ಮಾಧ್ಯಮಗಳೇ ಹೇಳಿ ಇದು‌ ನ್ಯಾಯವೇ..?!

ಕನ್ನಡದ ಎಲ್ಲಾ ದೃಶ್ಯ ಮಾಧ್ಯಮ ಮತ್ತು ಮುದ್ರಣ ಮಾಧ್ಯಮದ ಮಾಲೀಕರಿಗೆ ಒಂದು ನಿವೇದನೆ…

– ನೀವು ಕರೋನಾ ಕಾಲದ ತುರ್ತಿನ ಕೆಲಸ ಮಾಡ್ತಾ ಇದ್ದೀರಿ .ಜನತೆಯ ಪರವಾಗಿ ಧನ್ಯವಾದಗಳು.
ಈಗೀಗ ಹಲವಾರು ಮಾಧ್ಯಮದ ನೌಕರರು ಪತ್ರಕರ್ತರಿಗೆ ಕರೋನಾ ಪಾಸಿಟಿವ್ ಎಂಬ ಸುದ್ದಿಗಳಿವೆ.
ಇಡೀ ಜಗತ್ತೇ ಕರೋನಾ ಕಾಲಘಟ್ಟದಲಿ ಹೀಗಿಗಿರಬೇಕು ಎಂದು ಜಾಗೃತಿ ಮೂಡಿಸಿರುವ ನೀವುಗಳು ಈಗ ಮತ್ತೆ ಸತ್ಯ ಸಂಧರಾಗುವ ಸದವಾಕಾಶ ಬಂದಿದೆ.

1.ನಿಮ್ಮ ಕಛೇರಿಗಳಲ್ಲಿ ಸೋಷಿಯಲ್ ಡಿಸ್ಟನ್ಸ್ ನಿಭಾಯಿಸುತ್ತಿದ್ದೀರಾ ? ಹೇಗೆ ಒಂಧರ್ಧ ಗಂಟೆ ಸುದ್ದಿ ಮಾಡಿ.

2.ಹೊರಗೆ ಓಡಾಡುವವರೂ ಡೆಸ್ಕ್ ನಲ್ಲಿರುವವರನ್ನು ಹೇಗೆ ವಿಂಗಡಿಸಿದ್ದೀರಿ.ಹೊರಗೆ ಓಡಾಡುವವರ ಸುರಕ್ಷತೆ ಏನು?ಆಗಾಗ್ಗೆ ಪರೀಕ್ಷೆ ಮಾಡಿಸುತ್ತಿದ್ದೀರಾ? ವಿವರ ಹೇಳಿ

3.ಕನಿಷ್ಠ ಸ್ಯಾನಿಟೈಜರ್ ಇಟ್ಟಿಲ್ಲ ನೆಪ ಮಾತ್ರಕ್ಕೆ ಟೆಂಪರೇಚರ್ ಪರೀಕ್ಷೆ ಮಾಡಲಾಗುತ್ತದೆ.ಹಲವಾರು ಕಂಪನಿಗಳು ಕಳಿಸಿರೋ ಮಾಸ್ಕ್ ಸ್ಯಾನಿಟೈಜರ್ ಇತ್ಯಾದಿ ಇತ್ಯಾದಿ ಗಳ ದುರ್ಬಳಕೆ ಎಂದುಬಲ್ಲ ಮೂಲಗಳು ಹೇಳುತ್ತಿವೆ.ಏನೇಳ್ತೀರಾ ನೀವು ಮಾಲೀಕರು ?

5.ಊರಿಗೆಲ್ಲ ಬುದ್ಧಿ ಹೇಳುವ ಪಾಂಡಿತ್ಯ ಇರುವ ನೀವು ಯಾಕೆ ನೌಕರರ ಕಡಿತ – ನಿಮ್ಮಲ್ಲಿ ವರುಷಗಟ್ಟಲೇ ದುಡಿದವರ ಕೆಲಸದಿಂದ ತೆಗೆಯುತ್ತಿದ್ದೀರಿ .ಅನ್ಯಾಯವಲ್ಲವೇ ಮೈ ಲಾರ್ಡ್ ಗಳೇ?

6.ಮಾಧ್ಯಮದ ಪತ್ರಿಕಾ ಕಛೇರಿಗಳು ಶಿಫ್ಟ್ ಆಗುತ್ತಿವೆಯಲ್ಲ ಯಾಕೆ ಸಂಗಾತಿಗಳೇ ?

7.ನಿಮ್ ವಾಹನ ಚಾಲಕರ ಫುಡ್ ಕ್ಯಾಂಟೀನ್ ಶುಚಿತ್ವದ ವಿಭಾಗ ಮೇಕಪ್ ಕಾಸ್ಟೂಮ್ ತಾಂತ್ರಿಕ ವಿಭಾಗದ ನೌಕರರನ್ನ ಸುರಕ್ಷಿತವಾಗಿಟ್ಟುಕೊಂಡಿದ್ದೀರಾ? ನನಗೆ ಅನುಮಾನವಿದೆ ಬಗೆ ಹರಿಸ್ತೀರಾ ?Nation wants to know

8.ಈ ಹಂತದಲಿ ರಜೆ ಕೊಡಿ ಮನೇಲಿ ಪುಟ್ಟ ಮಗು ವಯಸಾದ ತಾಯಿ ತಂದೆ ಇದ್ದಾರೆ ಅಂದರೆ ಈಗ ರಜೆ ಇಲ್ಲವೇ ಇಲ್ಲ ಏನಿದ್ರೂ ಕಿಕ್ ಔಟ್ ಅಂತಾ ಇದೀರಲ್ಲಾ?ಯಾಕೆ ನಾಲ್ಕನೇ ಅಂಗವೇ? ಏನು ಹೆಡ್ಡಿಂಗ್ ಕೊಡಲಿ ಇದಕ್ಕೆ?

