Meena: ಧನುಷ್-ಮೀನಾ ಮದುವೆ ವದಂತಿಗೆ ಬ್ರೇಕ್

ನಟ ಧನುಷ್ ಜೊತೆ ಮದುವೆ ವದಂತಿ ಬಗ್ಗೆ ಮೌನ ಮುರಿದಿರುವ ಬಹುಭಾಷಾ ನಟಿ ಮೀನಾ ಅವರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ನನ್ನ ಗಂಡನ ಅಗಲಿಕೆಯ ದುಃಖವನ್ನು ಇನ್ನೂ ಮರೆಯಲು ಸಾಧ್ಯವಾಗಿಲ್ಲ.ಇಂದಿಗೂ ಅವರು ಇಲ್ಲ ಎಂದು ನಂಬುವುದಿಲ್ಲ. ಇದರೊಂದಿಗೆ ಈ ವದಂತಿ ಎಲ್ಲಿಂದ ಬಂತು ಎಂದು ನನಗೆ ತಿಳಿದಿಲ್ಲ ಎಂದಿದ್ದಾರೆ.

ಸದ್ಯ ವೃತ್ತಿ ಮತ್ತು ನಟನೆಯತ್ತ ಗಮನ ಹರಿಸುತ್ತಿದ್ದೇನೆ. ಒಳ್ಳೆಯ ಚಿತ್ರಗಳು ಮತ್ತು ಕಥೆಗಾಗಿ ಹುಡುಕುತ್ತಿದ್ದೇನೆ. ಮಗಳಿಗೆ ಒಳ್ಳೆಯ ಭವಿಷ್ಯವನ್ನು ಕೊಡಬೇಕೆಂದು ಬಯಸುತ್ತೇನೆ. ಮಗಳೇ ನನ್ನ ಜೀವನದ ಪ್ರಮುಖ ಭಾಗವೆಂದು ಪರಿಗಣಿಸಿರುವುದಾಗಿ ಮೀನಾ ಹೇಳಿದ್ದಾರೆ.

ನಟ ಧನುಷ್ ಮತ್ತು ನಟಿ ಮೀನಾ ಮದುವೆಯಾಗಲಿದ್ದಾರೆ ಎಂಬ ವದಂತಿಗಳು ಕಳೆದ ಕೆಲವು ದಿನಗಳಿಂದ ಹರಡಿತ್ತು. ಇಬ್ಬರೂ ಎರಡನೇ ಬಾರಿಗೆ ಮದುವೆಯಾಗಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಮೀನಾ ಕುಟುಂಬಸ್ಥರು ಅವರಿಗೆ ಮತ್ತೆ ಮದುವೆ ಮಾಡಲು ಮುಂದಾಗಿದ್ದಾರೆ ಎಂಬ ಸುದ್ದಿ ಈ ಹಿಂದೆ ಹಬ್ಬಿತ್ತು.

ಮೀನಾ ಅವರು ವಿದ್ಯಾಸಾಗರ ಎಂಬುವರನ್ನು ವಿವಾಹವಾಗಿದ್ದರು. ಆದರೆ ವಿದ್ಯಾಸಾಗರ ಶ್ವಾಸಕೋಶದ ಸೋಂಕಿನಿಂದ ಕಳೆದ ವರ್ಷ ಮೃತಪಟ್ಟಿದ್ದರು. ದಂಪತಿಗೆ ನೈನಿಕಾ ಎಂಬ ಮಗಳಿದ್ದಾಳೆ.

ಪತಿ ತೀರಿಕೊಂಡ ಕೂಡಲೇ ಮೀನಾ ಅವರ ಎರಡನೇ ಮದುವೆಯ ಸುದ್ದಿ ಮುನ್ನೆಲೆಗೆ ಬರತೊಡಗಿತು. ಈ ನಡುವೆ ಧನುಷ್ ಐಶ್ವರ್ಯಾ ರಜನಿಕಾಂತ್ ಅವರಿಗೆ ವಿಚ್ಛೇದನ ನೀಡಿದ ಪ್ರಕರಣವೂ ಮುನ್ನೆಲೆಗೆ ಬಂದಿತ್ತು. ಈ ವರ್ಷ ಜೂನ್-ಜುಲೈನಲ್ಲಿ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ಹೇಳಲಾಗುತ್ತಿತ್ತು.

ಈಗ ಮದುವೆ ವಿಚಾರವಾಗಿ ನಟಿ ಮೀನಾ ಮೌನ ಮುರಿದು ವದಂತಿಗೆ ಉತ್ತರ ನೀಡಿದ್ದಾರೆ.
——

Be the first to comment

Leave a Reply

Your email address will not be published. Required fields are marked *

Translate »
error: Content is protected !!