Mata Movie : ಮಠ ಚಿತ್ರದ ಬಗ್ಗೆ ಅಪಪ್ರಚಾರ ಬೇಡ

ಮಠ ಚಿತ್ರದ ಬಗ್ಗೆ ಅಪಪ್ರಚಾರ ಮಾಡದಂತೆ ಚಿತ್ರತಂಡ ಕಾಳಿ ಸ್ವಾಮಿ ಜೊತೆ ನಡೆಸಿರುವ ಫೋನ್ ಸಂಭಾಷಣೆ ವೈರಲ್ ಆಗಿದೆ.

ಹರೀಶ್ ಕುಂದೂರು ಜೊತೆ ಮಾತನಾಡಿರುವ ಕಾಳಿ ಸ್ವಾಮಿ, ಮಠಗಳು ಯಾವುದೇ ಅಕ್ರಮ ಮಾಡಿದ್ದರೆ ಮುರುಘಾ ಮಠ ಅಥವಾ ಇನ್ನೊಂದು ಮಠ ಎಂದು ಹೆಸರು ಹಾಕಿ ಚಿತ್ರ ಮಾಡಿ. ಮಠ ಹೆಸರು ಯಾಕೆ ಇಟ್ಟಿದ್ದೀರಿ? ಸಾಬರ ಚಿತ್ರ ಮಾಡಲು ನಿಮಗೆ ಧೈರ್ಯ ಇದೆಯೇ ಎಂದು ವಾದ ಮಾಡಿದ್ದಾರೆ.

ಹರೀಶ್ ಕುಂದೂರು, ನಿಮಗೆ ಏನು ಬೇಕು? ಈ ಬಗ್ಗೆ ತಪ್ಪು ಕೇಳಿದ ವಿಡಿಯೋ ಮಾಡಿ ಚಿತ್ರ ಬಿಡುಗಡೆಗೆ ಅವಕಾಶ ಮಾಡಿಕೊಡಬೇಕು ಎಂದು ಹೇಳಿದರು. ಈ ಬಗ್ಗೆ ಮಾತನಾಡಿದ ಕಾಳಿ ಸ್ವಾಮಿ, ನಾನು ಚಿತ್ರ ಬಿಡುಗಡೆ ಆಗದಂತೆ ಸ್ಟೇ ತರುವೆ ಎಂದರು.

ನೀವು ಬಾಳೆ ಹೊನ್ನೂರು, ಪೇಜಾವರ, ಸಿದ್ಧಗಂಗಾ ಮಠಕ್ಕೆ ಹೋಗಿ ಚಿತ್ರ ತೋರಿಸಿದ್ದೀರ? ಅದು ಹೇಗೆ ಮಠದ ಬಗ್ಗೆ ಮಾಡುತ್ತೀರಿ ಎಂದು ಸ್ವಾಮಿ ಪ್ರಶ್ನಿಸಿದರು.

ಈ ಬಗ್ಗೆ ಮಾತನಾಡಿರುವ ಹರೀಶ್ ಕುಂದೂರು, ಚಿತ್ರದ ಟ್ರೈಲರ್ ನೋಡಿ ಮಾತನಾಡುವುದು ಬೇಡ. ಚಿತ್ರ 18ರಂದು ಬಿಡುಗಡೆ ಆಗಲಿದೆ. ಚಿತ್ರ ನೋಡಿ. ಈಗ ತೊಂದರೆ ಕೊಡಬೇಡಿ. ಇಲ್ಲಿ ವಾಸ್ತವದ ಸನ್ನಿವೇಶ ಇದೆ. ಪ್ರಶ್ನೆ ಮಾಡುವುದಾದರೆ ಸೆನ್ಸಾರ್ ಗೆ ಮಾಡಿ ಎಂದು ಸಮರ್ಥನೆ ನೀಡಿದರು.

ಈಗ ಚಿತ್ರ ತೋರಿಸಲು ಸಮಯ ಇಲ್ಲ. ರಿಲೀಸ್ ಗೆ ಅವಕಾಶ ಸಿಕ್ಕಿದೆ. ತುಂಬಾ ಕೆಲಸ ಇದೆ. ಚಿತ್ರ ನಿಂತುಕೊಂಡರೆ ನಿಂತುಕೊಳ್ಳಲಿ. ಅದರಲ್ಲೇನಿದೆ ಎಂದು ಕಾಳಿ ಸ್ವಾಮಿಯ ಅಭಿಮಾನಿ ಜೊತೆಗೆ ನಡೆಸಿದ ದೂರವಾಣಿ ಸಂಭಾಷಣೆಯಲ್ಲಿ ಹರೀಶ್ ಕುಂದೂರು ತಿಳಿಸಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!