ಬ್ಲ್ಯಾಕ್ ಟಿಕೆಟ್ ಮಾರಾಟ ಮಾಡಿದ್ದೆ ಎಂದ ರವಿ ಚನ್ನಣ್ಣನವರ್

ಗದಗಿನ ಮಹಾಲಕ್ಷ್ಮೀ, ಶಾಂತಿ, ಕರ್ನಾಟಕ ಥಿಯೇಟರ್‌ನಲ್ಲಿ ಬ್ಲ್ಯಾಕ್ ಟಿಕೆಟ್ ಮಾರಾಟ ಮಾಡಿದ್ದೆ ಎಂದು ಐಪಿಎಸ್ ಅಧಿಕಾರಿ ರವಿ ಚನ್ನಣ್ಣನವರ್ ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಡಾರ್ಲಿಂಗ್’ ಕೃಷ್ಣ ಅಭಿನಯದ ‘ದಿಲ್‌ ಪಸಂದ್’ ಹೊಸ ಚಿತ್ರದ ಟೈಟಲ್‌ ಲಾಂಚ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನಾನು ಪಿಯುಸಿ ಓದುವಾಗ’ ಅಸುರ’ ಸಿನಿಮಾದ ಬ್ಲಾಕ್ ಟಿಕೆಟ್ ಮಾರಿದ್ದೆ. ‘ಯಜಮಾನ’, ‘ದಿಲ್ ಕಾ ರಿಶ್ತಾ’, ‘ಅಂಜಲಿ ಗೀತಾಂಜಲಿ’ ಸಿನಿಮಾಗಳು ಬಂದಾಗ ಹುಬ್ಬಳ್ಳಿಯಿಂದ ಟಿಕೇಟ್ ತೆಗೆದುಕೊಂಡು ಬರುತ್ತಿದ್ದೆ. ಥಿಯೇಟರ್‌ ಅನ್ನೋದು ನನ್ನ ಹವ್ಯಾಸಗಳಲ್ಲಿ ಒಂದು ಎಂದರು.

ಈ ಚಿತ್ರ ದೊಡ್ಡ ಯಶಸ್ಸು ಕಾಣುವಂತೆ ಆಗಲಿ. ಇದು ಗೆಲುವು ಕಾಣುವ ಜೊತೆಗೆ ಸಮಾಜಕ್ಕೆ ಸಂದೇಶವನ್ನು ಕೊಡುವ ಸಿನಿಮಾವಾಗಲಿ. ಈಚೆಗೆ ನಾನು ಬರವಣಿಗೆಯನ್ನು ಆರಂಭಿಸಿದ್ದೇನೆ. ಎಲ್ಲಿಯೂ ಪ್ರಕಟಗೊಳ್ಳದ ಒಂದಷ್ಟು ಕಥೆಗಳು ನನ್ನಲ್ಲಿವೆ. ನಾವು ಬರೆದ ಪುಸ್ತಕವನ್ನು ಜನರು ಓದುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ ಸಿನಿಮಾವನ್ನು ಎಲ್ಲರೂ ನೋಡುತ್ತಾರೆ. ಒಬ್ಬ ಮಹಾನ್‌ ವ್ಯಕ್ತಿ ಹೇಳಿದ ಮಾತುಗಳನ್ನು ಜನರು ನೆನಪಿಲ್ಲಿ ಇಡುತ್ತಾರೋ, ಇಲ್ಲವೋ ಗೊತ್ತಿಲ್ಲ. ಆದರೆ ಸಿನಿಮಾ ಡೈಲಾಗ್‌ಗಳನ್ನು ನೆನಪಿಟ್ಟುಕೊಳ್ಳುತ್ತಾರೆ. ನಾನು ಕಾಲೇಜಿನಲ್ಲಿರುವಾಗ ‘ಆರ್ಯ’ ಸಿನಿಮಾ ರಿಲೀಸ್ ಆಗಿತ್ತು. ಆಗ ಎಲ್ಲರೂ ಅದರ ಡೈಲಾಗ್‌ಗಳನ್ನು ಹೇಳುತ್ತಿದ್ದರು’ ಎಂದು ನೆನಪು ಮಾಡಿಕೊಂಡರು.

‘ದಿಲ್ ಪಸಂದ್’ ಸಿನಿಮಾವನ್ನು ಶಿವ ತೇಜಸ್ ನಿರ್ದೇಶನ, ಸುಮಂತ್ ಕ್ರಾಂತಿ ನಿರ್ಮಾಣ ಮಾಡುತ್ತಿದ್ದಾರೆ. ಡಾರ್ಲಿಂಗ್ ಕೃಷ್ಣ ಹೀರೋ ಆಗಿದ್ದು, ನಿಶ್ವಿಕಾ ನಾಯ್ಡು, ಮೇಘಾ ಶೆಟ್ಟಿ ನಾಯಕಿಯರಾಗಿ ಕಾಣಿಸಿಕೊಳ್ಳಲಿದ್ದಾರೆ. ಅರ್ಜುನ್ ಜನ್ಯ ಸಂಗೀತ ಚಿತ್ರಕ್ಕಿದೆ. ರಂಗಾಯಣ ರಘು, ತಬಲ ನಾಣಿ, ಸಾಧು ಕೋಕಿಲ ಇತರರು ನಟಿಸಲಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!