Abhi Rama Chandra Review : ಪ್ರೀತಿಯ ನಂಟಿನ ಕಥೆ ಅಭಿರಾಮಚಂದ್ರ

ಚಿತ್ರ: ಅಭಿರಾಮಚಂದ್ರ

ನಿರ್ದೇಶನ: ನಾಗೇಂದ್ರ ಗಾಣಿಗ
ನಿರ್ಮಾಣ: ಎಂ ಜಿ ಸುರೇಶ್, ಮಲ್ಲೇಶ್
ತಾರಾಗಣ: ರಥ ಕಿರಣ, ಸಿದ್ದು ಮೂಲಿಮನಿ, ನಾಟ್ಯ ರಂಗ, ಶಿವಾನಿ ರೈ ಇತರರು
ರೇಟಿಂಗ್: 3.5/5

ಮೂವರು ಜೀವದ ಗೆಳೆಯರ ಪ್ರೀತಿಯ ನಂಟಿನ ಕಥೆಯಾಗಿ ತೆರೆಯ ಮೇಲೆ ಮೂಡಿ ಬಂದಿರುವ ಚಿತ್ರ ಅಭಿರಾಮಚಂದ್ರ.

ಕುತೂಹಲ ಮೂಡಿಸುವ ಪ್ರೀತಿಯ ಕಥೆಯನ್ನು ತೆರೆಯ ಮೇಲೆ ತರುವ ಯತ್ನವನ್ನು ನಿರ್ದೇಶಕ ನಾಗೇಂದ್ರ ಗಾಣಿಗ ಮಾಡಿದ್ದಾರೆ. ಮೂರು ಭಿನ್ನ ಪ್ರೇಮ ಕಥೆಯ ಎಳೆಯನ್ನು ಪಾತ್ರಧಾರಿಗಳ ಭಾಷಾ ಸೊಗಡಿಗೆ ಅನುಗುಣವಾಗಿ ಕಥೆಯನ್ನು ನಿರ್ದೇಶಕರು ಹೇಳಿದ್ದಾರೆ.

ರಂಗಭೂಮಿಯ ಯುವಕ, ಕ್ಯಾಬ್ ಡ್ರೈವರ್, ಕ್ಯಾಷಿಯರ್ ಇವರ ಪ್ರೇಯಸಿ ಯಾರು? ಇವರ ಪ್ರೇಮದ ಕಥೆ ಏನಾಗುತ್ತದೆ ಎನ್ನುವುದು ನೋಡಲು ಚಿತ್ರ ನೋಡಬೇಕು.

ರಥ ಕಿರಣ, ಸಿದ್ದು ಮೂಲಿಮನಿ, ನಾಟ್ಯ ರಂಗ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ನಾಯಕಿ ಆಗಿ ಕಾಣಿಸಿಕೊಂಡಿರುವ ಶಿವಾನಿ ರೈ ಮುದ್ದಾಗಿ ಕಾಣಿಸಿಕೊಂಡಿದ್ದಾರೆ.

ಡಾಕ್ಟರ್ ಆಗಿ ಕಾಣಿಸಿಕೊಂಡಿರುವ ಎಸ್ ನಾರಾಯಣ್, ಮನೆ ಮಾಲೀಕರಾಗಿ ಪಾತ್ರ ಮಾಡಿರುವ ವೀಣಾ ಸುಂದರ್, ವಿಶೇಷ ಪಾತ್ರದಲ್ಲಿ ನಟಿಸಿದ ಅರ್ಚನಾ ಕೊಟ್ಟಿಗೆ ಪಾತ್ರಕ್ಕೆ ಜೀವ ತುಂಬಿದ್ದಾರೆ.

ಒಟ್ಟಾರೆ ಚಿತ್ರ ಮನರಂಜನೆ ಒದಗಿಸುವ ಜೊತೆಗೆ ಪ್ರೇಮಿಗಳ ಮನಸು ಗೆಲ್ಲುವಲ್ಲಿ ಯಶಸ್ಸು ಕಂಡಿದೆ.
_____

Be the first to comment

Leave a Reply

Your email address will not be published. Required fields are marked *

Translate »
error: Content is protected !!