ನಿರ್ದೇಶನ: ಅಂಬರೀಶ್
ತಾರಾ ಬಳಗ: ಅಜಯ್ ಪೃಥ್ವಿ, ರಚನಾ ಇಂದರ್, ರವಿಶಂಕರ್, ಕಾಕ್ರೋಚ್ ಸುಧಿ ಇತರರು
ರೇಟಿಂಗ್: 3. 5/5
ಮಧ್ಯಮ ವರ್ಗದ ಬದುಕಿಗೆ ಸಾಲದ ಬಾಧೆ, ಅನ್ಯಾಯ ಎದುರಾದಾಗ ಯಾವ ರೀತಿ ಪರಿಸ್ಥಿತಿ ಉಂಟಾಗಬಹುದು ಎನ್ನುವುದನ್ನು ತೆರೆಯ ಮುಂದೆ ಇಟ್ಟಿರುವ ಚಿತ್ರ ‘ ನಾಟ್ ಔಟ್ ‘.
ನಾಯಕ ಅಜಯ್ ಚಿತ್ರದಲ್ಲಿ ಅಂಬುಲೆನ್ಸ್ ಚಾಲಕ. ಅಂಬುಲೆನ್ಸ್ ತೆಗೆದುಕೊಳ್ಳಲು ರೌಡಿ ಫೈನಾನ್ಸಿಯರ್ ಬಳಿ ಸಾಲ ಮಾಡುತ್ತಾನೆ. ಸಾಲದ ಜೊತೆಗೆ ಅವನಿಗೆ ಮುಂದೆ ಬೆದರಿಕೆಗಳು ಬರುತ್ತವೆ. ಮುಂದೆ ನಾಯಕನ ಬದುಕಿನಲ್ಲಿ ಬರುವ ಟರ್ನಿಂಗ್ ಪಾಯಿಂಟ್ ಗೆ ಸಿನಿಮಾ ನೋಡಬೇಕು.
ಅಜಯ್ ಪ್ರಥ್ವಿ ಪಾತ್ರಕ್ಕೆ ನ್ಯಾಯ ಸಲ್ಲಿಸುವ ಯತ್ನ ಮಾಡಿದ್ದಾರೆ. ಕಾಕ್ರೋಚ್ ಸುಧಿ ನಗೆ ಉಕ್ಕಿಸುವ ಯತ್ನ ಮಾಡಿದ್ದಾರೆ. ರವಿಶಂಕರ್ ಆರ್ಭಟ ಗಮನ ಸೆಳೆಯುತ್ತದೆ.
ಸಣ್ಣಪುಟ್ಟ ಕೊರತೆಯ ನಡುವೆಯೂ ಮಾನವೀಯತೆಯ ಸ್ಪರ್ಶ ಇರುವ ಚಿತ್ರ ಪ್ರೇಕ್ಷಕರಿಗೆ ಓಕೆ ಅನಿಸುತ್ತದೆ.
Be the first to comment