ಚಿತ್ರ: ಮಾದೇವ
ನಿರ್ದೇಶನ: ನವೀನ್ ರೆಡ್ಡಿ
ನಿರ್ಮಾಣ: ಕೇಶವ ಆರ್
ತಾರಾ ಬಳಗ: ವಿನೋದ್ ಪ್ರಭಾಕರ್, ಸೋನಾಲ್ ಮೊಂಟೆರೋ, ಶೃತಿ, ಮಾಲಾಶ್ರೀ, ಶ್ರೀನಗರ ಕಿಟ್ಟಿ, ಅಚ್ಚುತ್ ಕುಮಾರ್ ಇತರರು
ರೇಟಿಂಗ್: 4/5
ಕೌಟುಂಬಿಕ ಸಂಕಷ್ಟದ ಕಥೆಯಲ್ಲಿ ಅರಳುವ ಮಾದೇವನ ಕಥೆ ಈ ವಾರ ತೆರೆಗೆ ಬಂದಿರುವ ಮಾದೇವ ಚಿತ್ರದ ಒನ್ ಲೈನ್ ಸ್ಟೋರಿ.
ಚಿತ್ರದ ನಾಯಕ ಮಾದೇವ ನಿರ್ಭಾವುಕ. ಜೈಲಿನಲ್ಲಿ ಕೆಲಸ ಮಾಡುವ ಅವನ ಕೆಲಸ ಮರಣದಂಡನೆಗೆ ಗುರಿಯಾದವರಿಗೆ ನೇಣು ಬಿಗಿಯುವುದು ಮಾತ್ರ. ಇಂಥ ನಿರ್ಭಾವುಕ ವ್ಯಕ್ತಿಯ ಜೊತೆಗೆ ಅಮ್ಮನನ್ನು ಬಿಡಿಸಿಕೊಂಡು ಬರಲು ಹೊರಡುವ ಸೋನಾಲ್ ಪರಿಚಯ ಮಾಡಿಕೊಳ್ಳಲು ಮುಂದಾಗುತ್ತಾಳೆ. ಇನ್ನೊಂದೆಡೆ ಮರಣದಂಡನೆಗೆ ಗುರಿಯಾದ ಮಗನನ್ನು ಬಿಡಿಸಿಕೊಳ್ಳಲು ಶೃತಿ, ಮಾದೇವನ ಸಹಾಯ ಕೋರುತ್ತಾಳೆ. ಆಗ ಏನಾಗುತ್ತದೆ? ಮಾದೇವನ ನಿರ್ಭಾವುಕತೆಗೆ ಕಾರಣ ಏನು ಎನ್ನುವುದಕ್ಕೆ ಚಿತ್ರವನ್ನು ನೋಡಬೇಕಿದೆ.
ಇಡೀ ಚಿತ್ರದಲ್ಲಿ ವಿನೋದ್ ಪ್ರಭಾಕರ್ ಆವರಿಸಿಕೊಂಡಿದ್ದು ತಮ್ಮ ನಟನೆಯ ಮೂಲಕ ಗಮನ ಸೆಳೆಯುತ್ತಾರೆ. ಸೋನಾಲ್ ಅಭಿನಯ ಚೆನ್ನಾಗಿದೆ. ಮುಖವಾಡ ಹಾಕಿಕೊಂಡ ಗೋಮುಖ ವ್ಯಾಘ್ರನ ಅವತಾರದಲ್ಲಿ ಶ್ರುತಿ ಕಾಣಿಸಿಕೊಂಡಿದ್ದಾರೆ. ಮಾಲಾಶ್ರೀ, ಅಚ್ಚುತ್, ಶ್ರೀನಗರ ಕಿಟ್ಟಿ ಅವರ ಪಾತ್ರಗಳು ಚಿತ್ರಕ್ಕೆ ಪೂರಕವಾಗಿದೆ.
ಬಾಲಕೃಷ್ಣ ತೋಟ ಅವರ ಛಾಯಾಗ್ರಹಣ, ಪ್ರದ್ಯೋನ್ನತ್ ಸಂಗೀತ ಗಮನ ಸೆಳೆಯುತ್ತದೆ. ಕೌಟುಂಬಿಕ ಕಥೆಯ ಜೊತೆಗೆ ಆಕ್ಷನ್, ಸೆಂಟಿಮೆಂಟ್ ಚಿತ್ರ ಇಷ್ಟಪಡುವವರಿಗೆ ಈ ಚಿತ್ರ ಹಿಡಿಸುತ್ತದೆ.

Be the first to comment