ಡಿಬಾಸ್‌

ಅಕ್ಕನ ಮಗನ ಲಾಂಚ್‌ ಗೆ ಡಿಬಾಸ್‌ ವೇದಿಕೆ

ಅಕ್ಕನ ಮಗ ಚಂದ್ರು ಲಾಂಚ್‌ ಗೆ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್ ವೇದಿಕೆ ಸಿದ್ದಪಡಿಸುತ್ತಿದ್ದಾರೆ.

ತಮ್ಮದೇ ತೂಗುದೀಪ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಅಕ್ಕನ ಮಗನ್ನು ಲಾಂಚ್‌ ಮಾಡುತ್ತಿದ್ದಾರೆ.  ನವಗ್ರಹ ಹಾಗೂ ಸಾರಥಿ ಸೂತ್ರಧಾರಿ ದಿನಕರ್‌ ಚಂದ್ರುಗೆ ಸಿನಿಮಾ ನಿರ್ದೇಶನ ಮಾಡಲಿದ್ದಾರೆ. ಸುರೇಶ್‌ ಬಾಬು  ಈ ಸಿನಿಮಾಗೆ ಫಂಡಿಂಗ್‌ ಮಾಡ್ತಿದ್ದಾರೆ. ಸುರೇಶ್‌ ಅವರ ಅನನ್ಯ ಹಾಗೂ ಐಶ್ವರ್ಯಾ ಕ್ರಿಯೇಷನ್‌ ಬ್ಯಾನರ್‌ ನಡಿ ಈ ಚಿತ್ರ ನಿರ್ಮಾಣವಾಗಲಿದೆ.

ತೂಗುದೀಪ ಬ್ಯಾನರ್‌ ನಡಿ ತೆರೆಗೆ ಬಂದಿರುವ ನವಗ್ರಹ, ಜೊತೆಜೊತೆಯಲಿ, ಬುಲ್‌ ಬುಲ್‌ ಸಿನಿಮಾಗಳು ಸೂಪರ್‌ ಡೂಪರ್‌ ಹಿಟ್‌ ಆಗಿವೆ. ಈ ಬ್ಯಾನರ್‌ ನಡಿ ನಟಿಸಿದ್ದ ಲವ್ಲಿಸ್ಟಾರ್‌ ಪ್ರೇಮ್‌, ರಚಿತಾ ರಾಮ್‌  ತಮ್ಮದೇ ಸ್ಟಾರ್‌ ಗಿರಿ ಪಡೆದಿದ್ದಾರೆ.

ಏನು ಸಾಧನೆ ಮಾಡದ ಅಕ್ಕನ ಮಗ ಚಂದುಗೆ ಅಭಿಮಾನಿಯೊಬ್ಬರು ಕಾಲಿಗೆ ಬೀಳುವುದನ್ನು ನೋಡಿ ದರ್ಶನ್‌ ಮನಸ್ಸಿಗೆ ನೋವು ಮಾಡಿಕೊಂಡಿದ್ದರು. ಈ ಬೆಳವಣಿಗೆ ಬೆನ್ನಲ್ಲೇ ಡೆವಿಲ್‌ ಸಿನಿಮಾದಲ್ಲಿ ಚಂದ್ರುಗೇ ಮೀಸಲಿದ್ದ ಪಾತ್ರದಿಂದ ದಚ್ಚು ಹೊರಗಿಟ್ಟು ಫ್ಯಾನ್ಸ್‌ ಗೆ ಖಡಕ್‌ ವಾರ್ನಿಂಗ್‌ ಕೊಟ್ಟಿದ್ದರು. ಇತ್ತೀಚೆಗೆ ಡೆವಿಲ್ ನಲ್ಲಿ ಮಗನಿಗೆ ಚಾನ್ಸ್‌ ಕೊಟ್ಟಿದ್ದು ಭಾರೀ ಸುದ್ದಿಯಾಗಿತ್ತು.

Be the first to comment

Leave a Reply

Your email address will not be published. Required fields are marked *

Translate »
error: Content is protected !!