ಶಾನ್ವಿ ಬಿಚ್ಚಿಟ್ಟ ಸತ್ಯ!

ತೆರೆಯ ಮೇಲೆ ಪ್ರೇಕ್ಷಕನಿಗೆ ಕಾಣುವ ಚಿತ್ರದ ಹಿಂದೆ ಹಲವಾರು ಸಂಗತಿಗಳು ನಡೆದು ಹೋಗಿಬಿಟ್ಟಿರುತ್ತವೆ. ಸಾಕಷ್ಟು ಸಲ ಈ ತೆರೆಯ ಮರೆಯ ಸರ್ಕಸ್‍ಗಳು ಹೊರಗಡೆ ಬರುವುದಿಲ್ಲ. ಆದರೆ, ಒಂದೊಂದು ಸಲ ಅಸಲಿ ಸತ್ಯಗಳು ಹೊರಗೆ ಬಂದುಬಿಡುತ್ತದೆ.

ಈಗ ನಟಿ ಶಾನ್ವಿ ಶ್ರೀವಾತ್ಸವ್ ವಿಚಾರದಲ್ಲೂ ಇದೇ ಆಗಿರೋದು. ಸೋಶಿಯಲ್ ಮಿಡಿಯಾದಲ್ಲಿ ಪತ್ರವೊಂದನ್ನು ಹರಿಯಬಿಟ್ಟು ಶಾನ್ವಿ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದು ನಿಮಗೆ ಗೊತ್ತೇ ಇದೆ. ಸೋಶಿಯಲ್ ಮಿಡಿಯಾದ ಮೂಲಕ ಯಾವುದನ್ನು ಸ್ಪಷ್ಟಪಡಿಸದೆ ಅವರವರ ಊಹೆಗೆ ಬಿಟ್ಟಂತೆ ಬರೆಯುವುದು ಸಧ್ಯದ ಟ್ರೆಂಡ್. ಅದೇ ರೀತಿ ಶ್ವಾನಿ ಕೂಡ ಯಾರ ಹೆಸರೂ ಹೆಳದೆ ಪತ್ರ ಬರೆದಿದ್ದಳು. ಶಾನ್ವಿ ಬರೆದಿರುವ ಪತ್ರವನ್ನು ಗಮನಿಸಿದರೆ ಆಕೆ ಬರೆದ ಪತ್ರ ಇತ್ತೀಚಿಗೆ ರಿಲೀಸ್ ಆದ ‘ಗೀತಾ’ ಚಿತ್ರತಂಡಕ್ಕೆ ಸಂಬಂಧಿಸಿದ್ದು ಎಂದೆನಿಸುತ್ತದೆ. ಕಾರಣ, ಚಿತ್ರದ ರಿಲೀಸ್ ಸಮಯದಲ್ಲಿ ಶಾನ್ವಿಯನ್ನು ಐದು ದಿನಗಳಿಗಳ ಮಟ್ಟಿಗೆ ಕರೆಸಿಕೊಂಡಿದ್ದ ಚಿತ್ರತಂಡ, ಪ್ರೆಸ್‍ಮೀಟ್‍ಗೆ ಮಾತ್ರ ಆಕೆಯನ್ನು ಕರೆದು ಉಳಿದ ದಿನಗಳಲ್ಲಿ ದೂರ ಇಟ್ಟು ಪ್ರಚಾರ ಕಾರ್ಯದಲ್ಲಿ ತೊಡಗಿತ್ತು ಅನ್ನುವ ಮಾತು ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಇನ್ನು, ಗೀತಾ ಚಿತ್ರದ ಟೆಕ್ನೀಶನ್ ಒಬ್ಬರು ‘ಶಾನ್ವಿ ಪ್ರಚಾರಕ್ಕೆ ಬರಲೂ ಹೊಸ ಕಾಸ್ಟ್ಯೂಮ್ ಕೊಡಿಸಲು ನಿರ್ಮಾಪಕರಿಗೆ ದುಂಬಾಲು ಬಿದ್ದಿದ್ದರು..’ ಎಂಬರ್ಥದಲ್ಲಿ ಟ್ವೀಟಿಸಿದ್ದಾರೆ. ಹತ್ತು-ಹದಿನೈದು ಚಿತ್ರಗಳಲ್ಲಿ ನಟಿಸಿರುವ, ಬಹುಭಾಷಾ ನಟಿ ಒಂದು ಕಾಸ್ಟ್ಯೂಮ್ ವಿಚಾರಕ್ಕೆ ಬೇಸರಗೊಂಡು ಪತ್ರ ಬರೆಯುತ್ತಾಳೆ ಅನ್ನುವುದು ಸುಳ್ಳು. ಚಿತ್ರದ ಹಿರೋ ಗಣೇಶ್ ಕೊಟ್ಟ ಅರ್ಧದಷ್ಟೂ ಇಂಪಾರ್ಟೆನೆಸ್ಸ್‍ನ್ನು ಚಿತ್ರದ ನಾಯಕಿ ಶಾನ್ವೀಗೂ ಕೊಡಬೇಕಲ್ಲವೇ.. ಅದನ್ನು ಬಿಟ್ಟು ಚಿತ್ರದ ಕೆಲಸ ಮುಗಿದ ಕೂಡಲೇ ತಂಡದಿಂದ ದೂರ ಇಟ್ಟು ಚಿತ್ರ ರಿಲೀಸ್ ಟೈಂನಲ್ಲಿ ಕರೆಸಿಕೊಂಡು ಅವಮಾನಿಸಿವುದು ಎಷ್ಟು ಸರಿ. ಇನ್ನು, ನಿರ್ದೇಶಕರು ಶಾನ್ವಿಯ ಪಾತ್ರವನ್ನು ಎಡಿಟಿಂಗ್ ಸಮಯದಲ್ಲಿ ಸಾಕಷ್ಟು ಟ್ರಿಮ್ ಮಾಡಿರೋದು ಚಿತ್ರ ನೋಡಿದರೇ ಎಂತಹವರಿಗೂ ಅರ್ಥವಾಗುತ್ತೆ. ಸಾಕಷ್ಟು ಕಡೆಗಳಲ್ಲಿ ಶಾನ್ವಿ ಪಾತ್ರಪೋಷಣೆ ಅಡಾದಿಡ್ಡಿ ಸಾಗುತ್ತದೆ.

