‘ಹೆಬ್ಬುಲಿ’ ಆಗಸ್ಟ್ 2ರಂದು ಮರು ಬಿಡುಗಡೆ

ಸುದೀಪ್ ನಟನೆಯ ಹೆಬ್ಬುಲಿ ಚಿತ್ರ ಆಗಸ್ಟ್ 2 ರಂದು ಮರುಬಿಡುಗಡೆಯಾಗುತ್ತಿದೆ.

ಕೃಷ್ಣ ನಿರ್ದೇಶಿಸಿ ಎಸ್‌ಆರ್‌ವಿ ಪ್ರೊಡಕ್ಷನ್ಸ್ ಮತ್ತು ಉಮಾಪತಿ ಫಿಲ್ಮ್ಸ್ ನಿರ್ಮಿಸಿದ, ಆಕ್ಷನ್-ಪ್ಯಾಕ್ಡ್ ಹೆಬ್ಬುಲಿ ಸಿನಿಮಾ ಮೂಲಕ ಅಮಲಾ ಪೌಲ್ ಸ್ಯಾಂಡಲ್ ವುಡ್ ಪ್ರವೇಶಿಸಿದ್ದರು. ಸಿನಿಮಾದಲ್ಲಿ ಕ್ರೇಜಿ ಸ್ಟಾರ್ ವಿ ರವಿಚಂದ್ರನ್ ವಿಶೇಷ ಪಾತ್ರದಲ್ಲಿ ನಟಿಸಿದ್ದರು. 2017 ರಲ್ಲಿ ಸಿನಿಮಾ ರಿಲೀಸ್ ಆಗಿತ್ತು.

ಹೆಬ್ಬುಲಿಯಲ್ಲಿ ತನ್ನ ಸಹೋದರನ ಹತ್ಯೆಗೆ ಸೇಡು ತೀರಿಸಿಕೊಳ್ಳುವ ಯೋಧನ  ಪಾತ್ರದಲ್ಲಿ ಸುದೀಪ್ ಕಾಣಿಸಿಕೊಂಡಿದ್ದರು. ಯೋಧನೊಬ್ಬ ತನ್ನ ಅಣ್ಣನ ಸಾವಿಗೆ ಹೇಗೆ ಸೇಡು ತೀರಿಸಿಕೊಳ್ಳುತ್ತಾನೆ ಎಂಬ ಕಥೆ ಈ ಚಿತ್ರದಲ್ಲಿತ್ತು. ಜೊತೆಗೆ ವೈದ್ಯಕೀಯ ಲೋಕದ ಮಾಫಿಯಾ ಬಗ್ಗೆಯೂ ಈ ಚಿತ್ರದಲ್ಲಿ ಬೆಳಕು ಚೆಲ್ಲಲಾಗಿತ್ತು. ಈ ಚಿತ್ರ ಯಶಸ್ವಿಯಾಗಿ ಹಿಂದಿ ಮತ್ತು ತಮಿಳಿಗೂ ಡಬ್‍ ಆಗಿ ಬಿಡುಗಡೆಯಾಗಿತ್ತು. ಚಿತ್ರದಲ್ಲಿ  ಪಿ. ರವಿಶಂಕರ್, ಕಬೀರ್ ದುಹಾನ್ ಸಿಂಗ್, ರವಿಕಿಶನ್‍ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು.

ಸೂರ್ಯ ಫಿಲಂಸ್‌ನಿಂದ ವಿತರಿಸಲ್ಪಟ್ಟ ಹೆಬ್ಬುಲಿಯು ಬೆಂಗಳೂರಿನ ಪ್ರಮುಖ ಥಿಯೇಟರ್‌ಗಳ ಮರು-ಬಿಡುಗಡೆಗೆ ಸಿದ್ಧವಾಗಿದೆ. ಇತ್ತೀಚಿನ ತಿಂಗಳುಗಳಲ್ಲಿ ಪುನೀತ್‍ ರಾಜಕುಮಾರ್, ದರ್ಶನ್‍, ಧ್ರುವ ಸರ್ಜಾ, ಉಪೇಂದ್ರ, ಯಶ್‍ ಮುಂತಾದವರ ಚಿತ್ರಗಳು ಮರುಬಿಡುಗಡೆಯಾಗಿವೆ. ಸುದೀಪ್‍ ಅಭಿನಯದ ಯಾವೊಂದು ಚಿತ್ರ  ಬಿಡುಗಡೆಯಾಗಿರಲಿಲ್ಲ. ಚಿತ್ರಕ್ಕೆ ಯಾವ ರೀತಿ ಪ್ರತಿಕ್ರಿಯೆ ಸಿಗುತ್ತದೆ ಎಂದು ನೋಡಬೇಕಿದೆ.

ಸುದೀಪ್‍ ಅಭಿನಯದ ‘ಮ್ಯಾಕ್ಸ್’ ಚಿತ್ರ ಬಿಡುಗಡೆಗೆ ಇನ್ನೂ3-4 ತಿಂಗಳುಗಳು ಬೇಕು ಎಂದು ಹೇಳಲಾಗುತ್ತಿದೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!