ಹೊಸ ವರ್ಷದ ಮೊದಲ ಚಿತ್ರವಾಗಿ ರಾಜೀವ ತೆರೆಗೆ

ಆರ್.ಕೆ ಸಿನಿ ಕ್ರಿಯೇಷನ್ ಲಾಂಛನದಲ್ಲಿ ಬಿ.ಎಂ.ರಮೇಶ್, ಹಾಗೂ ಕಿರಣ್ .ಕೆ ನಿರ್ಮಿಸುತ್ತಿರುವ ‘ರಾಜೀವ’ ಚಿತ್ರ ಇದೇ ಹೊಸ ವರ್ಷದ ಮೊದಲ ಚಿತ್ರವಾಗಿ  ತೆರೆಗೆ ಬರುತ್ತಿದೆ.

ಸ್ಲಂ’ ಚಿತ್ರದ ನಂತರ ನಟ ಮಯೂರ್ ಪಟೇಲ್ ಯಾವ ಚಿತ್ರದಲ್ಲೂ ಅಭಿನಯಿಸಿರಲಿಲ್ಲ. ಈಗ ಅವರು ‘ರಾಜೀವ’ ಚಿತ್ರದ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಅವರು ಯುವ ರೈತನಾಗಿ ಕಾಣಿಸಿಕೊಂಡಿದ್ದು, ರೈತರ ಬದುಕು-ಬವಣೆಗಳನ್ನು ತೋರಿಸಲಾಗಿದ್ದು, ಬಿಡುಗಡೆಯಾಗಿರುವ ಟ್ರೈಲರ್ ಗೆ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ.ಚಿತ್ರದ ನಾಯಕ ರಾಜೀವ, ಐ.ಎ.ಎಸ್ ಮುಗಿಸಿ, ರೈತ ವೃತ್ತಿಗೆ ಬಂದು ಯುವ ರೈತನಾಗಿರುತ್ತಾನೆ . ಅವರಿಗೆ ನಾಯಕಿಯಾಗಿ  ಅಕ್ಷತಾ ನಟಿಸಿದ್ದು, ಪ್ಲೈಯಿಂಗ್ ಕಿಂಗ್ ಮಂಜು ಅವರು ನಿರ್ದೇಶನ ಮಾಡಿದ್ದಾರೆ. ಇವರು ಈಗಾಗಲೇ ‘ಮರ್ಮಾಂಗ’ ಎನ್ನುವ ಕಿರು ಚಿತ್ರವನ್ನು ನಟಿಸಿ ನಿರ್ದೇಶನ ಮಾಡಿದ್ದರು. ಈ ಕಿರುಚಿತ್ರವು ಸಾಮಾಜಿಕ ಜಾಲತಾಣದಲ್ಲಿ ಬಹು ಮೆಚ್ಚುಗೆಯನ್ನು ಪಡೆದಿತ್ತು.‘ಮಣಿ’ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದ ಮಯೂರ್ ಅವರಿಗೆ ಮಣಿ ನಂತರ   ‘ಮಣಿ’, ‘ನಿನ್ನದೇ ನೆನಪು’, ‘ಪ್ಯಾಸೆಂಜರ್’, ‘ಉಡೀಸ್’, ‘ಸ್ಟೂಡೆಂಟ್’, ‘ಲವ್ ಸ್ಟೋರಿ’ ವಿಭಿನ್ನವಾದ ಪಾತ್ರಗಳಿಂದ ಸಿನಿಮಾಗಳಲ್ಲಿ ಗಮನ ಸೆಳೆದ ನಟ ಅವರಿಗೆ ‘ರಾಜೀವ’ ದೊಡ್ಡ  ಗೆಲುವು ಕೊಡಲಿ ಎಂಬುವುದು ಬಿಸಿನಿಮಾಸ್ ತಂಡದ ಆಶಯ.

ಐಎಎಸ್‌ ಕನಸು ಕಾಣುತ್ತಲೇ ಹಳ್ಳಿಗೆ ಬಂದು ವ್ಯವಸಾಯ ಮಾಡುವಂಥ ಪಾತ್ರದಲ್ಲಿ ಮಯೂರ್‌ ಪಟೇಲ್‌ ಕಾಣಿಸಿಕೊಂಡಿದ್ದಾರೆ. ದೇಶದ ಬೆನ್ನೆಲುಬಾಗಿರುವ ರೈತನ ಕುರಿತ ಕಥೆ ಈ ಚಿತ್ರದಲ್ಲಿ ಇರಲಿದ್ದು, ಮಯೂರ್  ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ರೋಹಿತ್ ಸೋವರ್ ಸಂಗೀತ ನಿರ್ದೇಶನ ಮಾಡಿದ್ದು, ಆನಂದ್ ಇಳಯರಾಜ ಚಿತ್ರದ ಛಾಯಾಗ್ರಹಣ ಮಾಡಿದ್ದಾರೆ.ಚಿತ್ರದ ಎಲ್ಲಾ ಹಾಡುಗಳಿಗೆ ಸಾಹಿತ್ಯ ಶೇಖರ್ ಸೋವರ್ ಬರೆದಿದ್ದಾರೆ. ವಸಿಷ್ಟ ಸಿಂಹ ಒಂದು ಹಾಡಿಗೆ ಧ್ವನಿಯಾಗಿದ್ದಾರೆ.

This Article Has 2 Comments
  1. Pingback: baccarat online

  2. Pingback: binance reviews

Leave a Reply

Your email address will not be published. Required fields are marked *

Translate »
error: Content is protected !!