ಬಿಡುಗಡೆಗೆ ಸಿದ್ಧವಾಗಿದೆ ‘ಕಡಲೂರ ಕಣ್ಮಣಿ’

ಸಿಟಿಯ ಹುಡುಗ, ಕಡಲ ತೀರದ ಹುಡುಗಿಯ ಪ್ರೇಮ ಕಥೆಯ ‘ಕಡಲೂರ ಕಣ್ಮಣಿ’ ಚಲನಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.

ರಾಮ್ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣಗೊಂಡ ಚಿತ್ರದಲ್ಲಿ ಹೀರೋ ಆಗಿ ಶಿರಸಿ ಮೂಲದ ಅರ್ಜುನ್‌ ನಗರ್ಕರ್‌ ಎಂಟ್ರಿ ಕೊಟ್ಟಿದ್ದಾರೆ. ನಿಶಾ ಯಾಲಿನಿ ಈ ಸಿನಿಮಾದಲ್ಲಿ ಅಂಜು ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಯುವ ಪ್ರತಿಭೆ ರಾಮ್ ಪ್ರಸಾದ್ ಹುಣಸೂರ ನಿರ್ದೇಶನದಲ್ಲಿ ಚಲನಚಿತ್ರ ಮೂಡಿ ಬಂದಿದೆ. ಚಿತ್ರದ  ನಿರ್ಮಾಪಕರು ಕೊಳ ಶೈಲೇಶ್ ಆರ್ ಪೂಜಾರ್, ಬಸವರಾಜ್ ಗಚ್ಚಿ ಮತ್ತು ಸಹ ನಿರ್ಮಾಪಕರು ವಿನೋದ್ ರಾಮ್, ಹೊಳೆನರಸಿಪುರ ಮತ್ತು ಮಹೇಶ್ ಕುಮಾರ್ ಎಂ. ನಿರ್ದೇಶಕರಾದ ರಾಮ್ ಪ್ರಸಾದ್ ಅವರು ಹಲವು ವಿಭಾಗಗಳಲ್ಲಿ ಕೆಲಸ ಮಾಡಿದ್ದಾರೆ.

‘ಕಡಲೂರ ಕಣ್ಮಣಿ’ ಅಂದರೆ ವಜ್ರ ಎಂದೂ ಅರ್ಥ. ಚಿತ್ರಕಥೆ ಯುವ ಮನಸುಗಳ ಪ್ರೀತಿ ಪ್ರೇಮದ ಮೇಲೆ ಸಾಗುತ್ತದೆ. ಚಿತ್ರದ ಚಿತ್ರಿಕರಣವನ್ನು ಉಡುಪಿ, ಮಂಗಳೂರು ಹೊನ್ನಾವರ, ಮಂಕಿ, ಮುರುಡೇಶ್ವರ ಸುತ್ತಮುತ್ತ ರಮಣೀಯ ಲೊಕೇಶನ್ ಗಳಲ್ಲಿ ಕ್ಯಾಮೆರಾಮೆನ್ ಮನೋಹರ್, ರವಿರಾಮ್ ಸುಂದರವಾಗಿ ಚಿತ್ರೀಕರಿಸಿದ್ದಾರೆ.

ಬಂಡೆ ಚಂದ್ರು  ಸಾಹಸ ಚಿತ್ರಕ್ಕಿದೆ. ನಿಶಿತ್ ಪೂಜಾರಿ ಸಂಕಲನದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಚಿತ್ರವನ್ನು ಡಿಎಸ್‌ಕೆ ಸಿನಿಮಾ’ಸ್ ಸಂಸ್ಥೆಯ ಸುನೀಲ್ ಕುಂಬಾರ್  ವಿಶಾಲ ಕರ್ನಾಟಕಕ್ಕೆ ಹಂಚಿಕೆ ಮಾಡುತ್ತಿದ್ದಾರೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!