ಮತ್ತೆ ಒಂದಾದ್ರಾ ‘ಮಾಸ್ತಿಗುಡಿ’ ಮರ್ಡರ್ಸ್!

ಸ್ಯಾಂಡಲ್‍ವುಡ್‍ನಲ್ಲಿ ಪ್ಲಾಫ್ ಚಿತ್ರಕೊಟ್ಟ ಡೈರೆಕ್ಟರ್ ಒಬ್ಬನ ಸಿನಿಮಾ ಬದುಕು ಮುಂದೇನಾಗಬಹುದು? ಉತ್ತರ ಸ್ಪಷ್ಟ, ಆತ ಬರಿಗೈದಾಸನಾಗಿ ಗಾಂಧಿನಗರದಲ್ಲಿ ಗಲ್ಲಿಗಳಲ್ಲಿ, ಕಥೆ ಹಿಡ್ಕೊಂಡು ಅಲೆಯಬೇಕು. ಆದರೆ ಡೈರೆಕ್ಟರ್ ನಾಗಶೇಖರ್ ವಿಚಾರದಲ್ಲಿ ಇದು ಉಲ್ಟಾ ಆಗಿದೆ. ಹೌದು, ಅಮರ್ ಂಅಂಬ ಡಬ್ಬಾತಿ ಡಬ್ಬ ಚಿತ್ರ ಕೊಟ್ಟ ಬೆನ್ನಲ್ಲೇ ನಾಗಶೇಖರ್ ಹೊಸ ಸಿನಿಮಾವನ್ನು ಅನೌನ್ಸ್ ಮಾಡಿದ್ದಾರೆ. ‘ಸಂಜಯ್ ಅಲಿಯಾಸ್ ಸಂಜು’ ಎಂಬ ಟೈಟಲ್ ನ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ. `ಸಂಜು ವೆಡ್ಸ್ ಗೀತಾ’ ಚಿತ್ರ ನಾಗ್‍ಗೆ ಒಂದಷ್ಟು ಮೈಲೆಜ್ ತಂದುಕೊಟ್ಟಿದ್ದಕ್ಕೋ ಏನೋ, ಸಂಜುಗೆ ನೇತುಹಾಕಿಕೊಂಡು ಇನ್ನೊಂದು ಚಿತ್ರ ಮಾಡಲು ಹೊರಟಿದ್ದಾರೆ. ಚಿತ್ರದ ಪೋಸ್ಟರ್ ನ್ನು ನಾಗಶೇಖರ್ ತಮ್ಮ ಫೇಸ್ ಬುಕ್ ಅಕೌಂಟ್ ನಲ್ಲಿ ರಿಲೀಸ್ ಮಾಡಿದ್ದಾರೆ. ಚಿತ್ರದ ಪೋಸ್ಟರ್ ನೋಡಿದರೆ ಕ್ರೈಮ್ ಸಬ್ಜೆಕ್ಟ್ ಒಂದನ್ನು ನಾಗ್ ಆಯ್ಕೆ ಮಾಡಿಕೊಂಡಿರುವುದು ಸ್ಪಷ್ಟವಾಗುತ್ತದೆ. ಈ ಚಿತ್ರಕ್ಕೆ ಶ್ರೀಧರ್ ವಿ ಸಂಭ್ರಮ್ ಸಂಗೀತವಿದ್ದು, ಸತ್ಯ ಹೆಗಡೆ ಛಾಯಾಗ್ರಹಣವಿದೆ. ಹಾಗೂ ರವಿ ವರ್ಮ ಸಾಹಸ ಸಂಯೋಜನೆ ಈ ಚಿತ್ರಕ್ಕಿದೆ. ರವಿವರ್ಮ&ನಾಗ್ ಕಾಂಬಿನೇಶನ್ `ಮಾಸ್ತಿಗುಡಿ’ ಚಿತ್ರದಲ್ಲಿ ಎರಡು ಬಲಿತೆಗೆದುಕೊಂಡಿತ್ತು. ಈಗ ಮತ್ತೆ ಅದೇ ಜೋಡಿ ಒಂದಾಗಿರೋದು ನೋಡಿದರೆ ಇನ್ನೊಂದು ಅನಾಹುತ ಕಾದಿದೆಯಾ? ಇಲ್ಲ ಚಿತ್ರದ ಫೈಟ್ ಸೀನ್‍ಗಳ ಚಿತ್ರೀಕರಣದ ಸಂದರ್ಭದಲ್ಲಿ ಸರಿಯಾದ ಸಿದ್ಧತೆಯನ್ನು ನಾಗ್&ರವಿ ಮಾಡಿಕೊಂಡಿದ್ದಾರಾ?

ನಾಗಶೇಖರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಅವರ ಲಾಂಚಿಂಗ್ ಸಿನಿಮಾ ಅಮರ್ ನ್ನು ನಿರ್ದೇಶಿಸಿದ್ದರು. ಅಂಬಿ ಪುತ್ರನ ಲಾಂಚಿಂಗ್ ಸಿನಿಮಾವನ್ನೇ ಮಕಾಡೆ ಮಲಗುವಂತೆ ಮಾಡುವಲ್ಲಿ ನಾಗ್ ಗೆದ್ದಿದ್ದರು. ‘ಕೈಲಾಗದವನ್ನು ಕ್ಯಾಮರಾ ಪರಿಚಿದ್ನಂತೆ’ ಅನ್ನುವಂತೆ `ಅಮರ್’ ಚಿತ್ರದ ಬಗ್ಗೆ ಮಿಡಿಯಾಗಳು ‘ವಾಕ್‍ಥೂ’ ಎಂದು ಉಗಿದದ್ದಕ್ಕೆ ಮಿಡಿಯಾಗಳ ಮೇಲೆ ಸಿಟ್ಟಿನಿಂದ ಮಾತನಾಡಿದ್ದಾರೆ. ಇದರ ಬೆನ್ನಲ್ಲೇ ಹೊಸ ಸಿನಿಮಾವನ್ನು ಅನೌನ್ಸ್ ಮಾಡಿರುವ ನಾಗ್, ಸುಖಾಸುಮ್ಮನೆ ಇನ್ನೊಬ್ಬರ ಮುಂದೆ ಭುಸುಗುಟ್ಟುವ ಬದಲು ಒಂದು ‘ನೋಡೆಬಲ್’ ಚಿತ್ರವನ್ನಾದರು ಕೊಡಲಿ. ಜೊತೆಗೆ ಪ್ರೊಡ್ಯೂಸರ್ ಹೂಡುವ ದುಡ್ಡಿನ ಬಗ್ಗೆ ಒಂದಷ್ಟು ಕಾಳಜಿ ಇಟ್ಟು, ತಮ್ಮೊಂದಿಗೆ ಕೆಲಸ ಮಾಡುವವರ ಪ್ರಾಣದ ಬಗ್ಗೆಯೂ ಗಮನವಿಟ್ಟು ಕೆಲಸಮಾಡಲಿ.

Be the first to comment

Leave a Reply

Your email address will not be published. Required fields are marked *

Translate »
error: Content is protected !!