ಸೆ.6ರಂದು ‘ಅನ್ನ’ ಬಿಡುಗಡೆ

ಸ್ಲಾಹುದ್ದೀನ್ ಎನ್‌ಎಸ್ ನಿರ್ದೇಶನ ಬಹು ನಿರೀಕ್ಷಿತ ‘ಅನ್ನ’ ಚಿತ್ರ  ಸೆಪ್ಟೆಂಬರ್ 6 ರಂದು ತೆರೆ ಕಾಣಲಿದೆ.

ಅನ್ನಕ್ಕಾಗಿ ಪರದಾಡುವುದರ ಕುರಿತ ಕಥೆ ಇದಾಗಿದೆ. ಗಗನ್ ಪಿಚ್ಚರ್ಸ್ ಬ್ಯಾನರ್ ನಲ್ಲಿ ಬಸವರಾಜ್ ಎಸ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ನಂದನ್ ಜಿಎಂ ಸೇರಿದಂತೆ ಪದ್ಮಶ್ರೀ ಸಿಆರ್, ಡಾ. ಭುವನ ಮೈಸೂರು, ಸಂಪತ್ ಮೈತ್ರೇಯ, ಬಾಲ ರಾಜವಾಡಿ, ರಮೇಶ್ ಎಸ್ಪಿ, ನಾಗಶ್ರೀ ಸಿ.ಎಂ. ತಾರಾ ಬಳಗದಲ್ಲಿದ್ದಾರೆ.

ಗುರುಸ್ವಾಮಿ ಟಿ ಸಂಕಲನ, ಬಿ.ಎನ್.ಸಿದ್ದು ಪ್ರಸನ್ನ ಸಂಭಾಷಣೆ, ಕಾತ್ಯಾಯಿನಿ ಯಶೋಮಿತ್ರ, ಹಾಗೂ ಡಾ. ಪ್ರಯಾಗ್ ಎಚ್.ಎಸ್. ವೇಷಭೂಷಣ,ಮಧು ಸುಗತ ಅವರ ಛಾಯಾಗ್ರಹಣವಿದೆ.

‘ಅನ್ನ’ ಚಿತ್ರದ ಟ್ರೈಲರ್ ಇತ್ತೀಚಿಗಷ್ಟೇ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿ ಸೌಂಡ್ ಮಾಡಿದ್ದು, ನೋಡುಗರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!