ಸಮಾಜಮುಖಿ ಕೆಲಸಗಳನ್ನು ಮಾಡಿ ಬರ್ತಡೇ ಆಚರಿಸಿಕೊಂಡ ಚಿತ್ರನಟಿ ಸಮಾಜ ಸೇವಕಿ ಡಾ. ಪೂಜಾ ರಮೇಶ್

ಡಾ. ಪೂಜಾ ರಮೇಶ್ ಇತ್ತೀಚಿಗೆ ರಾಯಚೂರಿನ ರಾಜಕೀಯದಲ್ಲಿ ಸಿನಿಮಾ ಕ್ಷೇತ್ರದಲ್ಲಿ ಹಾಗೂ ಸಮಾಜಮುಖಿ ಕೆಲಸಗಳಿಂದಲೇ ಹೆಸರುವಾಸಿಯಾಗಿರುವ ಡಾ. ಪೂಜಾ ರಮೇಶ್ ಅವರು ಈ ವರ್ಷದ ಬರ್ತಡೆ ದಿನದಂದು ಹಲವು ಸಮಾಜಮುಖಿ ಕೆಲಸಗಳನ್ನು ಮಾಡಿ ಬರ್ತಡೆ ಆಚರಿಸಿಕೊಂಡಿದ್ದು ವಿಶೇಷವಾಗಿತ್ತು ,

ಕಳೆದ ವರ್ಷಕ್ಕಿಂತ ಈ ವರ್ಷ ವಿಶೇಷವಾಗಿ ಒಳ್ಳೆಯ ಕೆಲಸಗಳಿಂದಲೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದು ನಮ್ಮ ಮನಸ್ಸಿಗೆ ಖುಷಿ ಕೊಟ್ಟಿದೆ ಎಂದು ಹೇಳಿಕೊಂಡಿದ್ದಾರೆ. ತಮ್ಮ ತಾಯಿಯ ವಸಂತ ಲಕ್ಷ್ಮಿ ಫೌಂಡೇಶನ್ ಸಂಸ್ಥೆಯಿಂದ ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ಬ್ಯಾಗ್ ನೀಡಿ ಪುನೀತ್ ರಾಜಕುಮಾರ್ ಅವರ ಸಮಾಧಿ ಬಳಿ ಅಭಿಮಾನಿಗಳಿಗೆ ಅನ್ನದಾನ ಮಾಡಿ, ಬ್ಲೈಂಡ್ ( ಅಂದ ಮಕ್ಕಳಿಗೆ ) ಊಟದ ಜವಾಬ್ದಾರಿಯನ್ನು ವ್ಯವಸ್ಥೆ ಮಾಡಿಸಿ ತಮ್ಮ ಬರ್ತಡೆ ದಿನದಂದು ಒಂದು ಅರ್ಥಪೂರ್ಣ ಹುಟ್ಟುಹಬ್ಬವಾಗಿ ಆಚರಿಸಿಕೊಂಡಿದ್ದು . ಅವರ ಈ ಕಾರ್ಯಕ್ಕೆ ಎಲ್ಲಾ ಕಡೆ ಜನ ಮನ್ನಣೆ ಸಿಗುತ್ತಿದೆ ,ಇದೇ ರೀತಿ ಹಲವು ಕಾರ್ಯಕ್ರಮಗಳನ್ನು ಸಮಾಜಮುಖಿ ಕೆಲಸಗಳನ್ನು ಮಾಡಲು ದೇವರು ಆಯಸ್ಸು ಆರೋಗ್ಯ ಕೊಡಲಿ ಎಂದು ಪ್ರಾರ್ಥಿಸುತ್ತೇವೆ, ಒಳ್ಳೆದಾಗಲಿ ನಿಮ್ಮ ಭವಿಷ್ಯಕ್ಕೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!