ಮತ್ತೆ ಒಂದಾದ ಆದಿತ್ಯ, ಓಂ ಪ್ರಕಾಶ್

ಹಿರಿಯ ಚಿತ್ರ ನಿರ್ದೇಶಕ ಓಂ ಪ್ರಕಾಶ್ ರಾವ್ ಮತ್ತು ಆದಿತ್ಯ  ‘ಜಿಲ್ಲಾಧಿಕಾರಿ’ ಎಂಬ ಹೊಸ ಚಿತ್ರಕ್ಕಾಗಿ ಒಂದಾಗುತ್ತಿದ್ದಾರೆ.

ವರಮಹಾಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಈ ಚಿತ್ರವನ್ನು ಘೋಷಿಸಲಾಗಿದೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಚಿತ್ರೀಕರಣ ಆರಂಭವಾಗಲಿದೆ. ರೂಪಾ ಸಿದ್ದಗಂಗಾ ಅವರು ಆದಿತ್ಯ ಅವರಿಗೆ ಜೋಡಿಯಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.

ಕಮರ್ಷಿಯಲ್ ಎಂಟರ್‌ಟೈನರ್ ಚಿತ್ರವೆಂದು ಪರಿಗಣಿಸಲಾಗಿರುವ ‘ಜಿಲ್ಲಾಧಿಕಾರಿ’ ಚಿತ್ರ ಕೆಲವು ನೈಜ ಘಟನೆಗಳಿಂದ ಸ್ಫೂರ್ತಿ ಪಡೆದಿದೆ. ನಿರ್ದೇಶಕರು ಕಥೆ ಅಥವಾ ಆದಿತ್ಯ ಅವರ ಪಾತ್ರದ ಕುರಿತು ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಿಲ್ಲ.ಕೇವಲ ಆದಿತ್ಯ ಅವರು ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ.

ಪಟೂರಿನ ಲಲಿತಮ್ಮ ಮತ್ತು ಸುಶೀಲ ಪ್ರಸ್ತುತಪಡಿಸುತ್ತಿರುವ ಹಾಗೂ ಉಮೇಶ್ ಸಕ್ಕರೆನಾಡು ನಿರ್ಮಿಸುತ್ತಿರುವ ‘ಜಿಲ್ಲಾಧಿಕಾರಿ’ ಚಿತ್ರಕ್ಕೆ ರವಿಕುಮಾರ್ ಛಾಯಾಗ್ರಹಣ, ವಿ. ಹರಿಕೃಷ್ಣ ಸಂಗೀತ, ಡೆನ್ನಿಸಾ ಪ್ರಕಾಶ್ ಕಥೆ ಒದಗಿಸಿದ್ದಾರೆ.

ಚಿತ್ರದಲ್ಲಿ ರಾಕ್‌ಲೈನ್ ವೆಂಕಟೇಶ್, ಭಾಸ್ಕರ್ ಶೆಟ್ಟಿ, ಯಶಸ್ ಅಭಿ, ಸ್ಮಿತಾ, ಸ್ವರಾ ಬಿ, ಅಚ್ಯುತ್ ಕುಮಾರ್, ರಂಗಾಯಣ ರಘು, ಅವಿನಾಶ್, ಸ್ವಸ್ತಿಕ್ ಶಂಕರ್, ಸುಧಾ ಬೆಳವಾಡಿ, ಉಮೇಶ್ ಸಕ್ಕರೆನಾಡು ಇದ್ದಾರೆ.

‘ಡೆಡ್ಲಿ ಸೋಮ’ ಚಿತ್ರದ ಮೂಲಕ ಖ್ಯಾತಿ ಪಡೆದ  ಆದಿತ್ಯ ಮತ್ತು ಓಂ ಪ್ರಕಾಶ್ ರಾವ್ ಅವರ ಎರಡನೇ ಚಿತ್ರ ‘ಜಿಲ್ಲಾಧಿಕಾರಿ’. ಇವರಿಬ್ಬರ ಮೊದಲ ಸಹಯೋಗದ ಚಿತ್ರವಾಗಿದ್ದ ‘ಈಶ್ವರ್’ ಚಿತ್ರೀಕರಣಗೊಂಡಿದ್ದರೂ ಬಿಡುಗಡೆಯಾಗಿಲ್ಲ.

Be the first to comment

Leave a Reply

Your email address will not be published. Required fields are marked *

Translate »
error: Content is protected !!