ನಟ ಉಪೇಂದ್ರ, ಕಾರ್ತಿಕ್ ಸುಬ್ಬರಾಜ್ ನಿರ್ದೇಶಿಸುತ್ತಿರುವ ತಮಿಳು ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಚಿತ್ರೀಕರಣ ಮುಂದಿನ ತಿಂಗಳು ಕಾರ್ತಿಕ್ ಸುಬ್ಬರಾಜ್ ಅವರ ಸ್ಟೋನ್ ಬೆಂಚ್ ಬ್ಯಾನರ್ ಬೆಂಬಲದೊಂದಿಗೆ ಪ್ರಾರಂಭವಾಗಲಿದೆ. ಅಥರ್ವ ನಟನೆಯಈ ಪ್ರಾಜೆಕ್ಚ್ ಬಗ್ಗೆ ಅಧಿಕೃತ ಘೋಷಣೆ ಬರಬೇಕಿದೆ.
ಉಪೇಂದ್ರ ಅವರು ವಿಶಾಲ್ ಅಭಿನಯದ ಸತ್ಯಂ (2008) ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಇತ್ತೀಚೆಗೆ ರಜನಿಕಾಂತ್ ಅವರ ಕೂಲಿ (2025) ಸಿನಿಮಾದಲ್ಲಿ ಕಾಣಿಸಿಕೊಂಡರು. ಅವರು ಕೊನೆಯದಾಗಿ ಶಿವರಾಜಕುಮಾರ್ ಮತ್ತು ರಾಜ್ ಬಿ ಶೆಟ್ಟಿ ಅವರೊಂದಿಗೆ 45 (2025) ಕನ್ನಡ ಚಿತ್ರದಲ್ಲಿ ನಟಿಸಿದ್ದರು.
ಕಾರ್ತಿಕ್ ಸುಬ್ಬರಾಜ್ ಅವರ ಕೊನೆಯ ಚಿತ್ರ ಸೂರ್ಯ ನಟನೆಯ ರೆಟ್ರೋ (2025) ಆಗಿತ್ತು. ಶಿವಕಾರ್ತಿಕೇಯನ್ ಅಭಿನಯದ ಪರಾಶಕ್ತಿ ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ಅಥರ್ವ, ‘ ಇಧಯಂ ಮುರಳಿ’ ಚಿತ್ರದಲ್ಲಿಯೂ ಅಭಿನಯಿಸುತ್ತಿದ್ದಾರೆ.
ಈ ಚಿತ್ರಕ್ಕೆ ಇಳಯರಾಜ ಸಂಗೀತ ನೀಡಲಿದ್ದಾರೆ, ಆಸ್ಕರ್ ಪ್ರಶಸ್ತಿ ವಿಜೇತ ಗುಣೀತ್ ಮೋಂಗಾ ಸಂಗೀತ ನಿರ್ದೇಶನವಿದೆ.
—-





Be the first to comment