‘ಅವಾರ್ಡ್’ ರಾಜಕೀಯಕ್ಕೆ ಹೊಸ ಟ್ವಿಸ್ಟ್?

ಈ ಬಾರಿಯ ರಾಷ್ಟ್ರಪ್ರಶಸ್ತಿ ಪ್ರಕಟವಾಗಿದ್ದೇ ತಡ. ಎಲ್ಲರೂ ಅಂದುಕೊಂಡದ್ದು ‘ನಾತಿಚಾರಾಮಿ’ಗೆ ಐದು ಪ್ರಶಸ್ತಿ ಬಂದಿದ್ದರ ಹಿಂದಿನರಹಸ್ಯವೇನು? ಚಿತ್ರದ ಎರಡೇ ಎರಡು ಸಾಲಿನ ಸಾಹಿತ್ಯಕ್ಕೆ ರಾಷ್ಟ್ರಪ್ರಶಸ್ತಿಯೇ? ಎಡಿಡಿಂಗ್‍ಗೆ ಸ್ಕೋಪ್ ಇಲ್ಲದ ಸ್ರೀನ್‍ಪ್ಲೇಯ ಚಿತ್ರದ ಎಡಿಟರ್‍ಗೆ ರಾಷ್ಟ್ರಪ್ರಶಸ್ತಿ? ಹೀಗೆ.. ಈ ಬಾರಿಯ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಹಲವು ವಿವಾದಗಳಿಗೆ ಎಡೆ ಮಾಡಿ ಕೊಟ್ಟಿದೆ. ಅತ್ಯುತ್ತಮ ಕನ್ನಡ ಚಲನ ಚಿತ್ರ ಪ್ರಶಸ್ತಿಗೆ ಆಯ್ಕೆಯಾದ ‘ನಾತಿ ಚರಾಮಿ’ ಚಿತ್ರದ ಸಂಕಲನ ನಡೆದ ಕಂಪೆನಿಯ ನಿರ್ದೇಶಕರಲ್ಲಿ ಒಬ್ಬರು ಕೇಂದ್ರ ಆಯ್ಕೆ ಮಂಡಳಿಯ ಸದಸ್ಯರು ಎಂಬ ವಿವಾದ ಕೋರ್ಟ್ ಮೆಟ್ಟಿಲೇರಿದೆ. ನಿರ್ದೇಶಕ ದಯಾಲ್ ಪದ್ಮನಾಭನ್ ಈ ಬಗ್ಗೆ ಕರ್ನಾಟಕ ಹೈ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

‘ನಾತಿ ಚರಾಮಿ’ ಚಿತ್ರ ಈ ಬಾರಿ ಒಟ್ಟು ಐದು ಪ್ರಶಸ್ತಿಗಳನ್ನು ಪಡೆದಿದೆ. ಅರ್ಜಿದಾರ ದಯಾಲ್ ಪದ್ಮನಾಭನ್ ಅವರು ಕನ್ನಡ ಸಿನೆಮಾ ನಿರ್ದೇಶಕ. ಈ ಬಾರಿ ಪ್ರಶಸ್ತಿಗೆ ಅರ್ಜಿ ಸಲ್ಲಿಸಿರುವ ಸಿನೆಮಾಗಳಲ್ಲಿ ದಯಾಲ್ ಅವರು ನಿರ್ದೇಶಿಸಿರುವ `ಆ ಕರಾಳ ರಾತ್ರಿ’ ಸಿನೆಮಾ ಕೂಡ ಒಂದು.
ದಯಾಲ್ ಅವರ ಅರ್ಜಿಯ ಪ್ರಕಾರ ಕರ್ನಾಟಕದ ಬಿ ಎಸ್ ಲಿಂಗದೇವರು, ಪಶ್ಚಿಮ (ಖegioಟಿಚಿಟ ಎuಡಿಥಿ – Wesಣ) ಸ್ಥಳೀಯ ಸಮಿತಿಯ ಮುಖ್ಯಸ್ಥರು. ಹೀಗಾಗಿ ಅವರು ಕೇಂದ್ರ ಸಮಿತಿಯ ಸದಸ್ಯರು ಕೂಡ ಆಗಿದ್ದಾರೆ. ಇದೇನೂ ನಿಯಮವಾಳಿಗೆ ವಿರುದ್ಧವಲ್ಲ. ಆದರೆ, ನಾತಿಚರಾಮಿ ಚಿತ್ರದ ಸಂಕಲನ ನಡೆದಿದ್ದು ಅಕ್ಕ ಕಮ್ಯುನಿಕೇಶನ್ ಎಂಬ ಸ್ಟುಡಿಯೊದಲ್ಲಿ. ಈ ಅಕ್ಕ ಕಮ್ಯುನಿಕೇಶನ್ ಸ್ಟುಡಿಯೊದ ಒಬ್ಬರು ನಿರ್ದೇಶಕರು ಇದೇ ಲಿಂಗದೇವರು. ನಾತಿಚರಾಮಿ ಚಿತ್ರದ ಕ್ರೆಡಿಟ್ ನಲ್ಲಿಯೂ ಅಕ್ಕ ಕಮ್ಯುನಿಕೇಶನ್ ಹೆಸರು ಇದೆ. ಈ ವಿವರವನ್ನು ಮುಚ್ಚಿಡುವ ಮೂಲಕ ನಿಯಮಗಳನ್ನು ಉಲ್ಲಂಘಿಸಲಾಗಿದೆಯಾ? ಎಂಬದು ಸದ್ಯದ ಪ್ರಶ್ನೆ. ಇನ್ನು, ನಾತಿಚರಾಮಿಯನ್ನು ಹೊರತು ಪಡಿಸಿದರೆ ಈ ಬಾರಿ ಸಾಕಷ್ಟು ಚಿತ್ರಗಳು ಪ್ರಶಸ್ತಿಯ ನಿರೀಕ್ಷೆಯನ್ನು ಹುಟ್ಟಿಸಿತ್ತು. ಅದರಲ್ಲಿ ಚಂಪಾಶೆಟ್ಟಿ ನಿರ್ದೇಶನದ ‘ಅಮ್ಮಚ್ಚಿಯೆಂಬ ನೆನಪು’ ಚಿತ್ರವೂ ಒಂದು. ಒಟ್ಟಿನಲ್ಲಿ ಸದ್ಯದ ಪರಿಸ್ಥಿಯಲ್ಲಿ, ರಾಷ್ಟ್ರಪ್ರಶಸ್ತಿಯ ಬಗ್ಗೆ ಸಂದೇಹಗಳ ಬುಗಿಲೆದ್ದಿದೆ. ಒಂದು ವೇಳೆ ನಿರ್ದೇಶಕ ದಯಾಲ್ ಅವರಿಗೆ ಕೋರ್ಟ್‍ನಲ್ಲಿ ಗೆಲುವು ದಕ್ಕಿದ್ದೇ ಆದರೆ, ‘ಅವಾರ್ಡ್’ ರಾಜಕೀಯಕ್ಕೆ ಹೊಸದೊಂದು ಟ್ವಿಸ್ಟ್ ಸಿಗಲಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!