‘ತಿರುಗಿಸೋ ಮೀಸೆ` ಚಿತ್ರದ ಶೀರ್ಷಿಕೆ ಬಿಡುಗಡೆ

ಶ್ರೀಶ್ರೀನಿವಾಸ ಮೂವೀಸ್ ಲಾಂಛನದಲ್ಲಿ ಶ್ರೀನಿವಾಸ್ ಜಿ ಹಾಗೂ ರಿಜ್ವಾನ್ ಅವರು ನಿರ್ಮಿಸುತ್ತಿರುವ `ತಿರುಗಿಸೋ ಮೀಸೆ` ಚಿತ್ರದ ಶೀರ್ಷಿಕೆ ಬಿಡುಗಡೆ ಸಮಾರಂಭ ಇತ್ತೀಚೆಗೆ ಚಿಕ್ಕಬಳ್ಳಾಪುರದ ಶ್ರೀವೆಂಕಟರಮಣ ದೇವಸ್ಥಾನದಲ್ಲಿ ನೆರವೇರಿತು. ಖುಷಿ ಹಾಗೂ ಅಚ್ಯುತ ರಾಮರಾವ್ ಈ ಚಿತ್ರದ ಸಹ ನಿರ್ಮಾಪಕರು.
ಕೃಷ್ಣವಿಜಯ್ ಎಲ್ ರಚನೆ ಹಾಗೂ ನಿರ್ದೇಶನದ ಈ ಚಿತ್ರದ ಚಿತ್ರೀಕರಣ ಬಿರುಸಿನಿಂದ ಸಾಗಿದೆ. ಸುರೇಶ್ ಬಾಬ್ಲಿ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಎಸ್ ಐ ಡಿ ಅವರ ಛಾಯಾಗ್ರಹಣವಿದೆ. ಧರ್ಮೇಂದ್ರ ಸಂಕಲನ ಹಾಗೂ ಕನಕ ಅವರ ಕಾಲಾ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಶ್ರೀವಿಷ್ಣು, ನಿಕ್ಕಿ ತಂಬೊಲಿ, ರೋಹಿಣಿ, ಶ್ರೀಕಾಂತ್ ಅಯ್ಯಂಗಾರ್, ಕೆಂಪೇಗೌಡ, ರಾಮರಾವ್, ರವಿವರ್ಮ ಮುಂತಾದವರಿದ್ದಾರೆ. ಮನೋಜ್ ಮಾವಿಲ್ಲ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು.

Be the first to comment

Leave a Reply

Your email address will not be published. Required fields are marked *

Translate »
error: Content is protected !!