ಕಿಚ್ಚ ಸುದೀಪ್​ ಕಂಠದಾನ ಮಾಡಿರುವ ಸಿನಿಮಾದ ಟ್ರೇಲರ್​..!

ಒಳ್ಳೆಯ ಸಮಾಜ ಬೇಕು ಅಂದರೆ ಯಾರಾದರೂ ಕೋಪ ಮಾಡಿಕೊಳ್ಳಲೇ ಬೇಕು. ಇದು ಕಿಚ್ಚ ಸುದೀಪ್ ಹೇಳಿರೋದು. ‘ತಾಯಿಗೆ ತಕ್ಕ ಮಗ’ ಚಿತ್ರಕ್ಕಾಗಿ ಕಂಠದಾನ ಮಾಡಿರುವ ಸುದೀಪ್, ಚಿತ್ರದಲ್ಲಿನ ನಾಯಕನ ಪಾತ್ರ ಏನೂ ಅನ್ನೋದನ್ನ ಅದೊಂದೇ ಲೈನ್ ಮೂಲಕ ಹೇಳಿ ಬಿಟ್ಟಿದ್ದಾರೆ.ಹೌದು ಇಲ್ಲಿಯವರೆಗೂ ರೊಮ್ಯಾಂಟಿಕ್ ಲವರ್​ ಬಾಯ್​ ಅವತಾರದಲ್ಲಿಯೇ ಹೆಚ್ಚು ಕಾಣಿಸಿಕೊಂಡಿದ್ದ ಅಜಯ್ ರಾವ್ ಈ ಚಿತ್ರದಲ್ಲಿ ಸಮಾಜದ ಅವ್ಯವಸ್ಥೆಯ ವಿರುದ್ಧ ಹೋರಾಡುವ ಪಾತ್ರದಲ್ಲಿ ಕಾಣಿಸಿಕೊಂಡಿರೋದು ಟ್ರೇಲರ್​ನಿಂದ ಗೊತ್ತಾಗುತ್ತದೆ. ಸಂವೇದನೆಯುಳ್ಳ ನಿರ್ದೇಶಕ ಅಂತಲೇ ಕರೆಸಿಕೊಳ್ಳೋ ಶಶಾಂಕ್​  ಅಜಯ್​ಗಾಗಿ `ಕೃಷ್ಣನ್ ಲವ್ ಸ್ಟೋರಿ’, `ಕೃಷ್ಣಲೀಲಾ’ ಚಿತ್ರಗಳನ್ನ ನಿರ್ದೇಶಿಸಿ, ಸ್ಯಾಂಡಲ್‍ವುಡ್ ಕೃಷ್ಣ ಎಂಬ ಇಮೇಜ್ ನೀಡಿದ್ದೂ ಸಹ ಇದೇ ಶಶಾಂಕ್​. ನಟಿ ಸುಮಲತಾ ಅಂಬರೀಷ ಇಲ್ಲಿ ಅಜಯ್ ರಾವ್‍ಗೆ ಅಮ್ಮನಾಗಿ ಕಾಣಿಸಿಕೊಂಡಿದ್ದಾರೆ. ಪಾರ್ವತಿ ಎಂಬ ವಕೀಲೆಯಾಗಿ ವ್ಯವಸ್ಥೆಯ ವಿರುದ್ಧ ಸಿಡಿದೇಳಲು ಮಗನಿಗೆ ಬೆಂಗಾವಲಾಗಿ ನಿಲ್ಲುವ ಪಾತ್ರ ಸುಮತಾ ಅವರದ್ದು.

ಮುಗುಳುನಗೆ ಚೆಲುವೆ ಆಶಿಕಾ ನಾಯಕಿಯಾಗಿ ನಟಿಸಿದ್ದು, ಅಚ್ಯುತ್‍ರಾವ್, ಸಾಧುಕೋಕಿಲಾ ಸೇರಿದಂತೆ ದೊಡ್ಡ ತಾರಬಳಗವೇ ಇರೋ ಈ ಚಿತ್ರದ ಟ್ರೈಲರ್​ ಒಂದು ಮಟ್ಟಕ್ಕೆ ಹವಾ ಎಬ್ಬಿಸೋಕೆ ಶುರು ಮಾಡಿರೋದು ಸುಳ್ಳಲ್ಲ

Be the first to comment

Leave a Reply

Your email address will not be published. Required fields are marked *

Translate »
error: Content is protected !!