9.ಪತ್ರಕರ್ತ ಜೀವ ಅಡವಿಟ್ಟು ದುಡಿಯುತ್ತಿದ್ದಾನೆ? ನಿಜ ಹೇಳಿ ಮೊದಲೇ ಸಂಬಳ ಸರಿಯಾಗಿ ಕೊಡುತ್ತಿರಲಿಲ್ಲ .ಈಗವರ ಮನೆಯಲ್ಲಿ ದಿನಸಿಗಾದರೂ ವ್ಯವಸ್ಥೆ ಮಾಡಿದ್ದೀರಾ ?

10.ಈ ಸಂಧರ್ಭದಲೂ ಜನಸೇವೆಯ ಹೆಸರಿನ ಪ್ಯಾಕೇಜ್ ಸುದ್ದಿಗಳು ಬೇಕಾ? ಇದರಿಂದ ಮಾಲೀಕರಿಗಷ್ಟೇ ಉಪಯೋಗ ಅಲ್ಲವಾ?… ಮಾಧ್ಯಮಗಳ ನಡೆಸುವ ಕಷ್ಟ ನನಗೂ ಗೊತ್ತು ಆದರೂ ತೀರಾ ಹೊನ್ನಶೂಲವ ಹಿಡಿಯುವುದು … Allright ಮುಂದೆ ಹೋಗೋಣ

11.ಬೇರೆ ರಾಜ್ಯಗಳಲ್ಲಿನ ಮಾಧ್ಯಮ ಸಂಗಾತಿಗಳ ಕರೋನಾ ಪಾಸಿಟಿವ್ ಮಾಹಿತಿ ತಿಳಿದು ನೊಂದು ಕೇಳುತ್ತಿದ್ದೇನೆ.ನಿಮ್ಮ ನಿಮ್ಮ ನೌಕರರು ಸುರಕ್ಷಿತವಾಗಿರುವುದರ ಬಗ್ಗೆ ಆ ಮೂಲಕ ಅವರ ಕುಟುಂಬ ಅದರಿಂದ ಜಗವೆಂಬ ಕುಟುಂಬ ಸೇಫಾ? ಒಂಧರ್ಧ ಗಂಟೆ ಶೋ ಮಾಡಿ .common ಇದು ಕನ್ಧಡಿಯಾಗುವ ಸಮಯ

12.ಯಾವ ನಂಬಿಕೆಯ ಮೇಲೆ ಮಾಧ್ಯಮದ ಮಂದಿ ಬೀದಿಗಿಳಿದು ಕೆಲಸ ಮಾಡುತ್ತಿದ್ದಾರಲ್ಲಾ ? ಅವರ ನಂಬಿಕೆ ಜೀವನಪ್ರೇಮ ಉಳಿಸಿಕೊಳ್ಳಲು ಏನು ಮಾಡಿದ್ದೀರಿ ? ಸೈಕಾಲಜಿಕಲ್ strength ಗೆ ಏನಾದರೂ ಆಫರ್ ಗಳು ?

13.ಇನ್ನೂ ಐಡಿಯಾಲಜಿ ವಾರ್ ..ಒನ್ ಸೈಡಡ್ ಸ್ಟೋರೀಸ್ … ಆಳುವವರ ಕಡೆ ವಾಲುವ ಹಗ್ಗಜಗ್ಗಾಟ – ಪ್ರಚೋದನೆ ಮಾಡುತ್ತಲೇ ಇದ್ದೀರಲ್ವಾ ..ಇನ್ನೂ ಅತೃಪ್ತಿಯೇ ವ್ಯಾಸ ವಾಲ್ಮೀಕ ಪರಬ್ರಹ್ಮ ರೂಪಿಗಳೇ ?

14.ಮಾಲೀಕರಿಗೆ – ಮಾಲೀಕರಿಗಾಗಿ ನೌಕರರನ್ನ ಹಗಲಿರುಳು ದುಡಿಸಿಕೊಳ್ಳುವ ಎಲ್ಲ ಮುಖ್ಯಸ್ಥರಿಗೆ ಈ ಪ್ರಶ್ನೆ.
ಉತ್ತರಿಸಿ ಖಂಡಿತ ಇದರಲ್ಲಿ ಟಿ ಆರ್ ಪಿ ಇದೆ….
-ಚಕ್ರವರ್ತಿಚಂದ್ರಚೂಡ್
(ನಿಮ್ಮ ಹೆಗಲ ಗೆಳೆಯ )

Be the first to comment

Leave a Reply

Your email address will not be published. Required fields are marked *

Translate »
error: Content is protected !!