ಹಾಡುವುದಕ್ಕೋ ಸೈ ಎಂದು ತೊರಿಸಿದ ಚಿಕ್ಕಣ್ಣ

ಎಂತಹದ್ದೇ ಪಾತ್ರ ಕೊಟ್ಟರ್ರು ಸೈ ನಟ ಚಿಕ್ಕಣ್ಣ ಅದಕ್ಕೆ ಜೀವ ತುಂಬುವ ಕಲಾವಿದ. ತನ್ನ ಹಾಸ್ಯದ ಮೂಲಕವೇ ಕೋಟ್ಯಂತರ ಕನ್ನಡಿಗರ ಹೃದಯ ಕದ್ದಿರುವ ಚಿಕ್ಕಣ್ಣ ನಾನು ಅಭಿನಯಸೋದಕ್ಕೆ ಮಾತ್ರ ಸೀಮಿತವಲ್ಲ. ಕೈಗೆ ಮೈಕ್ ಸಿಕ್ರೆ ಸೂಪರ್ ಆಗೇ ಹಾಡಬಲ್ಲೆ ಅನ್ನೋದನ್ನು ಪ್ರೂ ಮಾಡಿದ್ದಾರೆ. ಸದ್ಯ ಮಾಸ್ಟರ್ ಪೀಸ್ ಸಿನಿಮಾದ ನಿರ್ದೇಶಕ ಮಂಜು ಮಾಂಡವ್ಯರ ಭರತ ಬಾಹುಬಲಿ ಸಿನಿಮಾದಲ್ಲಿ ಅಭಿನಯಿಸ್ತಾ ಇರೋ ಚಿಕ್ಕಣ್ಣ ತಮ್ಮ ಸಿನಿಮಾ ತಂಡದವರಿಗಾಗಿ ಹಾಡೊಂದನ್ನು ಹಾಡಿದ್ದಾರೆ. ಕಾಣದ ಕಡಲಿಗೆ ಹಂಬಲಿಸಿದೆ ಮನ ಹಾಡನ್ನು ಚಿಕ್ಕಣ್ಣ ಸೂಪರ್ ಆಗಿ ಹಾಡಿದ್ದಾರೆ. ಇನ್ನು ಸಿನಿಮಾವನ್ನು ಮಾಸ್ಟರ್ ಪೀಸ್ ನಂತಹ ಸೂಪರ್ ಹಿಟ್ ಸಿನಿಮಾವನ್ನು ನಿರ್ದೇಶಿಸಿದ್ದ ಮಂಜು ಮಾಂಡವ್ಯ ಅವರು ನಿರ್ದೇಶನ ಮಾಡುತ್ತಿದ್ದು, ಚಿತ್ರದಲ್ಲಿ ಅವರು ಇದೇ ಮೊದಲ ಬಾರಿಗೆ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಸದ್ಯ ಸಿನಿಮಾ ಚಿತ್ರೀಕರಣ ಹಂತದಲ್ಲಿದ್ದು ನವೆಂಬರ್ ನಲ್ಲಿ ಸಿನಿಮಾವನ್ನು ಬಿಡುಗಡೆ ಮಾಡುವ ಪ್ಲಾನ್ ನಲ್ಲಿದೆ ಸಿನಿಮಾ‌ತಂಡ..

Be the first to comment

Leave a Reply

Your email address will not be published. Required fields are marked *

Translate »
error: Content is protected !!