“ಚಂದಮಾಮ” ಪೋಸ್ಟರ್ ಬಿಡುಗಡೆ ಮಾಡಿದ ಮನುರಂಜನ್

ಬೆಳ್ಳಿ ಪರದೆ ಮೇಲೆ ಬಹಳಷ್ಟು ಯುವ ಪ್ರತಿಭೆಗಳು ವಿಭಿನ್ನ ಶೀರ್ಷಿಕೆಯ ಮೂಲಕ ಪ್ರೇಕ್ಷಕರ ಮನಸ್ಸನ್ನ ಸೆಳೆಯಲು ಬರುತ್ತಿದ್ದಾರೆ. ಆ ನಿಟ್ಟಿನಲ್ಲಿ “ಚಂದಮಾಮ” ತಂಡವೂ ಕೂಡ ಈಗ ಮುಂಚೂಣಿಯಲ್ಲಿದೆ. ಮಧು ವೈ.ಜಿ.ಹಳ್ಳಿ ನಿರ್ದೇಶನದ , ಆಕಾಶ್ ದೀಪಾ ಹಾಗೂ ಅಫ್ಜಲ್ ಅಭಿನಯದ “ಚಂದಮಾಮ” ಚಿತ್ರದ ಪೋಸ್ಟರನ್ನು ಮೆಗಾ ಕ್ರೇಜಿಸ್ಟಾರ್ ಮನುರಂಜನ್ ರವಿಚಂದ್ರನ್ ಬಿಡುಗಡೆ ಮಾಡಿ ಶುಭ ಹಾರೈಸಿದರು.

ಚಂದಮಾಮ ಚಿತ್ರಕ್ಕೆ ಕೀರ್ತಿಚಂದ್ರ ಸಂಗೀತ, ಶ್ರೀ ಅವರ ಛಾಯಾಗ್ರಹಣ ಹಾಗೂ ಉಡುಪಿ ಕೃಷ್ಣ ಆಚಾರ್ಯ ಅವರ ಸಂಭಾಷಣೆಯಿದೆ. ತ್ರಿವೇಣಿ ಗಾಂಧಿ, ಸತೀಶ್ ಹಾಗೂ ಅಸ್ಲಂ ಖಾನ್ ಚಿತ್ರದ ನಿರ್ಮಾಪಕರು. ಒಂದೇ ದಿನದಲ್ಲಿ ನಡೆಯುವ ಗ್ರಾಮೀಣ ಸೊಬಗಿನ ರೆಟ್ರೋ ಸ್ಟೈಲ್ ನ ವಿನೂತನ ಚಿತ್ರ ಇದಾಗಿದೆ. ಈಗಾಗಲೇ ಬಿಡುಗಡೆಯಾಗಿರುವ ಶೀರ್ಷಿಕೆ ಎಲ್ಲರ ಗಮನವನ್ನು ಸೆಳೆದಿದು, ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!