ಇಂದು ಮೂರು ಚಿತ್ರಗಳು ತೆರೆಗೆ

ಬಹುತೇಕ ಹೊಸಬರು ನಟಿಸಿರುವ ಮೂರು ಚಿತ್ರಗಳು ಇಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿವೆ.

ಕೇದಾರ್‌ನಾಥ್ ಕುರಿಫಾರಂ:

‘ಕಾಮಿಡಿ ಕಿಲಾಡಿಗಳು’ ಖ್ಯಾತಿಯ ಮಡೆನೂರ್‌ ಮನು ನಾಯಕನಾಗಿ ನಟಿಸಿರುವ ಚಿತ್ರ ‘ಕೇದಾರ್‌ನಾಥ್ ಕುರಿಫಾರಂ’ ಇಂದು ಬಿಡುಗಡೆಯಾಗಿದೆ. ಜೆ.ಕೆ. ಮೂವೀಸ್ ಬ್ಯಾನರ್‌ನಲ್ಲಿ ಕೆ.ಎಂ.ನಟರಾಜ್ ನಿರ್ಮಿಸಿರುವ ಚಿತ್ರಕ್ಕೆ ಶೀನು ಸಾಗರ್ ನಿರ್ದೇಶನವಿದೆ.

ಶಿವಾನಿ ಅಮರ್‌ ಚಿತ್ರದ ನಾಯಕಿ. ಟೆನ್ನಿಸ್‌ ಕೃಷ್ಣ, ಕರಿಸುಬ್ಬು ತಾರಾಗಣದಲ್ಲಿದ್ದಾರೆ. ಸನ್ನಿ ಡಾನ್‌ ಅಬ್ರಾಹಂ ಸಂಗೀತ, ರಾಜೇಶ್‌ ತಿಲಕ್‌ ಛಾಯಾಗ್ರಹಣವಿದೆ.

ನೈಟ್ ರೋಡ್‌:

‘ನೈಸ್ ರೋಡ್’ ಶೀರ್ಷಿಕೆಯಿಂದ ವಿವಾದಕ್ಕೊಳಗಾಗಿ ಬಳಿಕ ಶೀರ್ಷಿಕೆ ಬದಲಿಸಿಕೊಂಡ ‘ನೈಟ್‌ ರೋಡ್‌’ ಚಿತ್ರ ಇಂದು ಬಿಡುಗಡೆಯಾಗಿದೆ. ‘ತಾಂಡವ’ ಚಿತ್ರವನ್ನು ನಿರ್ದೇಶಿಸಿದ್ದ ಗೋಪಾಲ್ ಹಳೇಪಾಳ್ಯ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

ಅಪಘಾತದಿಂದ ಮೃತಪಟ್ಟ ಯುವಕನ ಅಸಹಜ ಸಾವಿನ ತನಿಖೆಗೆ ಮುಂದಾಗುವ ನಾಯಕ ಹೇಗೆ ಆಧ್ಯಾತ್ಮದತ್ತ ವಾಲುತ್ತಾನೆ ಎನ್ನುವ ಕಥೆಯ ಚಿತ್ರದಲ್ಲಿ ಧರ್ಮ, ಜ್ಯೋತಿ ರೈ, ಗಿರಿಜಾ ಲೋಕೇಶ್, ಗೋವಿಂದೇಗೌಡ(ಜಿ.ಜಿ), ರವಿಕಿಶೋರ್ ಮುಂತಾದವರಿದ್ದಾರೆ. ಸತೀಶ್ ಆರ್ಯನ್ ಸಂಗೀತ, ಪ್ರವೀಣ್ ಶೆಟ್ಟಿ ಛಾಯಾಗ್ರಹಣ, ಜೀವನ್ ಪ್ರಕಾಶ್ ಸಂಕಲನವಿದೆ.

ಸಂಜು:

ಪ್ರೀತಿಯ ಚೌಕಟ್ಟಿನ ಚಿತ್ರ ಸಂಜು ಇಂದು ಬಿಡುಗಡೆಯಾಗಿದೆ. ನಟ, ನಿರ್ದೇಶಕ ಯತಿರಾಜ್ ಆಕ್ಷನ್‌-ಕಟ್‌ ಹೇಳಿದ್ದಾರೆ. ಸಂತೋಷ್ ಡಿ.ಎಂ ನಿರ್ಮಾಣವಿದೆ.

ಪ್ರೇಮ ಕಥೆಗಳಿಗೆ ಕೊನೆಯಿಲ್ಲ, ಭಾವನಾತ್ಮಕ ಸಂಬಂಧಗಳಿಗೆ ಸಾವಿಲ್ಲ, ಪ್ರಕೃತಿಗೆ ಸೋಲದ ಮನಸ್ಸಿಲ್ಲ ಎಂಬ ಕಥಾಸಾರವನ್ನು ಹೊಂದಿರುವ ಚಿತ್ರ ಸಂಜು.  ಹದಿಹರೆಯದಲ್ಲಿ ಬಹಳಷ್ಟು ಏರಿಳಿತ, ಸೋಲು, ಹತಾಶೆ, ಅವಮಾನ ಸಹಜ. ಕೆಲವರು ಅದನ್ನು ಸುಲಭವಾಗಿ ಮೆಟ್ಟಿ ಮುಂದೆ ಸಾಗುತ್ತಾರೆ. ಇನ್ನೂ ಕೆಲವರು ತಮಗೆ ಎದುರಾಗುವ ಘಟನೆಗಳಿಗೆ ಅಂಜಿ ಎದೆಗುಂದುತ್ತಾರೆ.   ಎರಡು ಪ್ರಸಂಗವನ್ನು ಪ್ರೀತಿಯ ಚೌಕಟ್ಟಿನಲ್ಲಿ ಹೇಳಿದ್ದೇನೆ’ ಎನ್ನುತ್ತಾರೆ ನಿರ್ದೇಶಕ ಯತಿರಾಜ್‌.

ಚಿತ್ರ ಮಡಿಕೇರಿಯ ಮೂರ್ನಾಡುವಿನಲ್ಲಿ ಚಿತ್ರೀಕರಣಗೊಂಡಿದೆ. ಮನ್ವಿತ್‌ ಚಿತ್ರದ ನಾಯಕ. ಸಾತ್ವಿಕ ರಾವ್‌ ನಾಯಕಿ. ಸುಂದರಶ್ರೀ, ಸಂಗೀತ, ಬಲ ರಾಜವಾಡಿ, ಅಪೂರ್ವ ಮುಂತಾದವರು ನಟಿಸಿದ್ದಾರೆ.

ವಿದ್ಯಾ ನಾಗೇಶ್ ಛಾಯಾಗ್ರಹಣ, ವಿಜಯ್ ಹರಿತ್ಸ ಸಂಗೀತ, ಸಂಜೀವ ರೆಡ್ಡಿ ಸಂಕಲನ ಚಿತ್ರಕ್ಕಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!