ನಿರ್ಮಾಪಕ, ಉದ್ಯಮಿ, ‘ಕಪಾಲಿ ಮೋಹನ್’ ಸೂಸೈಡ್!

ಅನೇಕ ಕನ್ನಡ ಚಿತ್ರಗಳಿಗೆ ಫಿನಾನ್ಸ್ ಮಾಡಿದ್ದ ಉದ್ಯಮಿ ಕಪಾಲಿ ಮೋಹನ್​ ಅವರು ಆತ್ಮಹತ್ಯಗೆ ಶರಣಾಗಿದ್ದು, ಆರ್ಥಿಕ ಸಮಸ್ಯೆ ಕಾರಣ ಎನ್ನುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

ಹಲವು ಕನ್ನಡ ಚಿತ್ರಗಳಿಗೆ ಫಿನಾನ್ಸ್ ಮಾಡಿದ್ದ ಉದ್ಯಮಿ ಕಪಾಲಿ ಮೋಹನ್ ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣದ ಬಳಿ ಇರುವ ಹೋಟೆಲ್​ವೊಂದರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಡಿಸಿಪಿ ಶಶಿಕುಮಾರ್ ಹಾಗೂ ಗಂಗಮ್ಮನಗುಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಆತ್ಮಹತ್ಯೆಗೆ ಆರ್ಥಿಕ ಸಮಸ್ಯೆ ಕಾರಣ ಎನ್ನುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಇವರು ಅಣ್ಣಾವ್ರ ಕುಟುಂಬದೊಂದಿಗೆ ಒಳ್ಳೆಯ ಸಂಬಂಧ ಹೊಂದಿದ್ದರು. ಸಿನಿಮಾ ನಿರ್ಮಾಪಕ, ವಿತರಕ, ಧಾರವಾಹಿ ನಿರ್ಮಾಪಕ ಹಾಗೂ ಹೋಟೆಲ್ ಉದ್ಯಮಿಯೂ ಆಗಿದ್ದರು.

ಮೂಲತಃ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ವಕ್ವಾಡಿ ಗ್ರಾಮದವರಾಗಿದ್ದು, ಹಲವು ವರ್ಷಗಳಿಂದ ನಗದಲ್ಲಿ ವಾಸವಾಗಿದ್ದಾರೆ. ಕಳೆದೊಂದು ವರ್ಷದ ಹಿಂದೆ ಹೈದ್ರಾಬಾದ್​​ನಿಂದ ವಿಮಾನದಲ್ಲಿ ಕೆಲವರನ್ನು ಕರೆಸಿಕೊಂಡು ಜೂಟಾಟ ನಡೆಸುತ್ತಿದ್ದ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಸದಾಶಿವನಗರದ‌ ಮನೆ ಹಾಗೂ ಕಚೇರಿ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು.

This Article Has 2 Comments
  1. Pingback: loyalty app

  2. Pingback: dyo cornhole boards

Leave a Reply

Your email address will not be published. Required fields are marked *

Translate »
error: Content is protected !!