ಡಿ.ಪಿ.ಕಂಬೈನ್ಸ್ ಮೂಲಕ ಉದ್ಯಮಿ‌ ಡಿ.ಪಿ.ವೆಂಕಟೇಶ್ ಅವರು ‌ಈ‌ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಮಹೇಶ್ ಪಿ ( ತಿಟ್ಟಮಾರನ ಹಳ್ಳಿ ಚನ್ನಪಟ್ಟಣ) ಈ ಚಿತ್ರದ‌ ಕಾರ್ಯಕಾರಿ ನಿರ್ಮಾಪಕರು.

ಡಿ.ಪಿ.ವೆಂಕಟೇಶ್ ಅವರೆ ಕಥೆ,ಚಿತ್ರಕಥೆ,ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ವಿ.ಮನೋಹರ್ ಸಂಗೀತ ನೀಡುತ್ತಿದ್ದಾರೆ.ಜುಲೈ 2 ರಂದು ಕುಮಾರಸ್ವಾಮಿ ಲೇಔಟ್ ನ ಪಾರೇಕ್ ಸ್ಟುಡಿಯೋದಲ್ಲಿ ಹಾಡುಗಳ ಧ್ವನಿಮುದ್ರಣ ಆರಂಭವಾಗಿದೆ.

ಜುಲೈ 2 ನನ್ನ ಆಪ್ತ ಸ್ನೇಹಿತ ಮಹೇಶ್ ಹುಟ್ಟುಹಬ್ಬ.‌ ಹಾಗಾಗಿ ಅಂದಿನಿಂದ ಚಿತ್ರದ ಹಾಡುಗಳ ಧ್ವನಿಮುದ್ರಣ ಆರಂಭಿಸಿರುವುದಾಗಿ‌ ನಿರ್ಮಾಪಕ – ನಿರ್ದೇಶಕ ಡಿ.ಪಿ.ವೆಂಕಟೇಶ್ ತಿಳಿಸಿದ್ದಾರೆ.

ಕೊರೋನ‌ ಹಾವಳಿ‌ ಕಡಿಮೆಯಾದ ನಂತರ ಚಿತ್ರೀಕರಣ ಆರಂಭವಾಗಲಿದೆ. ಬೆಂಗಳೂರು, ಮಡಿಕೇರಿಯಲ್ಲಿ 40 ದಿನಗಳ ಚಿತ್ರೀಕರಣ ನಡೆಯಲಿದೆ.ಚಿತ್ರದಲ್ಲಿ ಮೂರು‌ ಸಾಹಸ ಸನ್ನಿವೇಶಗಳಿದ್ದು, ಥ್ರಿಲ್ಲರ್ ‌ಮಂಜು, ಕೌರವ ವೆಂಕಟೇಶ್ ಸಾಹಸ ಸಂಯೋಜನೆ ಮಾಡಲಿದ್ದಾರೆ.

ಚಿತ್ರದ ನಾಯಕನ‌ ಪಾತ್ರಕ್ಕಾಗಿ ಕನ್ನಡದ ಖ್ಯಾತ ನಟರೊಂದಿಗೆ ಮಾತುಕತೆ ನಡೆಯುತ್ತಿದೆ. ಸದ್ಯದಲ್ಲೇ ಚಿತ್ರದ ಕಲಾವಿದರ ಹಾಗೂ ಉಳಿದ ತಂತ್ರಜ್ಞರ ಮಾಹಿತಿ ನೀಡುವುದಾಗಿ ಡಿ.ಪಿ.ವೆಂಕಟೇಶ್ ತಿಳಿಸಿದ್ದಾರೆ.