ರೇಪಿಸ್ಟ್ ಗಳ ಸುಟ್ಟು ಹಾಕಿ ಎಂದ ಧ್ರುವ ಸರ್ಜಾ

ಸ್ಯಾಂಡಲ್​ವುಡ್ ನಟ ಧ್ರುವ ಸರ್ಜಾ ಅವರು ಕೊಲ್ಕತ್ತಾದಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ವಿರುದ್ಧ ನಡೆದ ರೇಪ್ ಆಂಡ್ ಮರ್ಡರ್​ ವಿಚಾರದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಕ್ಸ್​ ಹ್ಯಾಂಡಲ್​​ನಲ್ಲಿ ವಿಡಿಯೋ ಹಂಚಿಕೊಂಡ ಧ್ರುವ ಸರ್ಜಾ ಅತ್ಯಾಚಾರಗಳ ವಿರುದ್ಧ ಗರಂ ಆಗಿ ಮಾತಾಡಿದ್ದಾರೆ.

‘ರಾಮ ಹುಟ್ಟಿದ ನಾಡಲಿ ಕೆಲ ದುಷ್ಕರ್ಮಿಗಳು​ ಮಾಡುವ ಕೃತ್ಯದಿಂದ ನಮ್ಮ ಭಾರತಕ್ಕೆ ಕೆಟ್ಟ ಹೆಸರು ಬರ್ತಿದೆ. ಹೆಣ್ಮಕ್ಕಳಿಗೆ ಮಾತ್ರ ಹೀಗಿರಿ, ಹಾಗಿರಿ, ಇದೇ ರೀತಿ ಬಟ್ಟೆ ಹಾಕಬೇಕು ಅಂತಾರೆ. ಹೆಣ್ಣು ಮಕ್ಕಳಿಗೆ ಈ ರೀತಿ ಹೇಳುವುದಕ್ಕು ಮುನ್ನ ಒಬ್ಬ ಹುಡುಗನನ್ನು ಪೋಷಕರು ಬೆಳೆಸುವಾಗ ಮೂರು ವಿಷಯಗಳನ್ನು ಕಡ್ಡಾಯವಾಗಿ ಹೇಳಿಕೊಡಬೇಕು. ಹೆಣ್ಮಕ್ಕಳನ್ನು ಹೇಗೆ ರಕ್ಷಿಸಬೇಕು, ಹೇಗೆ ಗೌರವಿಸಬೇಕು, ಹೇಗೆ ಬೆಂಬಲಿಸಬೇಕು ಎಂಬುದನ್ನು ಹೇಳಿಕೊಡಲೇಬೇಕು’ ಎಂದು ಧ್ರುವ ಸರ್ಜಾ ಹೇಳಿದ್ದಾರೆ.

‘ಇಂಥ ರೇಪಿಸ್ಟ್​ಗಳು ಸಿಕ್ಕಿ ಬೀಳಬೇಕು, ಕಾನೂನಿನ ಪ್ರಕಾರ ಶಿಕ್ಷೆ ಆಗಲಿ ಅಂತ ಎಂದು ನಾನು ಭಗವಂತನಲ್ಲಿ ಕೇಳಿಕೊಳ್ಳುತ್ತೇವೆ. ರೇಪಿಸ್ಟ್​​ ಗಳಿಗೆ ಎಂಥಾ ಶಿಕ್ಷೆ ಕೊಟ್ಟರೂ ಸಮಾಧಾನ ಆಗಲ್ಲ. ಇಂಥವರನ್ನು ನಡುರಸ್ತೆಯಲ್ಲಿ ನಿಲ್ಲಿಸಿ ಸುಟ್ಟುಹಾಕಿದರೂ ಸಮಾಧಾನ ಆಗಲ್ಲ. ಆ ಭಗವಂತ ಇಂಥವರಿಗೆ ಒಳ್ಳೆಯದು ಮಾಡದೇ ಇರಲಿ ಅಂತ ಮನಸಾರೆ ಕೇಳಿಕೊಳ್ಳುತ್ತೇನೆ’ ಎಂದಿದ್ದಾರೆ.

‘ನನಗೂ ಹೆಣ್ಣು ಮಗಳು ಇದ್ದಾಳೆ. ಯಾರಿಗೋ ಅನ್ಯಾಯ ಆಗಿದೆ ಎಂದಾಗ ಅವರ ಜೊತೆ ನಾವು ಇರಬೇಕು. ದಯವಿಟ್ಟು ಎಲ್ಲರು ಈ ಬಗ್ಗೆ ಧ್ವನಿಯೆತ್ತಿ ಮಾತಾಡಬೇಕು. ಎಲ್ಲರೂ ನ್ಯಾಯ ಕೇಳೋಣ. ಭಾರತವನ್ನು ಬದಲಾಯಿಸಬೇಕಿದೆ. ಈ ವಿಚಾರಕ್ಕೆ ನಾವೆಲ್ಲರೂ ಒಂದಾಗಬೇಕು’ ಎಂದು ಧ್ರುವ ಸರ್ಜಾ ವಿಡಿಯೋ ಮೂಲಕ ಹೇಳಿದ್ದಾರೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!