲ್ ತವಸ್ಯ ಸಂಗೀತ ಸಂಯೋಜನೆ ನೀಡಿದ್ದು, ಚಾಮರಾಜ ಶಾಮ್ ನಾಜ್ ಶ ನೃತ್ಯ ನಿರ್ದೇಶನವಿದೆ.

”ಯಂಗ್ ಮ್ಯಾನ್  ಅವಧಿಯ 2 ಗಂಟೆ 38 ನಿಮಿಷ.ಚೊಚ್ಚಲ ನಿರ್ದೇಶನದಲ್ಲೇ ಏನಾದರೂ ವಿಶೇಷತೆ ಇರಬೇಕೆಂಬ ಹಂಬಲದಿಂದ ಈ ಚಿತ್ರವನ್ನು ಸಿಂಗಲ್ ಟೇಕ್‌ನಲ್ಲಿ ಮಾಡಿ ಮುಗಿಸಿದ್ದೇನೆ. ಈ ಹಿಂದೆ ಶಂಕರ್ ನಾಗ್, ಎಸ್ ನಾರಾಯಣ್ ಮುಂತಾದವರು ಈ ಪ್ರಯತ್ನ ಮಾಡಿದ್ದಾರೆ. ಆ ಸಿನಿಮಾಗಳ ಸ್ಪೂರ್ತಿಯಿಂದ ನಾನು ಈ ಪ್ರಯತ್ನವನ್ನು ಮಾಡಿದ್ದೇನೆ” ಎಂದಿದ್ದಾರೆ ಮುತ್ತುರಾಜ್.

 “ಈ ಸಿನಿಮಾಕ್ಕೆ ಸುಮಾರು ಮೂರು ತಿಂಗಳು ಪೂರ್ವ ತಯಾರಿ ಮಾಡಿಕೊಂಡಿದ್ದೇನೆ. ನಮ್ಮ ಸಿನಿಮಾದಲ್ಲಿ ಬಹುತೇಕ ಹೊಸ ಕಲಾವಿದರೆ ನಟಿಸಿರುವ ಕಾರಣ ಅವರಿಗೆಲ್ಲಾ ತರಬೇತಿ ನೀಡಿ ಆನಂತರ ಚಿತ್ರೀಕರಣ ಮಾಡಿದ್ದೇನೆ. ನಮ್ಮ ಚಿತ್ರದಲ್ಲಿ ದೇಶಪ್ರೇಮವನ್ನು ಆಧರಿಸಿದ ಕಥೆಯಿದೆ. ಯಾರು ಊಹಿಸಲಾಗದ ಕ್ಲೈಮ್ಯಾಕ್ಸ್ ಇದೆ” ಎಂದಿದ್ದಾರೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!