ಸಹಜವಾಗಿ ಒಂದು ಚಿತ್ರದ ಬಗ್ಗೆ ಸಾಕಷ್ಟು ಭರವಸೆಇಟ್ಟುಕೊಂಡ ನಟಿಗೆ ಮನಸ್ಸಿಗೆ ನೋವಾಗದೇ ಇರದು. ಇನ್ನು, ನವೆಂಬರ್ ಕೊನೆಯವಾರದಲ್ಲಿ ರಿಲೀಸ್ ಆಗಲಿರುವ ‘ಅವನೇ ಶ್ರೀಮನ್ನಾರಾಯಣ’ ಚಿತ್ರಕ್ಕೂ ಶಾನ್ವಿಯೇ ನಾಯಕಿ. ಇದರಿಂದ `ಗೀತಾ’ ಚಿತ್ರದ ಸಕ್ಸಸ್ ಶಾನ್ವಿಗೆ ಬಹುಮುಖ್ಯ. ಒಟ್ಟಿನಲ್ಲಿ, ಬೂದಿ ಮುಚ್ಚಿದ ಕೆಂಡದಿಂದ ಹೊಗೆಯಾಡಲು ಶುರುವಾಗಿದೆ.. ತೆರೆಯ ಹಿಂದಿನ ವಿಲನ್‍ಗಳು ಯಾರು ಎಂಬುದು ಸ್ವಲ್ಪದರಲ್ಲೇ ಬೆಳಕಿಗೆ ಬರಲಿದೆ.

This Article Has 1 Comment
  1. Pingback: dumps with pin

Leave a Reply

Your email address will not be published. Required fields are marked *

Translate »
error: Content is protected !!