‘ಮದುವೆ ಮಾಡ್ರಿ ಸರಿ ಹೋಗ್ತಾನೆ’ ಇದೆ ಶುಕ್ರವಾರ ತೆರೆಗೆ

ಉತ್ತರ ಕರ್ನಾಟಕ ಶೈಲಿಯಲ್ಲಿ ತಯಾರಾಗಿರುವ ‘ಮದುವೆ ಮಾಡ್ರಿ ಸರಿಹೋಗ್ತಾನೆ’ ಶಿವರಾಜ್ ಲಕ್ಷಣ ರಾವ್ ದೇಸಾಯಿ ಅವರ ನಿರ್ಮಾಣದ ಚಿತ್ರ ಈ ಶುಕ್ರವಾರ ಬಿಡುಗಡೆ ಆಗುತ್ತಿದೆ. ಎಲ್ ಎಲ್ ಡಿ ಪ್ರೊಡಕ್ಷನ್ ಅಡಿಯಲ್ಲಿ ಈ ಚಿತ್ರ ನಿರ್ಮಾಣ ಮಾಡಲಾಗಿದೆ.

ಗೋಪಿ ಕೆರೂರ್ ಕಥೆ, ಚಿತ್ರಕಥೆ ಹಾಗೂ ನಿರ್ದೇಶನದಲ್ಲಿ ೧೨ ಹಾಡುಗಳನ್ನು ಸಂಗೀತ ನಿರ್ದೇಶಕ ಅವಿನಾಶ್ ಬಸುತ್ಕರ್ ಸಿದ್ದ ಮಾಡಿದ್ದಾರೆ. ಡಾ ವಿ ನಾಗೇಂದ್ರ ಪ್ರಸಾದ್, ಕೆ ಕಲ್ಯಾಣ್, ಗೋಪಿ ಕೆರೂರ್ ಗೀತಸಾಹಿತ್ಯ ನೀಡಿದ್ದಾರೆ.

ನಿರ್ದೇಶಕ ಗೋಪಿ ಕೆರೂರ್ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವುದು ಮೊದಲ ಸಿನಿಮಾ ‘ರಂಕಲ್ ರಾಟೆ’ ಇಂದ ಶುರು ಆಗಿದೆ. ಈ ಚಿತ್ರದಲ್ಲಿ ಶಿವಚಂದ್ರ ಕುಮಾರ್ ಎಂಬ ಹೊಸ ನಾಯಕನನ್ನು ಪರಿಚಯಿಸುತ್ತಿದ್ದಾರೆ. ಆರಾಧ್ಯ ಚಿತ್ರದ ಕಥಾ ನಾಯಕಿ. ರಮೇಶ್ ಭಟ್, ಅರುಣ ಬಾಲರಾಜ್, ಕೃಷ್ಣಮೂರ್ತಿ ಕವತಾರ್, ಚಿತ್ಕಲಾ ಬಿರದಾರ್, ಮಿಮಿಕ್ರಿ ಗೋಪಿ, ಸದಾನಂದ ಕಾಳಿ, ಚಕ್ರವರ್ತಿ ದಾವಣಗೆರೆ ಹಾಗೂ ಇತರರು ಇದ್ದಾರೆ.
ಸುರೇಶ್ ಬಾಬು ಛಾಯಾಗ್ರಹಣ, ವೆಂಕಿ ಸಂಕಲನ, ಕೌರವ ವೆಂಕಟೇಶ್ ಸಾಹಸ, ರಾಮು ಹಾಗೂ ಕಿಶೋರ್ ನೃತ್ಯ ನಿರ್ದೇಶನ ಒದಗಿಸಿದ್ದಾರೆ.

This Article Has 1 Comment
  1. Pingback: sell dumps with pin

Leave a Reply

Your email address will not be published. Required fields are marked *

Translate »
error: Content is protected !!