ಮಾರ್ಚ್‌ 1 ರಂದು ‘ಪುರುಷೋತ್ತಮನ‌ ಪ್ರಸಂಗ’ ರಿಲೀಸ್

ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ನಿರ್ದೇಶನದ ‘ಪುರುಷೋತ್ತಮನ‌ ಪ್ರಸಂಗ’ ಚಿತ್ರ ಮಾರ್ಚ್‌ 1 ರಂದು ತೆರೆ ಕಾಣುತ್ತಿದೆ.

ನಟ ಶರಣ್‌ ಚಿತ್ರದ ಟ್ರೇಲರ್‌ ಬಿಡುಗಡೆಗೊಳಿಸಿ ತಂಡಕ್ಕೆ ಶುಭ ಹಾರೈಸಿದ್ದಾರೆ.

”ಚಿತ್ರದ ಶೀರ್ಷಿಕೆ ಮನ ಮುಟ್ಟುವಂತಿದೆ. ಪುರುಷೋತ್ತಮ ಎಂದರೆ ರಾಮ. ಆತನ ಹೆಸರಿನಲ್ಲೇ ಜಯವಿದೆ. ಚಿತ್ರದ ಟ್ರೇಲರ್‌ಗೆ ಮಂಗಳೂರಿನ ಭಾಷೆಯಲ್ಲಿ ಧ್ವನಿ ನೀಡಿದ್ದೇನೆ. ಅಲ್ಲಿನ ಸೊಗಡಿನ ಚಿತ್ರದಲ್ಲಿ ನಟಿಸುವ ಆಸೆಯಿದೆ” ಎಂದಿದ್ದಾರೆ ಶರಣ್‌.

ರಾಷ್ಟ್ರಕೂಟ ಪಿಕ್ಚರ್ಸ್ ಲಾಂಛನದಲ್ಲಿ ವಿ.ರವಿಕುಮಾರ್ ನಿರ್ಮಿಸಿರುವ ಚಿತ್ರದಲ್ಲಿ ಅವರ ಪುತ್ರ ಅಜಯ್, ರಿಷಿಕಾ ನಾಯ್ಕ್ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ.

”ದುಬೈಗೆ ಹೋಗಲು ಪುರುಷೋತ್ತಮ ಏನೆಲ್ಲಾ ಮಾಡುತ್ತಾನೆ ಎಂಬುದನ್ನು ನಿರ್ದೇಶಕರು ಈ ಚಿತ್ರದಲ್ಲಿ ಹಾಸ್ಯದ ಮೂಲಕ ತೋರಿಸಿದ್ದಾರೆ. ನನಗೆ ಮೊದಲಿನಿಂದಲೂ ರಂಗಭೂಮಿಯ ನಂಟು. ಟೊರಾಂಟೊ ಯೂನಿವರ್ಸಿಟಿಯಲ್ಲಿ ನಟನೆ ಕುರಿತು ಅಭ್ಯಾಸ ಮಾಡಿ, ಕೆಲ ಚಿತ್ರಗಳಲ್ಲಿ ಕೆಲಸ ಮಾಡಿ ನಾಯಕನಾಗಿದ್ದೇನೆ” ಎಂದು ಅಜಯ್ ತಿಳಿಸಿದ್ದಾರೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!