ದರ್ಶನ್ ವರ್ಸಸ್ ಸುದೀಪ್

ದರ್ಶನ್ ವರ್ಸಸ್ ಸುದೀಪ

ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ನಟರ ಚಿತ್ರಗಳ ಬಿಡುಗಡೆ ತೀರಾ ವಿರಳವಾಗತ್ತಿದೆ, ಅನ್ನುವ ಹೊತ್ತಿಗೆ ಒಂದೇ ದಿನ ಇಬ್ಬರು ಸ್ಟಾರ್ ನಟರ ಚಿತ್ರ ಬಿಡುಗಡೆಯಾಗುವುದು ನಿಕ್ಕಿಯಾಗಿದೆ. ಹೌದು.. ನಟ ದರ್ಶನ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಕುರುಕ್ಷೇತ್ರ ಚಿತ್ರ ಬಿಡುಗಡೆಗೆ ಮಹೂರ್ತ ಫಿಕ್ಸ್ ಆಗಿದ್ದು, ಮುಂಬರುವ ಆಗಸ್ಟ್ 9ರಂದು ಚಿತ್ರ ಬಿಡುಗಡೆಯಾಗಲಿದೆ. ವಿಶೇಷವೆಂದರೆ ಅಂದೇ ಅಂದರೆ ಆಗಸ್ಟ್ 9 ವರಮಹಾಲಕ್ಷ್ಮಿ ಹಬ್ಬದಂದು ಅಭಿನಯ ಚಕ್ರವರ್ತಿ ಸುದೀಪ್ ಅಭಿನಯದ ಬಹುನಿರೀಕ್ಷಿತ ಚಿತ್ರ ಪೈಲ್ವಾನ ಕೂಡ ಬಿಡುಗಡೆಯಾಗುತ್ತಿದೆ. ಹೀಗಾಗಿ ಚಂದನವನದಲ್ಲಿ ಮತ್ತೊಮ್ಮೆ ಸ್ಟಾರ್ ನಟರ ಬಾಕ್ಸ್ ಆಫೀಸ್ ವಾರ್ ಗೆ ವೇದಿಕೆ ಸಜ್ಜಾದಂತಾಗಿದೆ.
ಈ ಕುರಿತು, ಕುರುಕ್ಷೇತ್ರ ಚಿತ್ರದ ನಿರ್ಮಾಪಕ ಮುನಿರತ್ನ ಅವರು, ಆಗಸ್ಟ್ 9ಕ್ಕೆ ಕುರುಕ್ಷೇತ್ರ ಸಿನಿಮಾ ಬಿಡುಗಡೆ ಆಗಲಿದ್ದು, ಜುಲೈ ಮೊದಲ ವಾರ ಆಡಿಯೋ ರಿಲೀಸ್ ಮಾಡಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದರು. ಅಂತೆಯೇ ಚಿತ್ರವನ್ನು 2ಡಿ ಮತ್ತು 3ಡಿ ಆವೃತ್ತಿಯಲ್ಲಿ ತೆರೆ ಮೇಲೆ ತರಲು ನಿರ್ಧರಿಸಲಾಗಿದ್ದು, ಈ ಸಂಬಂಧ ಗ್ರಾಫಿಕ್ಸ್ ಕೆಲಸಗಳು ನಡೆಯುತ್ತಿವೆ ಎಂದು ಅವರು ಹೇಳಿದರು. ಹಾಗಿದ್ದರೆ ಇನ್ನೂ ಫಸ್ಟ್ಕಾರಪಿ ಸಿದ್ಧವಾಗುವುದರ ಮೊದಲೇ ಮುನಿರತ್ನ ಸಿನಿಮಾ ರಿಲೀಸ್ ಡೇಟ್ ಫಿಕ್ಸ್ ಮಾಡಿರೋದು ಅವರ ಓವರ್ ಕಾನ್ಫಿಡೆನ್ಸ್ ಎಂದೇ ಹೇಳಬೇಕು. ಅಥವಾ ಆ ದಿನ ಬೇರೆ ಸ್ಟಾರ್ ನಟರ ಚಿತ್ರ ರಿಲೀಸ್ ಆಗದಿರಲಿ ಅನ್ನುವ ಚಿಂತನೆಯೂ ಮುನಿಯದ್ದರಿಬಹುದು. ಸುದ್ದಿಗೋಷ್ಠಿಯಲ್ಲಿ ನಟ ದರ್ಶನ್ ಹಾಗೂ ಅಭಿಮನ್ಯು ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟ ನಿಖಿಲ್ ಕುಮಾರಸ್ವಾಮಿ ಗೈರಾಗಿದ್ದರು. ಈ ಕುರಿತು ಮಾತನಾಡಿದ ಮುನಿರತ್ನ ಅವರು, ಚಿತ್ರ ಬಿಡುಗಡೆ ದಿನಾಂಕ ಮಾತ್ರ ಇಂದು ಘೋಷಣೆ ಮಾಡಲಾಗುತ್ತದೆ. ಪ್ರಚಾರದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ ಎಂದರು. ಮುನಿರತ್ನ ಹೇಳಿದ ಮಾತ್ರಕ್ಕೆ, ಮಂಡ್ಯ ಅಖಾಡದಲ್ಲಿ ಅಕ್ಷರಶಃ ಕೌರವ-ಪಾಂಡವರಂತಿದ್ದ ದರ್ಶನ್ ನಿಖಿಲ್ ಪ್ರಚಾರದ ಕಾರ್ಯದಲ್ಲಿ ಒಟ್ಟಿಗೇ ತೊಡಗಿಸಿಕೊಳ್ಳುವುದು ದೂರದ ಮಾತು ಬಿಡಿ. ಇದೇ ವೇಳೆ ನಟ ಅಂಬರೀಶ್ ರನ್ನು ನೆನೆದ ಮುನಿರತ್ನ ಅವರು, ಅಂಬರೀಷ್ ಅವರು ಅನಾರೋಗ್ಯದ ನಡುವೆಯೂ ಸುಮಾರು 20 ದಿನಗಳ ಕಾಲ ಶೂಟಿಂಗ್ ನಲ್ಲಿ ಭಾಗವಹಿಸಿ ಭೀಷ್ಮನ ಪಾತ್ರ ಮಾಡಿದ್ದಾರೆ. ಅಂಬರೀಶ್ ಪಾತ್ರಕ್ಕೆ ಅವರೇ ಡಬ್ ಮಾಡಿದ್ದಾರೆ. ಆದರೆ ಅವರಿಗೆ ಯಾವುದೇ ಸಂಭಾವನೆ ಕೊಟ್ಟಿಲ್ಲ ಎಂದು ತಿಳಿಸಿದರು. ಮುನಿ ಅಂಬರೀಶ್ಗೆ ಯಾವುದೇ ಸಂಭಾವನೆ ನೀಡದಿರುವುದು ಯಾವ ಕಾರಣಕ್ಕೆ ಎಂದು ವಿಚಾರಿಸಿದರೆ ಅದಕ್ಕೆ ಅವರಲ್ಲಿ ಉತ್ತರವಿಲ್ಲ. ಒಂದು ಮೇಜರ್ ಪಾತ್ರಕ್ಕೆ ನಟನೊಬ್ಬ ಖಾತ್ರಿಯಾದ ಕೂಡಲೇ ಆತನಿಗೆ ಒಟ್ಟು ಸಂಭಾವನೆಯ ಹತ್ತೋ-ಇಪ್ಪತ್ತು ಪರ್ಸೆಂಟ್ ಅಡ್ವಾನ್ಸ್ ದುಡ್ಡು ಕೊಡುವುದು ಸಾಮಾನ್ಯ ಸಂಗತಿ. ಆದರೆ ಮುನಿ ಮತ್ತು ಅಂಬರೀಶ್ ಮಧ್ಯೆ ಇದ್ಯಾವುದೇ ಮಾತುಕತೆ ನಡೆಯದೇ ಅಂಬರೀಶ್ ಡಬ್ಬಿಂಗ್ ಮುಗಿಸಿದ್ದಾರೆಂದರೆ ಇಂದು ನಂಬುವಂತಹ ಸಂಗತಿಯೇ?
ಇನ್ನು, ಬಹು ತಾರಾಗಣದ ಕುರುಕ್ಷೇತ್ರ ಸಿನಿಮಾ ನಾಲ್ಕು ಭಾಷೆಗಳಲ್ಲಿ ಪ್ರಪಂಚದಾದ್ಯಂತ ಏಕಕಾಲದಲ್ಲಿ ಬಿಡುಗಡೆ ಯಾಗಲಿದೆ, ಅತ್ತ ನಟ ಸುದೀಪ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಪೈಲ್ವಾನ್ ಕೂಡ ಆಗಸ್ಟ್ 9ರಂದೇ ಬಿಡುಗಡೆಯಾಗುತ್ತಿದ್ದು, ಈ ಚಿತ್ರ ಕೂಡ ಸುಮಾರು 7 ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗುತ್ತಿದೆ.ಇದೇ ಕಾರಣಕ್ಕೆ ಮತ್ತೊಮ್ಮೆ ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ನಟರ ಬಾಕ್ಸ್ ಆಫೀಸ್ ಕದನಕ್ಕೆ ವೇದಿಕೆ ಸಿದ್ಧವಾದಂತಾಗಿದೆ. ಆದರೆ, ಬೆಳ್ಳಿತೆರೆಯ ಮೇಲೆ ಸಿದ್ಧವಾಗಿಲಿರುವ ಜಿದ್ದಾ-ಜಿದ್ದಿಯ ವೇದಿಕೆಗಿಂತಲೂ ಮುಂಚಿತವಾಗಿ, `ಕುರುಕ್ಷೇತ್ರ’ ಚಿತ್ರದಲ್ಲಿ ನಟಿಸಿರುವ ದರ್ಶನ್&ನಿಖಿಲ್ ಮಂಡ್ಯದಲ್ಲಿ ವೇದಿಕೆ ಸೃಷ್ಟಿಸಿಕೊಂಡಿದ್ದರು. ಇವರಿಬ್ಬರ ನಡುವಿನ ರಾಜಕೀಯ ವೈಮನಸ್ಸು `ಕುರುಕ್ಷೇತ್ರ’ದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಸಾಕಷ್ಟಿದೆ. ಏಕೆಂದರೆ, ಚಿತ್ರದ ಪ್ರಚಾರಲ್ಲಿ ದರ್ಶನ್ ತೊಡಗಿಕೊಂಡರೆ, ಮುನಿರತ್ನ `ನಿಖಿಲ್ ಎಲ್ಲಿದ್ದಿಯಪ್ಪಾ?’ ಎಂದು ಟಾರ್ಚ್ ಹಾಕಿ ಹುಡುಕಬೇಕಾದೀತು. ಏನಂತೀರಿ?

-ಕಿಸ್ ಬಾಯ್ ದಾಸ್

This Article Has 3 Comments
  1. Pingback: Web Site

  2. Pingback: regression testing

  3. Pingback: 마루마루

Leave a Reply

Your email address will not be published. Required fields are marked *

Translate »
error: Content is protected !!