Gurukiran: ಮತ್ತೆ ಬಣ್ಣ ಹಚ್ಚಿದ ಗುರುಕಿರಣ್‌

ಸಂಗೀತ ನಿರ್ದೇಶಕ ಗುರುಕಿರಣ್‌ ಅವರು 16 ವರ್ಷದ ಬಳಿಕ ಮತ್ತೆ ಬಣ್ಣಹಚ್ಚಿದ್ದಾರೆ.

ಛೂಮಂತರ್ ಚಿತ್ರದ ಮೂಲಕ ಮತ್ತೆ ಬಣ್ಣ ಹಚ್ಚಿದ್ದಾರೆ ಗುರು ಕಿರಣ್. ಸಿನಿಮಾದಲ್ಲಿ ಗುರು ಕಿರಣ್ ಗೆಸ್ಟ್ ಅಪಿಯರೆನ್ಸ್ ಮಾಡುತ್ತಿದ್ದಾರೆ.

ಗುರುಕಿರಣ್‌ ಅವರಿಗೆ ಚಿತ್ರದಲ್ಲಿ ಮಹತ್ವದ ಪಾತ್ರ ಇದೆ. ಸಿನಿಮಾದಲ್ಲಿ ದೊಡ್ಡ ಟರ್ನಿಂಗ್ ಪಾಯಿಂಟ್‌ ಈ ಪಾತ್ರ ತರುತ್ತದೆ. ಚಿಕ್ಕದಾಗಿ ಬಂದ್ರೂ ದೊಡ್ಡ ಇಂಪ್ಯಾಕ್ಟ್‌ನ್ನೇ ಈ ರೋಲ್ ಮಾಡುತ್ತದೆ ಎಂದು ಚಿತ್ರದ ನಿರ್ಮಾಪಕ ತರುಣ್ ಶಿವಪ್ಪ ಹೇಳಿದ್ದಾರೆ.

ಗುರು ಕಿರಣ್ ಈ ಹಿಂದೆ ವಿಷ್ಣುವರ್ಧನ್ ಅವರ ಏಕದಂತ ಸಿನಿಮಾದಲ್ಲಿ ಅಭಿನಯಿಸಿದ್ದರು. ಇದೊಂದು ಸ್ಪೆಷಲ್ ಪಾತ್ರ ಆಗಿತ್ತುಈ ಸಿನಿಮಾ ಬಂದ 16 ವರ್ಷಗಳ ಬಳಿಕ ಗುರುಕಿರಣ್‌ ಚಿತ್ರದಲ್ಲಿ ಬಣ್ಣ ಹಚ್ಚುತ್ತಿರುವುದು ವಿಶೇಷ ಆಗಿದೆ.

ಈ ಚಿತ್ರದಲ್ಲಿ ಹಾಸ್ಯ ನಾಯಕ ನಟ ಶರಣ್ ನಟಿಸಿದ್ದಾರೆ. ಅವರು ಇದೇ ಮೊದಲ ಬಾರಿಗೆ ಹಾಸ್ಯಭರಿತ ಹಾರರ್ ಕಂಟೆಂಟ್ ಇರುವ ಚಿತ್ರ ಮಾಡುತ್ತಿದ್ದಾರೆ. ಕರ್ವ ಚಿತ್ರದ ಡೈರೆಕ್ಟರ್ ನವನೀತ್ ಈ ಚಿತ್ರದ ನಿರ್ದೇಶಕ ಆಗಿದ್ದಾರೆ.
ಛೂಮಂತರ್ ಸಿನಿಮಾದ ಬಹುತೇಕ ಕೆಲಸ ಮುಗಿದಿದೆ. ಈಗ ಗುರು ಕಿರಣ್ ಪಾತ್ರದ ಪೋಸ್ಟರ್ ರಿಲೀಸ್ ಮಾಡಲಾಗಿದೆ. ಎಸ್ಟೇಟ್ ಓನರ್ ಪಾತ್ರವನ್ನು ಗುರು ಕಿರಣ್ ನಿರ್ವಹಿಸಿದ್ದಾರೆ. ಇದು ಚಿತ್ರಕ್ಕೆ ತುಂಬಾ ಮಹತ್ವದ ರೋಲ್ ಆಗಿದೆ ಎಂದು ನವನೀತ್ ತಿಳಿಸಿದ್ದಾರೆ.

ಗುರು ಕಿರಣ್ ಬಹು ದಿನಗಳ ಬಳಿಕ ಮತ್ತೊಮ್ಮೆ ನಟಿಸುತ್ತಿರುವುದು ಹೊಸ ನಿರೀಕ್ಷೆ ಹುಟ್ಟುಹಾಕಿದೆ.


—–

Be the first to comment

Leave a Reply

Your email address will not be published. Required fields are marked *

Translate »
error: Content is protected !!