ಸುಮಲತಾ ಅಂಬರೀಶ್ ಅವರಿಂದ `ಡಾ||ರಾಜಕುಮಾರ್ ಅಭಿಮಾನಿಗಳ ಸಂಘ` ಚಿತ್ರದ ಶೀರ್ಷಿಕೆ ಅನಾವರಣ

ಶಿವ ಆರ್ಟ್ಸ್ ಎಂಡ್ ಮೂವೀಸ್ ಲಾಂಛನದಲ್ಲಿ ನಿರ್ಮಾಣವಾಗಲಿರುವ `ಡಾ||ರಾಜಕುಮಾರ್ ಅಭಿಮಾನಿಗಳ ಸಂಘ` ಚಿತ್ರದ ಶೀರ್ಷಿಕೆಯನ್ನು ನಟಿ ಹಾಗೂ ಸಂಸದೆ ಸುಮಲತಾ ಅಂಬರೀಶ್ ಅವರು ಮಂಡ್ಯದಲ್ಲಿ ಇತ್ತೀಚೆಗೆ ಅನಾವರಣ ಮಾಡಿದ್ದರು. ನಲ್ಲವು ರೆಡ್ಡಿ ಹೈದರಾಬಾದ್ ಹಾಗೂ ರವಿಗೌಡ ಮಂಡ್ಯ ಈ ಚಿತ್ರದ ನಿರ್ಮಾಪಕರು.
`ಶ್ರಾವಣ` ಹಾಗೂ `ಗಾಂಚಲಿ` ಚಿತ್ರಗಳಿಗೆ ಸಹಕಾರ ನಿರ್ದೇಶಕರಾಗಿ ದುಡಿದಿರುವ ಹಾಗೂ ಯೂಟ್ಯೂಬ್‍ನಲ್ಲಿ ಆನಂದ್ ಆಡಿಯೋ ಮೂಲಕ ಬಿಡುಗಡೆಗೊಂಡಿದ್ದ `ವಸುಂಧರೆ` ಕಿರುಚಿತ್ರವನ್ನು ನಿರ್ದೇಶಿಸಿದ್ದ ತಾರಕರಾಮ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಚಿತ್ರಕ್ಕೆ ಕಥೆ, ಚಿತ್ರಕಥೆಯನ್ನು ನಿರ್ದೇಶಕರೆ ಬರೆದಿದ್ದಾರೆ. ಮಂಡ್ಯ ಸೊಗಡಿನ ಹಾಗೂ ರೈತರ ಸಮಸ್ಯೆಗಳ ಬಗ್ಗೆ ಕಥೆ ಹೆಣೆಯಲಾಗಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ. 5 ಹಾಡುಗಳಿರುವ ಈ ಚಿತ್ರದ ಚಿತ್ರೀಕರಣ ಸದ್ಯದಲ್ಲೇ ಚಿತ್ರೀಕರಣ ಆರಂಭವಾಗಲಿದೆ. ಮಾಸ್ತಿ ಮಂಜು ಸಂಭಾಷಣೆ ಬರೆಯುತ್ತಿರುವ ಈ ಚಿತ್ರಕ್ಕೆಶ್ರೀಕಾಂತ್ ಕೆ.ಜಿ.ಎ¥sóï ಅವರ ಸಂಕಲನವಿದೆ.

This Article Has 3 Comments
  1. Pingback: my link

  2. Pingback: Digital Transformation company

  3. Pingback: CICD

Leave a Reply

Your email address will not be published. Required fields are marked *

Translate »
error: Content is protected !!