ಮೊಗ್ಗಿನ ಮನಸ್ಸು ಚಿತ್ರದ ನಾಯಕನ ಫಸ್ಟ್ ಲುಕ್ ರಿಲೀಸ್ !

“ಕಟ್ಟ ಕಡೆಯ ನಿಮಿಷದಲ್ಲಿ ಆತಂಕ”
ಕನ್ನಡದಲ್ಲಿ ಈಗಾಗಲೇ ಅನೇಕ ನೈಜ ಘಟನೆ ಆದಾರಿತ ಚಿತ್ರಗಳು ಬಂದಿವೆ. ಆ ಸಾಲಿಗೆ “ಕಟ್ಟ ಕಡೆಯ ನಿಮಿಷ” ಎಂಬ ಸಿನಿಮಾವು ಸೇರಿದೆ. ಹೌದು ಇದೊಂದು ಪಕ್ಕಾ ಹಾರರ್ ಫೀಲ್ ಇರುವಂತಹ ಚಿತ್ರ.

” ಮೊಗ್ಗಿನ ಮನಸ್ಸು ” ಚಿತ್ರದ ಮೂಲಕ ನಾಯಕನಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿದ ನಾಯಕ ಜೆ ಡಿ ಆಕಾಶ್ ಈ ಚಿತ್ರದ ನಾಯಕ .ಅವರಿಗೆ ಸ್ಟೇಫಿ ಡೇವಿಡ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.ಇನ್ನೂ ” ಕಟ್ಟ ಕಡೆಯ ನಿಮಿಷ” ಚಿತ್ರದ ಕಥೆ 1960 ರಲ್ಲಿ ಒಂದು ಚರ್ಚ್‌ನಲ್ಲಿ ನಡೆದಂತಹ ಸತ್ಯ ಘಟನೆ ಇಟ್ಟುಕೊಂಡು ಮಾಡಲಾಗಿದೆ. ಈ ಚಿತ್ರವನ್ನು ಜಗನ್ ಅಲೋಶಿಯಸ್ ನಿರ್ದೇಶಿಸಿದ್ದಾರೆ .ನಿರ್ದೇಶಕರು ಈ ಹಿಂದೆ ಕನ್ನಡದಲ್ಲಿ ಬಂದು ಸೂಪರ್ ಹಿಟ್ ಸಿನಿಮಾ ಎನಿಸಿಕೊಂಡ ” 6-5:2 ಚಿತ್ರವನ್ನು ತಮಿಳು ಭಾಷೆಗೆ ರಿಮೇಕ್ ಮಾಡಿದ್ದರು. ಈಗ “ಕಟ್ಟ ಕಡೆಯ ನಿಮಿಷ ಚಿತ್ರವನ್ನು ಕನ್ನಡ ಹಾಗೂ ತಮಿಳು ಭಾಷೆಯಲ್ಲಿ ಚಿತ್ರೀಕರಣ ಮಾಡಲಾಗುತ್ತಿದೆ. ಪಕ್ಕಾ ಸಸ್ಪೆನ್ಸ್ ಹಾರಾರ್ ಕಥೆ ಹೊಂದಿರುವ ಈ ಚಿತ್ರ ಈಗಾಗಲೇ ಶೇ.90ರಷ್ಟು ಚಿತ್ರೀಕರಣಗೊಂಡಿದೆ. ಚಿತ್ರದಲ್ಲಿ ಎರಡು ಭರ್ಜರಿ ಫೈಟ್ ಹಾಗೂ ಒಂದು ಹಾಡು ಇದೆ. ಯತೀಶ್ ಅವರು ಆರ್ಯನ್ ಪ್ರೊಡಕ್ಷನ್ ಮೂಲಕ ಸಿನಿಮಾ ನಿರ್ಮಿಸಿದ್ದಾರೆ.

ಚಿತ್ರದಲ್ಲಿ ಜೀವಾ.ಲವಿಕಾ ಹಿರಿಯ ಕಲಾವಿದ ಗಣೇಶ್ ರಾವ್ ತಾರಾಗಣದಲ್ಲಿದ್ದಾರೆ. ಹಾಗೂ ತಮಿಳು ಭಾಷೆಗೆ ನಾಯಕಿಯಾಗಿ ನಿತ್ಯಾ ರಾಜ್ ನಟಿಸಿದ್ದಾರೆ. ಬೆಂಗಳೂರು. ಹಾಸನ ಸಮೀಪದ ಶೆಟ್ಟಿಹಳ್ಳಿ ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಇನ್ನೂ ಒಂದು ಫೈಟ್ ಹಾಗೂ ಪ್ಯಾಚ್ ವರ್ಕ್ ಮಾಡಿದರೆ ಚಿತ್ರ ಪೂರ್ಣಗೊಳ್ಳಲಿದೆ.

ನಾಯಕ ಜೆ ಡಿ ಆಕಾಶ್ ಅವರು ಇ ಹಿಂದೆ ” ಕ್ರಿಷ್ಣನ್ ಲವ್ ಸ್ಟೋರಿ” ಹುಡುಗ ಹುಡುಗಿ ” ಹಾಗೂ ಕಮರೊಟ್ಟು ಚೆಕ್ ಪೋಸ್ಟ್”. ಚಿತ್ರದಲ್ಲಿ ಸಹ ನಟನಾಗಿ ಹಾಗೂ “ಮೊಗ್ಗಿನ ಮನಸ್ಸು” ಒಂದೇ ಒಂದು ಸಾರಿ” ನೆರಳು” ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದಾರೆ. ಈಗ ಬಿಡುಗಡೆಗೆ ಸಿದ್ದವಾಗಿರುವ ” ಬೀಗ” ಹಾಗೂ “ಬಿರುಮಳೆ ” ಚಿತ್ರದಲ್ಲೂ ನಾಯಕನಾಗಿ ನಟಿಸಿದ್ದಾರೆ. “ಕಟ್ಟ ಕಡೆಯ ನಿಮಿಷ” ಸಿನಿಮಾ ಗೆಲುವು ಕೊಡುವ ಭರವಸೆ ಇಟ್ಟುಕೊಂಡಿದ್ದಾರೆ.
ಲಾಕ್ ಡೌನ್ ನಂತರ ಚಿತ್ರಮಂದಿರಗಳು ಆರಂಭಗೊಂಡ ಬಳಿಕ ಚಿತ್ರವು ಪ್ರೇಕ್ಷಕರ ಎದುರು ಬರಲಿದೆ. ಚಿತ್ರಕ್ಕೆ ಕಿರಣ್ ಗಜರ ಛಾಯಾಗ್ರಹಣವಿದೆ. ಹಾಗೂ ಶ್ಯಾಮ್ ಡಿ ರಾಜ್ ಅವರ ಸಂಗೀತವಿದೆ. ಇತ್ತೀಚೆಗೆ ಚಿತ್ರದ ಮೊದಲ ಲುಕ್ ಚಿತ್ರತಂಡ ರಿಲೀಸ್ ಮಾಡಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!