ನಟಿಗೆ ವಂಚನೆ: ದೂರು ದಾಖಲು

ಬಹುಭಾಷಾ ನಟಿ ಸ್ನೇಹಾ ಅವರು ಖಾಸಗಿ ಸಂಸ್ಥೆಯೊಂದು ತನಗೆ 25 ಲಕ್ಷ ರೂಪಾಯಿ ವಂಚಿಸಿದೆ ಎಂದು ತಮಿಳುನಾಡು ಪೊಲೀಸರಿಗೆ ದೂರು ನೀಡಿದ್ದಾರೆ. ಸ್ನೇಹಿತರೊಬ್ಬರ ಸಲಹೆ ಮೇರೆಗೆ ಸಿಮೆಂಟ್ ತಯಾರಿಕಾ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದ್ದೆ. ಸಂಸ್ಥೆಯ ಪ್ರತಿನಿಧಿ ಪ್ರತಿ ತಿಂಗಳು ಹೆಚ್ಚಿನ ಆದಾಯ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಕಂಪನಿ ತನ್ನ ಭರವಸೆ ಉಳಿಸಿಕೊಳ್ಳಲು ವಿಫಲವಾಗಿದೆ ಎಂದು ನಟಿ ಸ್ನೇಹಾ ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ನಟಿ ಚೆನ್ನೈನ ನೀಲಂಕರೈ ಪೊಲೀಸರಿಗೆ ದೂರು ನೀಡಲಾಗಿದ್ದು, ನಂತರ ಚೆನ್ನೈನ ಕಾನತ್ತೂರು ಪೊಲೀಸರಿಗೆ ಈ ದೂರನ್ನು ವರ್ಗಾಯಿಸಲಾಗಿದೆ ಎಂದು ತಿಳಿದು ಬಂದಿದೆ. ಅಲ್ಲದೇ ದೂರಿನಲ್ಲಿ ಹೆಸರಿಸಲಾದ ವ್ಯಕ್ತಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
“25 ಲಕ್ಷ ರೂ.ನ್ನು ಆನ್‌ಲೈನ್‌ ಮೂಲಕ ಪಾವತಿಸಿದ್ದು, ಇನ್ನುಳಿದ 1 ಲಕ್ಷ ರೂ. ಹಣವನ್ನು ನಗದು ರೂಪದಲ್ಲಿ ನೀಡಲಾಗಿದೆ. ತಾನು ಹೂಡಿಕೆ ಮಾಡಿದ 26 ಲಕ್ಷ ರೂಪಾಯಿಗಳಲ್ಲಿ ಯಾವುದೇ ಆದಾಯ ಪಡೆಯದ ಕಾರಣ ಹಣವನ್ನು ಹಿಂತಿರುಗಿಸಲು ಅಥವಾ ಬಡ್ಡಿ ನೀಡಲು ಕೇಳಿದ್ದೆ. ಆದರೆ ಹಣ ಅಥವಾ ಬಡ್ಡಿ ನೀಡಲು ಉದ್ಯಮಿಗಳು ನಿರಾಕರಿಸಿದ್ದಲ್ಲದೆ ತನ್ನ ವಿರುದ್ಧ ಬೆದರಿಕೆ ಹಾಕಿದ್ದಾರೆ” ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ನಟಿ ಆರೋಪಿಸಿದ್ದಾರೆ.

ಸ್ನೇಹಾ ಅವರು ಕೊನೆಯದಾಗಿ ಧನುಷ್ ಅವರ ‘ಪಟ್ಟಾಸ್’ನಲ್ಲಿ ಕಾಣಿಸಿಕೊಂಡಿದ್ದರು. ಪ್ರಸ್ತುತ ವೆಂಕಟ್ ಪ್ರಭುವಿಗೆ ಜೋಡಿಯಾಗಿ ‘ಶಾಟ್ ಭೂತ್ 3’ ಎಂಬ ಮಕ್ಕಳ ಮನರಂಜನೆಯ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಕಮಲ್ ಹಾಸನ್, ರವಿಚಂದ್ರನ್‌, ವಿಜಯ್, ಅಜಿತ್, ಸೂರ್ಯ, ವಿಕ್ರಮ್, ಸಿಂಬು, ಧನುಷ್ ಅವರಂಥ ಟಾಪ್ ಸ್ಟಾರ್‌ಗಳ ಎದುರು ನಾಯಕಿಯಾಗಿ ಸ್ನೇಹಾ ನಟಿಸಿದ್ದಾರೆ. ಅವರು ನಟ ಪ್ರಸನ್ನರೊಂದಿಗೆ ಮದುವೆಯಾಗಿದ್ದು ಈ ದಂಪತಿಗೆ ಒಬ್ಬ ಮಗ ಮತ್ತು ಮಗಳು ಇದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!