ಸಹಾರಾ ಮೂಲಕ ಯುವ ನಿರ್ದೇಶಕನ ಪಯಣ

ಮಹಿಳಾ ಕ್ರಿಕೆಟ್ ಕಥೆ ಆಧಾರಿತ ಚಿತ್ರ ಸಹಾರಾ ಜೂನ್ 7ರಂದು ತೆರೆಗೆ ಬರಲಿದ್ದು, ಯುವ ನಿರ್ದೇಶಕ ಮಂಜೇಶ್ ಭಗವತ್ ಅವರು ಈ ಚಿತ್ರದ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಕಥೆ, ಕವಿತೆ ಬರೆಯುತ್ತಿದ್ದ ಮಂಜೇಶ್ ಅವರು ಸಿನಿಮಾ ನಿರ್ದೇಶಕ ಆಗಬೇಕು ಎನ್ನುವ ಕನಸಿನಿಂದ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ಚಿತ್ರರಂಗಕ್ಕೆ ಕಾಲಿಟ್ಟರು. 1-2 ವರ್ಷ ಸಹ ನಿರ್ದೇಶಕ ಆಗಿ ಕೆಲಸ ಮಾಡಿದ ಅವರು ಈಗ ಸ್ವತಂತ್ರ ನಿರ್ದೇಶಕರಾಗಿ ಹೊರ ಹೊಮ್ಮಿದ್ದಾರೆ.

ಕೆಲವು ವರ್ಷಗಳ ಹಿಂದೆ ಮಂಜೇಶ್ ಅವರು ಸಾಲ ಮಾಡಿ ಸಿನಿಮಾ ಶುರು ಮಾಡಿದರು. ಆದರೆ ಕ್ಲೈಮ್ಯಾಕ್ಸ್ ಚಿತ್ರೀಕರಣ ಮಾಡಲು ಹಣ ಇರಲಿಲ್ಲ. ಕೊನೆಗೆ ನಿರ್ಮಾಪಕರೊಬ್ಬರು ಕೈ ಹಿಡಿದರು. ಈ ರೀತಿ ಈಗ ಬಿಡುಗಡೆಗೆ ಸಿದ್ದ ಆಗಿರುವ ಚಿತ್ರ ಸಹಾರಾ.

ನಿರ್ದೇಶಕರು ಸ್ವತಃ ಕ್ರಿಕೆಟರ್ ಆಗಿದ್ದಾರೆ. ಹೀಗಾಗಿ ಅವರಿಗೆ ಮಹಿಳಾ ಕ್ರಿಕೆಟರ್ ಕುರಿತ ಚಿತ್ರ ಮಾಡಲು ಸಾಧ್ಯವಾಗಿದೆ.

ಕಿಚ್ಚ ಸುದೀಪ್ ಅವರು ಚಿತ್ರವನ್ನು ನಿರೂಪಿಸಿದ್ದಾರೆ. ಮಹಿಳಾ ಕ್ರಿಕೆಟರ್ ಶ್ರೇಯಾಂಕ ಪಾಟೀಲ್ ಟೈಟಲ್ ಲಾಂಚ್ ಮಾಡಿದ್ದಾರೆ. ಚಿತ್ರವನ್ನು ಕೆ ಆರ್ ಜಿ ಸಂಸ್ಥೆ ವಿತರಿಸುತ್ತಿದೆ. ಜೊತೆಗೆ ಪುನೀತ್ ರಾಜಕುಮಾರ್ ಅವರ ಪಿಆರ್‌ಕೆ ಸಂಸ್ಥೆ ಸಿನಿಮಾದ ಆಡಿಯೋ ಪಡೆದುಕೊಂಡಿದೆ.
_

Be the first to comment

Leave a Reply

Your email address will not be published. Required fields are marked *

Translate »
error: Content is protected !!