ಅನಿಲ್ ಕುಂಬ್ಳೆ ಅವರಿಂದ ಗೀತೆ ಬಿಡುಗಡೆ

ಖ್ಯಾತ ಲೇಖಕ-ನಿರ್ದೇಶಕ , ಸ್ಯಾಂಡಲ್ ವುಡ್ನಲ್ಲಿ ಮೇಷ್ಟ್ರು ಎಂದೇ ಗೌರವಿಸಲ್ಪಡುವ ಡಾ.ನಾಗತಿಹಳ್ಳಿ ಚಂದ್ರಶೇಖರ ಅವರ  ಅಪಾರ ನಿರೀಕ್ಷೆಯ ಅದ್ದೂರಿ ಚಿತ್ರ “ಇಂಡಿಯಾ ವರ್ಸಸ್ ಇಂಗ್ಲೆಂಡ್” ಚಿತ್ರದ “ಜೈ ಜೈ ಜನಗಣಮನ “ ಎಂಬ ರೋಮಾಂಚಕಾರಿ ಗೀತೆಯನ್ನು ಖ್ಯಾತ ಕ್ರೀಡಾಪಟು  ಶ್ರೀ ಅನಿಲ್ ಕುಂಬ್ಳೆ ಲೋಕಾರ್ಪಣೆ ಮಾಡಿದರು. ವಸಿಷ್ಠ ಸಿಂಹ, ಮಾನ್ವಿತಾ ಹರೀಶ್  ಅವರೊಂದಿಗೆ ಸಾವಿರಾರು ಮಕ್ಕಳು ಭಾಗವಹಿಸಿದ್ದ ಈ ಗೀತೆಯನ್ನು ಭಾರತದ ಉದ್ದಗಲಕ್ಕೂ ಚಿತ್ರೀಕರಿಸಲಾಗಿದೆ.  ಈ ಗೀತೆಯನ್ನು ನಾಗತಿಹಳ್ಳಿ ಚಂದ್ರಶೇಖರ ರಚಿಸಿ ಅರ್ಜುನ್ ಜನ್ಯ ರಾಗ ಸಂಯೋಜಿಸಿದ್ದಾರೆ. ಅನಂತನಾಗ್, ಸಾಧುಕೋಕಿಲ,ಪ್ರಕಾಶ್ ಬೆಳವಾಡಿ, ಶಿವಮಣಿ, ಗಿರಿರಾಜ್ ಮತ್ತು ಹಲವು ಬ್ರಿಟಿಷ್ ಕಲಾವಿದರಿದ್ದಾರೆ.

This Article Has 1 Comment
  1. Pingback: www.2qiuqiu99.club

Leave a Reply

Your email address will not be published. Required fields are marked *

Translate »
error: Content is protected !!