‘ರಂಗಿ ತರಂಗ’ ಖ್ಯಾತಿಯ ನಿರ್ದೇಶಕ ಅನೂಪ್ ಭಂಡಾರಿ, ಸಹೋದರ ನಿರೂಪ್ ಭಂಡಾರಿ ಅವರೊಂದಿಗೆ ಮತ್ತೊಂದು ಚಿತ್ರದ ಕೆಲಸ ನಡೆಸುತ್ತಿದ್ದು, ಶ್ರೀನಿಧಿ ಶೆಟ್ಟಿ ಈ ಯೋಜನೆಯ ಭಾಗವಾಗಲಿದ್ದಾರೆ.
ಇನ್ನೂ ಹೆಸರಿಡದ ಈ ಚಿತ್ರದ ಚಿತ್ರೀಕರಣ ಈಗಾಗಲೇ ಕುಮಟಾದಲ್ಲಿ ನಡೆಯುತ್ತಿದೆ. ಇದರೊಂದಿಗೆ ಶ್ರೀನಿಧಿ ಶೆಟ್ಟಿ ಅವರು ಕನ್ನಡ ಚಿತ್ರರಂಗಕ್ಕೆ ಮರಳಲಿದ್ದಾರೆ. ಈ ಚಿತ್ರದ ಕುರಿತಾದ ವಿವರಗಳನ್ನು ಗೌಪ್ಯವಾಗಿಡಲಾಗಿದ್ದು, ಕಥೆ ಮತ್ತು ಪಾತ್ರಗಳ ಬಗೆಗಿನ ಮಾಹಿತಿಯನ್ನು ಇನ್ನೂ ಬಹಿರಂಗಪಡಿಸಿಲ್ಲ. , ‘ಅಮೆರಿಕ ಅಮೆರಿಕ 2’ ಚಿತ್ರದ ಇತ್ತೀಚಿನ ಕಾರ್ಯಕ್ರಮವೊಂದರಲ್ಲಿನಿರೂಪ್ ಗೈರಾಗಿದ್ದು ಈ ಯೋಜನೆಯ ಕುತೂಹಲವನ್ನು ಹೆಚ್ಚಿಸಿದೆ.
‘ಕೆಜಿಎಫ್’ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಶ್ರೀನಿಧಿ ಶೆಟ್ಟಿ ನಂತರ ‘ಕೆಜಿಎಫ್: ಚಾಪ್ಟರ್ 2’ನಲ್ಲಿಯೂ ನಟಿಸಿದ್ದರು. ಬಳಿಕ ಅವರು ತಮಿಳಿನ ‘ಕೋಬ್ರಾ’ ಹಾಗೂ ತೆಲುಗಿನ ‘ಹಿಟ್: ದಿ ಥರ್ಡ್ ಕೇಸ್’ ಮತ್ತು ‘ತೆಲುಸು ಕದಾ’ ಸೇರಿದಂತೆ ಇತರ ಭಾಷೆಯ ಚಿತ್ರಗಳಲ್ಲಿಯೂ ನಟಿಸಿದ್ದಾರೆ. ವೆಂಕಟೇಶ್ ದಗ್ಗುಬಾಟಿ ಅವರೊಂದಿಗೆ ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶಿಸುತ್ತಿರುವ ಮುಂಬರುವ ತೆಲುಗು ಚಿತ್ರದಲ್ಲಿಯೂ ಅವರು ನಟಿಸುತ್ತಿದ್ದಾರೆ.
ಅನೂಪ್ ಭಂಡಾರಿ ಸದ್ಯ ಕಿಚ್ಚ ಸುದೀಪ್ ಅವರೊಂದಿಗೆ ‘ಬಿಲ್ಲಾ ರಂಗ ಬಾಷಾ’ದ ನಿರ್ಮಾಣ ಕಾರ್ಯದಲ್ಲಿ ನಿರತರಾಗಿದ್ದಾರೆ.





Be the first to comment