‘ಬುದ್ಧಿವಂತ- 2’ ಸಿನಿಮಾದ ಮುಹೂರ್ತ..!

ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಬ್ಯಾನರ್ ನ ಅಡಿಯಲ್ಲಿ ತಯಾರಾಗುತ್ತಿರುವ ಹೊಸ ಚಿತ್ರ “ಬುದ್ಧಿವಂತ-2” (24/05/19) ಬೆಳ್ಳಿಗೆ 9.30 ಕ್ಕೆ ಬನಶಂಕರಿಯಲ್ಲಿರುವ ಶ್ರೀ ಧರ್ಮಗಿರಿ ಮಂಜುನಾಥಸ್ವಾಮಿ ದೇವಾಲಯದಲ್ಲಿ   ಮುಹೂರ್ತ ಆಚರಿಸಿಕೊಂಡಿತು.ರಿಯಲ್ ಸ್ಟಾರ್ ಉಪೇಂದ್ರ ನಾಯಕನಟನಾಗಿ ಅಭಿನಯಿಸುತ್ತಿರುವ ಈ ಚಿತ್ರಕ್ಕೆ ಟಿ. ಆರ್. ಚಂದ್ರಶೇಖರ್ ಅವರು ಬಂಡವಾಳ ಹೂಡುತ್ತಿದ್ದು, ಆದಿತ್ಯ, ಮೇಘನ ರಾಜ್, ಸೋನಾಲ್ ಮೊಂತೆರೊ ಮುಖ್ಯ ಭೂಮಿಕೆಯಲ್ಲಿದ್ದಾರೆ. ಮೌರ್ಯ ಬಿ. ಎನ್. ಈ ಬಹುತಾರಾಗಣದ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.

ಪ್ರಿಯಾಂಕ ಉಪೇಂದ್ರರವರು ಕ್ಲಾಪ್ ಮಾಡಿದರೆ, ಸಿ. ನಂದಕಿಶೋರ್ ರವರು ಕ್ಯಾಮರ ಚಾಲನೆ ಮಾಡಿದರು, ಹಿರಿಯ ನಿರ್ದೇಶಕರಾದ ಡಿ. ರಾಜೇಂದ್ರ ಸಿಂಗ್ ಬಾಬು ಆಕ್ಷನ್ ಕಟ್ ಹೇಳುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿದರು. ನಿರ್ಮಾಪಕರು ಹಾಗೂ ವಿತರಕರಾದ ಬಿ.ಕೆ. ಗಂಗಾಧರ್, ಸಂಗೀತ ನಿರ್ದೇಶಕ ಗುರುಕಿರಣ್ ಹಾಗೂ ಇನ್ನೂ ಹಲವಾರು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಚಿತ್ರತಂಡಕ್ಕೆ ಶುಭ ಕೋರಿದರು.ಕೌಟುಂಬಿಕ ಮತ್ತು ಸಸ್ಪೆನ್ಸ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಬಹುತೇಕ ಪಾತ್ರಗಳ ಆಯ್ಕೆ ಪೂರ್ಣಗೊಂಡಿದ್ದು ಮಿಕ್ಕ ಕೆಲವು ಮುಖ್ಯ ಪಾತ್ರಗಳ ಆಯ್ಕೆ ಇನ್ನಷ್ಟೇ ನಡೆಯಬೇಕಿದೆ.ಮುಖ್ಯ ಭೂಮಿಕೆಯಲ್ಲಿ ರಾಜೇಶ್ ನಟರಂಗ, ಅಶೋಕ್, ಪ್ರೇರಣಾ, ಕಡ್ಡಿಪುಡಿ ಚಂದ್ರು ಮತ್ತಿತರು ನಟಿಸುತ್ತಿದ್ದಾರೆ ಮತ್ತು ಮಹೇಶ್ ಚೈತನ್ಯ ಹಾಗೂ ಸುರೇಶ್ ಸಹ ನಿರ್ದೇಶನ ನಿರ್ವಹಿಸುತ್ತಿದ್ದಾರೆ.ತಾಂತ್ರಿಕ ವರ್ಗದಲ್ಲಿ ಭರತ್ ಪರಶುರಾಮ್ ಛಾಯಾಗ್ರಹಣ, ಬಾಲು ಕುಮುಟ ನಿರ್ಮಾಣ ನಿರ್ವಹಣೆ, ಪ್ರಿಯಾಂಕ ಉಪೇಂದ್ರ ಮತ್ತು ಅಮೂಲ್ಯ ಸುರೇಶ್ ವಸ್ತ್ರ ವಿನ್ಯಾಸ, ದಯಾನಂದ್ ಭದ್ರಾವತಿ ವಸ್ತ್ರಾಲಂಕಾರ, ಉಮೇಶ್ ವರ್ಣಾಲಂಕಾರ ಮಾಡುತ್ತಿದ್ದು ನಿರ್ದೇಶನ ತಂಡದಲ್ಲಿ ಉಮೇಶ್, ಪ್ರಣವ್, ಸಿದ್ದು, ವಿಠ್ಠಲ್ ಸಾಥ್ ನೀಡುತ್ತಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!