ಪ್ರವೀಣ್ ಕುಮಾರ್ ಜಿ ಬರೆದು ನಿರ್ದೇಶಿಸಿರುವ ‘ಅಮರ ಪ್ರೇಮಿ ಅರುಣ್’ ಚಿತ್ರ ಏಪ್ರಿಲ್ 25ರಂದು ರಾಜ್ಯದಾದ್ಯಂತ ತೆರೆ ಕಾಣಲಿದೆ.
ಸಂಪೂರ್ಣವಾಗಿ ಬಳ್ಳಾರಿಯಲ್ಲೇ ನಡೆಯುವ ‘ಅಮರ ಪ್ರೇಮಿ ಅರುಣ್’ ಚಿತ್ರ ಬಳ್ಳಾರಿ ಉಪ ಭಾಷೆಯಲ್ಲಿ ತಯಾರಾದ ಮತ್ತು ಸಂಪೂರ್ಣವಾಗಿ ಬಳ್ಳಾರಿಯಲ್ಲೇ ಚಿತ್ರೀಕರಿಸಲಾದ ಮೊದಲ ಕನ್ನಡ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
‘ಅಮರ ಪ್ರೇಮಿ ಅರುಣ್’ ಕೇವಲ ಪ್ರಾದೇಶಿಕ ಪ್ರೇಮಕಥೆಯಾಗಿರದೆ, ಶ್ರೀಮಂತ ಭಾಷಾ ಮತ್ತು ಸಾಂಸ್ಕೃತಿಕ ಗುರುತನ್ನು ಸಂರಕ್ಷಿಸುವ ಮತ್ತು ಪ್ರದರ್ಶಿಸುವತ್ತ ಇದು ಮಹತ್ವದ ಹೆಜ್ಜೆಯಾಗಿದೆ. ‘ಅಮರ ಪ್ರೇಮಿ’ ಪಾತ್ರದಲ್ಲಿ ಹರಿಶರ್ವ ಕಾಣಿಸಿಕೊಂಡಿದ್ದಾರೆ. ದೀಪಿಕಾ ಆರಾಧ್ಯ ಕಾವ್ಯಾ ಪಾತ್ರದಲ್ಲಿ, ಬಳ್ಳಾರಿ ಸೀನ ಪಾತ್ರದಲ್ಲಿ ಧರ್ಮಣ್ಣ ಕಡೂರು ಕಾಣಿಸಿಕೊಂಡಿದ್ದಾರೆ.
ಚಿತ್ರದಲ್ಲಿ ಕೃತಿ ಭಟ್, ಮಹೇಶ್ ಬಂಗ್, ರಂಜಿತಾ ಪುಟ್ಟಸ್ವಾಮಿ, ಅರ್ಚನಾ ಕೊಟ್ಟಿಗೆ, ಶ್ವೇತಾ ಭಟ್, ಮಂಜಮ್ಮ ಜೋಗತಿ, ರಾಧಾ ರಾಮಚಂದ್ರ, ವಿಜಯಲಕ್ಷ್ಮಿ ಶಿವಮೊಗ್ಗ, ಬಾಲ ರಾಜವಾಡಿ, ಹುಲುಗಪ್ಪ ಕಟ್ಟಿಮನಿ ಮುಂತಾದವರು ನಟಿಸಿದ್ದಾರೆ.
ಚಿತ್ರಕ್ಕೆ ಕಿರಣ್ ರವೀಂದ್ರನಾಥ್ ಸಂಗೀತ ಸಂಯೋಜಿಸಿದ್ದು, ಜಯಂತ್ ಕಾಯ್ಕಿಣಿ, ಯೋಗರಾಜ್ ಭಟ್ ಮತ್ತು ಪ್ರವೀಣ್ ಕುಮಾರ್ ಜಿ ಅವರ ಸಾಹಿತ್ಯವಿದೆ. ಪ್ರವೀಣ್ ಎಸ್ ಛಾಯಾಗ್ರಹಣ, ಮನು ಶೆಡ್ಗಾರ್ ಅವರ ಸಂಕಲನವಿದೆ.
—–

Be the first to comment